ಮಾತೆಯ ಮಮತೆಯ ಕರೆ : ಸಿಗಂದೂರು ಚೌಡೇಶ್ವರೀದೇವಿಯ ರಥೋತ್ಸವ

ಶ್ರೀಸಿಗಂದೂರುಚೌಡೇಶ್ವರಿ! ‘ನೀನೇ ಎಲ್ಲ’ ಎನ್ನುವ ಭಾವದಲ್ಲಿ ಬೇಡಿ ಬರುವ ಭಕುತರಿಗೆ ಎಂದೂ ‘ಇಲ್ಲ’ ಎನ್ನದ ಕರುಣಾಕರೀ. ಹಾಗೆಯೇ ‘ನೀನೇನಲ್ಲ’ ಎನ್ನುವ ದುರುಳರ ದುರಹಂಕಾರವನ್ನು ‘ಹುಂ’ಕಾರ ಮಾತ್ರದಿಂದಲೇ ಸಂಹರಿಸುವ ದುಷ್ಟಭಯಂಕರಿಯೂ ಹೌದು.   ಮಾತೆಯ ಶಕ್ತಿಯೇ ಅಂತಹದ್ದು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಯ ಹಿನ್ನೀರ ಪ್ರದೇಶದ ಮೂಲೆಯಲ್ಲಿರುವ, ಗೂಗಲ್ಲಿಗೂ ಸಿಗದ ಸಿಗಂದೂರಿನ ಕಾನನದಲ್ಲಿ ತಾನು ಕುಳಿತು, ದೇಶದ ಮೂಲೆ-ಮೂಲೆಯಿಂದ ಸಾಮಾನ್ಯ ಆದ್ಮಿ-ಉದ್ಯಮಿ, ಸಂತ-ಶ್ರೀಮಂತ ಮುಂತಾದ ಯಾವುದೇ ಭೇದವಿಲ್ಲದೇ, ಲಕ್ಷಾಂತರ ಜನರನ್ನು ತನ್ನಲ್ಲಿಗೆ ಕರೆಸಿಕೊಳ್ಳುತ್ತಿರುವುದು ಆಕೆಯ ಪ್ರಭಾವವನ್ನು […]

Continue Reading

!!ಹೇಳಿ!! ತನ್ನಷ್ಟಕ್ಕೆ ತಾನು ಸಮಾಜೋದ್ಧಾರವನ್ನು ಮಾಡುತ್ತಿದ್ದ ನಮ್ಮ ಶ್ರೀರಾಮಚಂದ್ರಾಪುರ ಪೀಠದ ಮೇಲೆ ಆಪಾದನೆ ಹಾಕಿದಿರಿ!ಯಾಕೆ?

ಸದಾ ವ್ಯಷ್ಟಿಯ, ಸಮಷ್ಟಿಯ ಒಳಿತನ್ನಷ್ಟೇ ಬಯಸುವ, ಮೊದಲ ಪ್ರಜೆಯಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಸಮಾಭಾವದಿಂದ- ವಾತ್ಸಲ್ಯದಿಂದ “ಒಳಿತಾಗಲಿ” ಎಂದು ಹರಸುವ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲೆ ಅಂಥ ಹೀನಾಯವಾದ, ಕಲ್ಪಿಸಲೂ ಹೇಸುವ, ಅಲ್ಲದ, ನಿಲ್ಲದ, ದಾನವರಿಂದಲೂ ಆಗದ ಮಿಥ್ಯಾಪವಾದ ಹಾಕಿದಿರಿ! ಯಾಕೆ?   ಸಮಾಜೋದ್ಧರಣವೇ ಉಸಿರಾಗಿರುವ ಆ ಶಕ್ತಿಯನ್ನು ನೋಯಿಸಿದ “ದುರ್ಗುಣಿ- ಗುರುದ್ರೋಹಿಗಳೇ”… ಏನು ಸಾಧಿಸಿದಿರಿ? ದುಷ್ಟರಾಗಿಬಿಟ್ಟಿರಿ! ಯಾಕೆ?   ಯಾವುದರಲ್ಲೂ ಗೆಲ್ಲದೇ ಹೆಜ್ಜೆಹೆಜ್ಜೆಗೂ ಸೋಲು ಕಂಡಾಗಲೂ ಅಂತರಾತ್ಮ ಎಚ್ಚರಿಸಲಿಲ್ಲವೇ! ಯಾಕೆ?   ಅದೆಷ್ಟು ಷಡ್ಯಂತ್ರಗಳು!ಕುತಂತ್ರಗಳು!! […]

Continue Reading

ಶಂಕರ ನಮನದ ಉದ್ದೇಶ ಶಾಂಕರ ಪೀಠವನ್ನು, ಅದ್ವೈತಿಗಳನ್ನು ಅವಮಾನಿಸುವುದಾಗಿತ್ತೇ ???

ಸಿರಸಿ ಸಮೀಪದ ಸೋಂದಾ ಸ್ವರ್ಣವಳ್ಳಿಯಲ್ಲಿ ನಡೆದ ‘ಶಂಕರ ನಮನ’ದ ಮುಖ್ಯ ಉದ್ದೇಶ ಶಾಂಕರ ಪೀಠವನ್ನು ಅವಮಾನಿಸುವುದಾಗಿತ್ತೇ ಎಂಬ ಪ್ರಶ್ನೆ , ಅನುಮಾನವನ್ನು ಆ ಸಮಾರಂಭದ ಮಾಧ್ಯಮ ವರದಿಗಳು ಶಾಂಕರ ಅನುಯಾಯಿ ಗಳಲ್ಲಿ ಹುಟ್ಟು ಹಾಕಿದೆ .. ಕಾರಣ ಇಷ್ಟೇ – ಮಾಧ್ಯಮ ವರದಿಗಳ ಪ್ರಕಾರ ಶಂಕರ ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಯತಿಗಳು ಮಾತನಾಡುತ್ತ ಶ್ರೀ ಶಂಕರರೇ ಸ್ಥಾಪಿಸಿದ ಅವಿಚ್ಛಿನ್ನ ಪರಂಪರೆ ಹೊಂದಿರುವ (ಹೆಸರು ಹೇಳದೆಯೇ)”ಶ್ರೀ ರಾಮಚಂದ್ರಾಪುರ ಮಠ ಪತನದತ್ತ ಹೊರಟಿದೆ” ಎಂಬ ಮಾತನ್ನು ಆಡಿರುವುದು […]

Continue Reading

ವಿಧಿಮುನಿಯೆ ಆರನಾವಂಕದಲಿ ಬರಿಸದು!

ಸ್ವರ್ಣವಲ್ಲೀ ಮಠದಲ್ಲಿ ನಿನ್ನೆ ಒಂದು ಕಾರ್ಯಕ್ರಮವಿತ್ತು.. “ಶಂಕರ ನಮನ” ಮತ್ತು “ಶಂಕರ ಭಾಷ್ಯಮೃತ ವಾಹಿನೀ ಪ್ರವಚನಮಾಲಿಕೆಗಳ ಸಮಾರೋಪ” – ಬಹಳ ಗೌರವಯುತವಾದ ಕಾರ್ಯಕ್ರಮಗಳು. ಯತಿತ್ರಯರ ಸಾನ್ನಿಧ್ಯ ಕಾರ್ಯಕ್ರಮದ ಮೆರುಗನ್ನು ಇನ್ನೂ ಹೆಚ್ಚಿಸಬೇಕಿತ್ತು. ನಾಲ್ಕನೆಯ ಶಂಕರಾಚಾರ್ಯರ ಅಧಿಕೃತ ರಾಯಭಾರಿ ಬೇರೆ ಉಪಸ್ಥಿತರಾಗಿದ್ದರು. ಆಮೇಲೆ? ಅಲ್ಲೇ ಇರೋದು.. ರಾಮಚಂದ್ರಾಪುರಮಠದ ಮೇಲೆ, ಶ್ರೀಗಳ ಮೇಲೆ ವ್ಯವಸ್ಥಿತವಾದ ಆಕ್ರಮಣಗಳನ್ನು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ನಡೆಸಿದ್ದ, ನಡೆಸುತ್ತಿರುವ ಪ್ರಮುಖರೆಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸಬಹುದು, ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲೇ ಬೇಕೆ? ರಾಮಚಂದ್ರಾಪುರ ಮಠದ […]

Continue Reading

ಮಕರಸಂಕ್ರಾಂತಿ :ನೀಲಕಂಠ ಯಾಜೀ, ಬೈಲೂರು

ಸಂಕ್ರಾಂತಿ ಎಂದರೇನು? ‘ಗ್ರಹಾಣಾಂ ಪ್ರಾಗ್ರಾಶಿತಃ ಅಪರರಾಶೌ ಸಂಕ್ರಮಣಂ ಸಂಕ್ರಾಂತಿಃ ಇತಿ.’ ಅಂದರೆ ಗ್ರಹಗಳು ತಾವಿರುವ ರಾಶಿಯನ್ನು ಬಿಟ್ಟು ಮುಂದಿನ ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎನ್ನುತ್ತಾರೆ. ವಿಶಾಲವಾದ ಆಕಾಶಮಂಡಲದಲ್ಲಿ ತಮ್ಮ ತಮ್ಮ ಕಕ್ಷೆಯಲ್ಲಿ ಚಲಿಸುವ ಗ್ರಹಗಳನ್ನು ಗಣಿತೋಪಕ್ರಮಕ್ಕಾಗಿ ಮೇಷಾದಿ ಹನ್ನೆರಡು ರಾಶಿಗಳಲ್ಲಿ, ಅಶ್ವಿನ್ಯಾದಿ ಇಪ್ಪತ್ತೇಳು ನಕ್ಷತ್ರಸ್ಥಿತರನ್ನಾಗಿ ಗುರುತಿಸುತ್ತಾರೆ. ಒಂದು ರಾಶಿಯಿಂದ ಇನ್ನೊಂದು ರಾಶಿ ಪ್ರವೇಶವೇ ಸಂಕ್ರಾಂತಿ.   ಇದನ್ನು ಎಲ್ಲ ಗ್ರಹಗಳಿಗೆ ಹೇಳಲ್ಪಟ್ಟರೂ ನಾವು ಪರಿಗಣಿಸುವದು ರವಿಯ ಸಂಕ್ರಮಣಗಳನ್ನು ಮಾತ್ರ. ಕಾರಣ ಇಷ್ಟೆ ಜಗತ್ಪ್ರಕಾಶಕ ಸೂರ್ಯನ ಅಪರ ರಾಶಿಪ್ರವೇಶ […]

Continue Reading

ವಿಶ್ವ~ರಾಮ~ಸಂವಾದ (ಭಾಗ-೨) : ಉಂಡೆಮನೆ ವಿಶ್ವೇಶ್ವರ ಭಟ್

                    6   ರಾಮ  ಗೋಸಂರಕ್ಷಣೆ ನಮ್ಮ ದೇಶಕ್ಕೆ ನೀನು ಕೊಟ್ಟ ವರ. ಗೋಹತ್ಯೆ ನಮಗೆ ನಾವೇ ಕೊಟ್ಟುಕೊಂಡ ಮಹಾಶಾಪ. ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಸಕ್ರಮ ಗೋಹತ್ಯಾಚಾರಗಳಿಂದಾಗಿ ದೇಶವೇ ಕಸಾಯಿಖಾನೆಯೋ ಎಂಬಂತಾಗಿದೆ. ಕೈಕಟ್ಟಿ ಕುಳಿತುಕೊಳ್ಳಲರಿಯದ ಒಂದಷ್ಟು ಯುವಪಡೆ ತಡೆಯಲು ಹೋದರೆ ಅವರಿಗೇ ಶಿಕ್ಷೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಶಾಂತಿ ಸಾಮರಸ್ಯ ಕಾಪಾಡಲು ಹುಟ್ಟಿದ ಯೋಜನೆ ‘ಗೋಸಂಜೀವಿನಿ’. ಸರ್ವರ ನೆರವಿನಿಂದ ಕಸಾಯಿಖಾನೆಗೆ ಹೋಗುವ ದೇಸೀ ಹಸುಗಳನ್ನು […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೭ : ಮಹೇಶ ಎಳ್ಯಡ್ಕ

ಅಶೋಕೆಯಲ್ಲಿ ಹದಿನೈದು ಕೋಟಿ ಅಂದಾಜಿನ ಮೂಲಮಠದ ಪ್ರಥಮ ಹಂತದ ಕಾಮಗಾರಿಯು ಭರದಿಂದ ಆರಂಭಗೊಂಡಿತು. ಶಾಸನತಂತ್ರದ ಹೊಸತನದಲ್ಲಿ ಈ ಬಾರಿ ಮೂಲಮಠ ನಿರ್ಮಾಣ ತಂಡವೂ ಹೊಸದಾಗಿದೆ. ಹಳಬರ ಅನುಭವದೊಂದಿಗೆ, ಹೊಸಬರ ಹುರುಪಿನೊಂದಿಗೆ ವೇಗದಿಂದ ನಡೆಯುತ್ತಿದೆ ಮೂಲಮಠ ನಿರ್ಮಾಣ ಕಾರ್ಯ. “ಎಲ್ಲರೂ ಪ್ರಾಮಾಣಿಕ ಸೇವೆ ಸಲ್ಲಿಸಿ, ಧುಮುಕಿ ಕೆಲಸ ಮಾಡಿ, ರಾಮಾನುಗ್ರಹವಿದೆ” ಎಂದು ಶ್ರೀಸಂಸ್ಥಾನದವರು ಆಶೀರ್ವದಿಸಿದ್ದಾರೆ. ಅಂಡಾಕಾರದ ವೃಷಭಾಯ: ಮೂಲಮಠದಲ್ಲಿ ತಲೆಯೆತ್ತಿರುವ ಮಲ್ಲಿಕಾರ್ಜುನ ದೇವಾಲಯವು ಇಡಿಯ ಪ್ರಪಂಚದಲ್ಲೇ ಅದ್ವೈತ, ಅತಿವಿಶಿಷ್ಟ. ಸಾಮಾನ್ಯವಾಗಿ ದೇವಾಲಯದ ಅಡಿಪಾಯವು ಚೌಕ ಅಥವಾ ಆಯತಾಕಾರದಲ್ಲಿರುತ್ತದೆ. ಕೆಲವು […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೬ : ಮಹೇಶ ಎಳ್ಯಡ್ಕ

ಅಶೋಕೆ ಮೂಲಮಠ ಕ್ಷೇತ್ರಕ್ಕೆ ಶ್ರೀಗುರುಗಳು ಭೇಟಿಯಿತ್ತು, ಮುಂದೆ ಆ ಸ್ಥಳದಲ್ಲಿ ತಲೆಯೆತ್ತಲಿರುವ ಭವ್ಯ ಮಂದಿರಗಳ ಚಿಂತನೆ ಕೈಗೊಂಡರು. ಮೊದಲ ಹಂತವಾಗಿ ಮಲ್ಲಿಕಾರ್ಜುನ ಗುಡಿ, ಶ್ರೀರಾಮದೇವಾಲಯ, ಗುರುಭವನ ಹಾಗೂ ಶಿಷ್ಯ-ಭಕ್ತರಿಗೆ ವಸತಿಗೃಹಗಳು ಇದಿಷ್ಟನ್ನು ಅನುಸ್ಥಾಪಿಸುವುದಾಗಿ ಸಂಕಲ್ಪಿಸಿದರು.   ಮೊದಲ ಹಂತದ ನೀಲನಕಾಶೆಯು ಗುರುಗಳ ಮನದಲ್ಲಿದ್ದುದನ್ನು ನುರಿತ ವಾಸ್ತುತಜ್ಞರು, ಪ್ರಸಿದ್ಧ ಜ್ಯೋತಿಷಿಗಳು, ಹೆಸರಾಂತ ಇಂಜಿನಿಯರುಗಳು ಸೇರಿ ಗೆರೆಗಳಿಗಿಳಿಸಿದರು. ಮೊದಲ ಹಂತಕ್ಕೆ ಸುಮಾರು ಹದಿನೈದುಕೋಟಿ ರೂಪಾಯಿಗಳಷ್ಟು ಬೇಕಾದೀತು  ಎಂದು ಅಂದಾಜಿಸಲಾಯಿತು. ಸಮಿತಿಗಳು ರಚನೆಗೊಂಡವು. ಕಾರ್ಯಯೋಜನೆ ಸಿದ್ಧಗೊಂಡಿತು. ಆಗಬೇಕಾದ ಕಾರ್ಯಗಳು ಒಂದೊಂದೇ ಪಟ್ಟಿಮಾಡುತ್ತಾ […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೫ : ಮಹೇಶ ಎಳ್ಯಡ್ಕ

ಅಶೋಕೆಯ ಪುಣ್ಯಭೂಮಿಗೆ ಮೂವತ್ತಾರನೆಯ ಶಂಕರರು ಪಾದಬೆಳೆಸಿದಾಗ, ಮಹರ್ಷಿ ದೈವರಾತರ ಸುಪುತ್ರ ದೇವಶ್ರವಶರ್ಮರು ಅವರ ಪಿತೃವಾಕ್ಯದಂತೆ ಕಾಯುತ್ತಿದ್ದರು.  ಶ್ರೀಶ್ರೀಗಳವರನ್ನು ಆದರದಿಂದ ಸ್ವೀಕರಿಸಿ, ಷೋಡಷೋಪಚಾರಗೈದರು. ಜಗದ್ಗುರುಗಳ ಮನದಿಚ್ಛೆಯನ್ನು ಅದಾಗಲೇ ಅರಿತಿದ್ದರು. ದೇವಶ್ರವಶರ್ಮರ ತೀರ್ಥರೂಪರು ಹೇಳಿದುದರ ನೆನಪೇ ಅವರಿಗೆ ಪ್ರೇರೇಪಣೆ. “ಮಠವು ಸಂಪರ್ಕಿಸಿದಾಗ ಸ್ಥಳವನ್ನು ಕೊಡಬೇಕೆಂಬ” ಪಿತೃವಾಕ್ಯ ಪರಿಪಾಲನೆಯಂತೆ ಮಠದ ನಿರ್ಮಾಣಕ್ಕೆ ಉಚಿತವಾಗಿ ಭೂಮಿಯನ್ನು ಕೊಡುವುದಾಗಿ ನಿವೇದಿಸಿಕೊಂಡರು. ಇದು ಮೂಲಮಠದ ಕಥೆಯ ಪ್ರಥಮ ಮಹಾಸನ್ನಿವೇಶ.   ಸೂಜಿಮೊನೆಯಷ್ಟೂ ಜಾಗವಿಲ್ಲದ ಅಶೋಕೆಯೆಂಬ ಸ್ಥಳದಲ್ಲಿ, ಮಠಸ್ಥಾಪನೆಗೆ ಬೇಕಾದ ಸ್ಥಳವನ್ನು ಕೊಡುವೆನೆಂಬ ಅಮೃತವಾಕ್ಯವು ಶ್ರೀಪೀಠಕ್ಕೆ ಸಮರ್ಪಣೆಯಾಯಿತು. […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೪ : ಮಹೇಶ ಎಳ್ಯಡ್ಕ

ಮೂವತ್ತೈದನೆಯ ಪೀಠಾಚಾರ್ಯರಾದ  ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರು ತಮ್ಮ ಜೀವನಪರ್ಯಂತ ಮಠೋದ್ಧಾರಕಾರ್ಯದಲ್ಲಿ ಶ್ರಮಿಸಿದರು. ಅಪ್ಸರಕೊಂಡ, ತೀರ್ಥಹಳ್ಳಿ, ಪೆರಾಜೆ-ಮಾಣಿ ಮಠಗಳನ್ನು ಕಟ್ಟಿ ಬೆಳೆಸಿದರು.  ಧರ್ಮಶ್ರದ್ಧೆಯನ್ನು ಪುನರುತ್ಥಾನಗೈದರು. ಧ್ಯಾನಾಸಕ್ತರಾಗಿದ್ದಾಗಅಂತಃಸ್ಫುರಣೆಯೊಂದು ಅವರಿಗೆ ಹೀಗಂದಿತು,   ಅಶೋಕೇ ನಾಮಕೇ ಸ್ಥಾನೇ ಶಂಕರಾರ್ಯಸುನಿರ್ಮಿತೇ । ಮಠೇ ಗೋಕರ್ಣನಿಕಟೇ ಮಲ್ಲಿಕಾರ್ಜುನಶೋಭಿತೇ ॥   ‘ಗೋಕರ್ಣ ಬಳಿಯ ಅಶೋಕೆಯೆಂಬ ಮಲ್ಲಿಕಾರ್ಜುನನ ಪುಣ್ಯಸ್ಥಳದಲ್ಲಿ, ಶಂಕರರಿಂದ ನಿರ್ಮಿಸಲ್ಪಟ್ಟ ಮಠವಹುದು’ ಎಂಬುದಾಗಿ. ಇದು, ಸುಮಾರು ಐದಾರು ದಶಕದ ಹಿಂದಿನ ಕತೆ. ಶ್ರೀಶ್ರೀಗಳಿಗೆ ಈ ಬಗ್ಗೆ ಮುಂದಡಿಯಿಡಲು ಸಮಯ ಕೂಡಿಬಂದಿರಲಿಲ್ಲ. ಆದರೆ ಈ ಮಹತ್ಕಾರ್ಯವು ರಾಮಾನುಗ್ರಹಕ್ಕೆ […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೩ : ಮಹೇಶ ಎಳ್ಯಡ್ಕ

ಆಚಾರ್ಯ ಶಂಕರರಿಂದ ಪರಂಪರೆಯು ಆರಂಭಗೊಂಡಿತು. ಸುರೇಶ್ವರಾಚಾರ್ಯರ ಮೂಲಕ ವಿದ್ಯಾನಂದಾಚಾರ್ಯರು ಪ್ರಥಮ ಪೀಠಾಧಿಪತಿಗಳಾದರು. ವಿದ್ಯಾನಂದರ ತರುವಾಯ ಚಿದ್ಭೋದಭಾರತೀ ಶ್ರೀಗಳವರು, ಅವರ ಶಿಷ್ಯರು ನಿತ್ಯಾನಂದಭಾರತೀ ಶ್ರೀಗಳು, ಅವರ ಶಿಷ್ಯರು ನಿತ್ಯಬೋಧಘನೇಂದ್ರಭಾರತೀ ಶ್ರೀಗಳು ಹೀಗೇ ಸಾಗುತ್ತದೆ ಶಾಂಕರ ಪರಂಪರೆ.   ಹನ್ನೊಂದನೆಯ ಪೀಠಾಧಿಪತಿಗಳಾದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು (ಪರಂಪರೆಯ ಪ್ರಥಮ ರಾಘವೇಶ್ವರಭಾರತೀ ಶ್ರೀಗಳು, ಶಾ.ಶಕೆ 1386) ಯೋಗ್ಯ ವಟುವನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ತಮ್ಮ ಆರಾಧ್ಯದೈವ ಶ್ರೀರಾಮಚಂದ್ರನ ಹೆಸರನ್ನೇ ನಾಮಕರಣ ಮಾಡಿ ಯೋಗಪಟ್ಟವನ್ನು ಅನುಗ್ರಹಿಸುತ್ತಾರೆ. ಶ್ರೀಶ್ರೀರಾಮಚಂದ್ರಭಾರತೀ ಶ್ರೀಗಳ ಪ್ರೌಢಿಮೆ ಮತ್ತು ಧರ್ಮಬೋಧೆಗಳು ಕೆಳದಿ ಚೌಡಪ್ಪನಾಯಕನ […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೨ ; ಮಹೇಶ ಎಳ್ಯಡ್ಕ

ವರದಮುನಿಗಳಿಂದ ರಾಮಾದಿ ವಿಗ್ರಹವನ್ನು ಸ್ವೀಕರಿಸಿ, ಆಚಾರ್ಯ ಶಂಕರರು ತಮ್ಮ ಶಿಷ್ಯರೊಂದಿಗೆ ಗೋಕರ್ಣದಿಂದ ಪೂರ್ವಾಭಿಮುಖವಾಗಿ ಹೊರಟರು. ಪ್ರಶಾಂತ ಪರಿಸರವನ್ನು ತಲುಪಿದರು.   ಅರೆ! ಏನಾಶ್ಚರ್ಯ!   ಆಜನ್ಮ ವೈರತ್ವವಿರುವ ಹಾವು-ಕಪ್ಪೆ, ಜಿಂಕೆಮರಿ-ಹುಲಿ ಇತ್ಯಾದಿ ಪ್ರಾಣಿಗಳು ತಮ್ಮ ಸಹಜ ವೈರತ್ವ ಮರೆತು ಸಹಬಾಳ್ವೆಗೈಯುತ್ತಿದ್ದಾರೆ. ಆಚಾರ್ಯ ಶಂಕರರಿಗೆ ಇದು ವಿಶೇಷವೂ ಆಶ್ಚರ್ಯಕರವೂ ಆಗಿ ಕಂಡಿತು. ಧರ್ಮದ ಸಹಜಭೂಮಿಯಿದು. ಕರ್ಮಗಳು ಶಾಶ್ವತವಾಗಿ ಬೆಳೆಯಬೇಕಿರುವುದು ಇಂಥ ಸ್ಥಳದಲ್ಲಿಯೇ ಎಂದು ಆಚಾರ್ಯ ಶಂಕರರು ತಿಳಿದುಕೊಂಡರು.   ಆ ಪುಣ್ಯಭೂಮಿಯೇ – ಅಶೋಕೆ.   ಹೆಸರಿಗೆ ಅನ್ವರ್ಥವಾಗಿ […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೧ ; ಮಹೇಶ್ ಎಳ್ಯಡ್ಕ

  ಸುಮಾರು ಎಂಟನೆಯ ಶತಮಾನದಲ್ಲಿ ಭಾರತದಲ್ಲಿ ಪರಂಪರೆಯ ಬಗೆಗೆ ನಿರುತ್ಸಾಹ, ಅಂಧಶ್ರದ್ಧೆಗಳು ಮೇಳೈಸಿದ್ದವು. ಧರ್ಮದ ಬಗೆಗೆ ಜ್ಞಾನವು ಕಡಿಮೆಯಾಗುತ್ತಾ, ಇತರೇ ಧರ್ಮಗಳ ಪ್ರಭೆಯು ರಾರಾಜಿಸುತ್ತಿದ್ದವು. ಆ ಸಂದರ್ಭದಲ್ಲಿ ಮುದುಡಿ ಹೋಗುತ್ತಿದ್ದ ಸನಾತನ ಪರಂಪರೆಯನ್ನು ಮತ್ತೆ ಚಿಗುರಿಸಿದ ಮಹಾನ್ ಸಂತ – ಶ್ರೀಶಂಕರಾಚಾರ್ಯರು. ಶಂಕರಾಚಾರ್ಯರು ಅವತರಿಸಿದುದರಿಂದ ಏನಾಯಿತು ಎಂದು ತಿಳಿಯಬೇಕಾದರೆ, ಅವರು ಅವತರಿಸಿಲ್ಲದೇ ಇದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಒಂದು ಕ್ಷಣ ಯೋಚಿಸೋಣ. ಧರ್ಮದ ಬಗ್ಗೆ ತಿಳುವಳಿಕೆಯಿಲ್ಲದ ಜನಸಮೂಹವಿತ್ತು, ಅವೈದಿಕ ಮತಗಳ ಪ್ರಭೆ ಏರುತ್ತಿತ್ತು. ವೇದ-ಉಪನಿಷತ್ತುಗಳು ನಿರುಪಯುಕ್ತವಾಗುತ್ತಿತ್ತು. ಕ್ರಮೇಣ ಈ […]

Continue Reading

ಸೇವಾ ಅರ್ಘ್ಯವೆಂಬ ಯಜ್ಞದ ಸಮಿಧೆಗಳು : ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ, ಧರ್ಮತ್ತಡ್ಕ

ಯಜ್ಞ ಎಂಬುದು ಅತ್ಯಂತ ಪವಿತ್ರ ಕಾರ್ಯ‌. ಅದರಲ್ಲಿ ಉಪಯೋಗಿಸುವ ಸಮಿಧೆಗಳಿಗೂ ಅಷ್ಟೇ ಮಹತ್ತ್ವವಿದೆ. ಎಲ್ಲ ಸೌದೆಗಳನ್ನೂ ಯಜ್ಞಕ್ಕೆ ಬಳಸಲಾಗುವುದಿಲ್ಲ. ಅರಳಿ, ಹಲಸು ಪಾಲಾಶಗಳಂತಹ ಪವಿತ್ರ ವೃಕ್ಷಗಳ ರೆಂಬೆಕೊಂಬೆಗಳಿಗೆ ಮಾತ್ರ ಅಲ್ಲಿ ಸ್ಥಾನ.   ಆದರೆ ಈ ಸೇವಾಅರ್ಘ್ಯವೆಂಬ ಪುಣ್ಯ ಯಜ್ಞದ ಸಮಿಧೆಗಳಾಗುವ ಸುಯೋಗ ನಮ್ಮದು. ‘ಇದೇನು ಹೊಸ ಯಜ್ಞ? ಯಾವುದು ಈ ಸಮಿಧೆ?’ ಎಂದು ಯೋಚಿಸುತ್ತಿರಬಹುದಲ್ಲವೇ? ಸೇವಾಅರ್ಘ್ಯ ಎಂದರೆ ಸಮಾಜಕ್ಕೆ ಸಲ್ಲಿಸುವುದು ನಮ್ಮಿಂದಾದ ಸೇವೆಯನ್ನು. ಅದರಲ್ಲಿ ಗೋಶಾಲೆಯ ಹಸುಗಳಿಗೆ ಮೇವು ಸಂಗ್ರಹಿಸುವ ಕಾರ್ಯವೂ ಒಂದು. ಅದುವೇ ಒಂದು […]

Continue Reading

ಕತ್ತಲೆಯ ಸಮಾಜಕ್ಕೊಂದು ಗುರುವೆಂಬ ಆಶಾಕಿರಣ (ಭಾಗ -೨) : ಮಹೇಶ ಕೋರಿಕ್ಕಾರ್

ನಾವಿಂದು 21ನೆಯ ಶತಮಾನದಲ್ಲಿ ಜೀವಿಸುತ್ತಿದ್ದೇವೆ. ಕಣ್ಣ ಮುಂದಿರುವ ಯಾವುದೇ ಕಾರ್ಯವಾದರೂ ಸರಿ, ಅದನ್ನು ಆರ್ಥಿಕತೆಯ ತಕ್ಕಡಿಯಲ್ಲಿಟ್ಟು ತೂಗಿ ಲಾಭ-ನಷ್ಟಗಳ ಲೆಕ್ಕಾಚಾರವನ್ನು ಗೈದ ಮೇಲೆಯೇ ಮುಂದುವರಿಯುವುದು ನಮ್ಮ ಅಭ್ಯಾಸ. ಅದೇ ಲೆಕ್ಕಾಚಾರದಲ್ಲಿ ಮುಳುಗಿ, ಆ ಕಾರ್ಯದ ಮುಖ್ಯ ಧ್ಯೇಯವೇನು ಎಂಬುದನ್ನೇ ಅದೆಷ್ಟೋ ಬಾರಿ ನಾವು ಮರೆಯುತ್ತೇವೆ. ಆ ಲೆಕ್ಕಾಚಾರದಿಂದಲಾಗಿಯೇ, ಮಾಡಲೇಬೇಕಾದ ಒಳ್ಳೆಯ ಕಾರ್ಯವನ್ನು ನಾವು ಮಾಡದೇ ಇರುವುದೂ ಇದೆ ಅಲ್ಲವೇ?   ವ್ಯವಹಾರದ ಜ್ಞಾನವನ್ನು ವರ್ಧಿಸಿಕೊಳ್ಳುವುದಕ್ಕೆ ಇಂದು ನಮ್ಮ ಕಣ್ಣ ಮುಂದೆ ಹಲವಾರು ಮಾಧ್ಯಮಗಳಿವೆ. ಶಾಲಾ ಕಾಲೇಜುಗಳಲ್ಲೂ, ವಿವಿಧ […]

Continue Reading

ಕತ್ತಲೆಯ ಸಮಾಜಕ್ಕೊಂದು ಗುರುವೆಂಬ ಆಶಾಕಿರಣ (ಭಾಗ – ೧) : ಮಹೇಶ ಕೋರಿಕ್ಕಾರ್

ತುಂಬು ನಿಸರ್ಗದ ಮಧ್ಯೆ ಹಳೆಯದಾದೊಂದು ಹೆಂಚು ಹಾಸಿನ ಮನೆ. ಮನೆಯ ಮುಂದೆ ಸೆಗಣಿ ಸಾರಿಸಿದ ವಿಶಾಲವಾದೊಂದು ಅಂಗಳ. ಅಂಗಳದ ತುಂಬೆಲ್ಲ ಹರಡಿದ ಅಡಿಕೆ, ಕಾಳುಮೆಣಸುಗಳ ಮಧ್ಯೆಯೊಂದು ತುಳಸೀ ಕಟ್ಟೆ. ಅಂಗಳದ ಆ ಬದಿಗೊಂದು ಆಕಳ ಕೊಟ್ಟಿಗೆ. ಅದರೊಳಗೆ ಹಸಿರು ಹುಲ್ಲನ್ನು ಮೇಯುತ್ತಾ ನಿರ್ಲಿಪ್ತವಾಗಿ ಮಲಗಿರುವ ಒಂದೆರಡು ಹಸುಗಳು. ಇನ್ನೂ ಮುಂದಕ್ಕೆ ದಟ್ಟವಾಗಿ ಹರಡಿರುವ ಅಡಿಕೆ ತೋಟ, ವಿಶಾಲವಾದ ಭತ್ತದ ಗದ್ದೆ. ಆಗೊಮ್ಮೆ ಈಗೊಮ್ಮೆ ಬಂದು ಹರಟೆ ಹೊಡೆದು ಹೋಗುವ ನೆರೆಮನೆಯವರು, ಬಂಧುಗಳು. ಮದುವೆ, ಉಪನಯನ, ಪೂಜೆ, ಪುರಸ್ಕಾರ, […]

Continue Reading

ಗೋಸ್ವರ್ಗ  ನಿರ್ಮಾಣವೆಂಬ ಐತಿಹಾಸಿಕ ಕಾರ್ಯ : ನಮಿತಾ ಹೆಗಡೆ ಹೊನ್ನಾವರ

    ಸ್ವರ್ಗದೆತ್ತರಕ್ಕೆ ಏರಲು ನಮಗೆಲ್ಲ ಸಾಧ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈಗಿರುವ ಭೂಮಿಯನ್ನೇ ಸ್ವರ್ಗವನ್ನಾಗಿಸಬಹುದೆಂದು  ನಮಗೆಲ್ಲ ತೋರಿಸಿಕೊಟ್ಟವರು ಪರಮಪೂಜ್ಯ ಶ್ರೀಸಂಸ್ಥಾನದವರು. ಸ್ವರ್ಗವನ್ನೂ ನಾಚಿಸುವ ರೀತಿಯಲ್ಲಿ, ಮಲೆನಾಡಿನ ಹಸಿರಿನ ಮಡಿಲಲ್ಲಿ ಸಂಪೂರ್ಣ ಗೋಸೌಖ್ಯಕ್ಕೇ ಕೇಂದ್ರಿತವಾಗಿರುವ ಗೋಸ್ವರ್ಗವೆಂಬ ಅಪೂರ್ವ ಗೋಧಾಮವನ್ನು ನಿರ್ಮಿಸಿದ ಮಹಾನ್ ಚೇತನ ನಮ್ಮ ಶ್ರೀಗುರುಗಳು.    ಯಾಕೆ ಈ ಗೋಸ್ವರ್ಗ ಸ್ವರ್ಗಕ್ಕೂ ಮಿಗಿಲು ಎಂಬುದನ್ನು ಸಂಕ್ಷಿಪ್ತವಾಗಿ  ತಿಳಿದುಕೊಳ್ಳೋಣ.    ಗೋಸ್ವರ್ಗದ ಮಣ್ಣಿನಲ್ಲಿ, ಗಾಳಿಯಲ್ಲಿ, ನೀರಿನಲ್ಲಿ ದೈವದ ಸಾನ್ನಿಧ್ಯವಿದೆ. ಒಂದು ದೃಷ್ಟಿಯಲ್ಲಿ  ನೋಡಿದರೆ ಅದು ವಿಶ್ವದ ಸರ್ವೋತ್ತಮ […]

Continue Reading

ಜ್ಞಾನದ ದೀಪ ‘ಧರ್ಮ ಭಾರತೀ’ : ವಿದ್ಯಾರವಿಶಂಕರ್ ಯೇಳ್ಕಾನ, ಪುತ್ತೂರು

    ಇಡೀ ವಿಶ್ವಕ್ಕೆ ಧಾರ್ಮಿಕತೆ, ಆಧ್ಯಾತ್ಮಿಕತೆ, ಆಚಾರ, ವಿಚಾರ, ಸಂಸ್ಕೃತಿಗಳ ಭೋದಿಸಿದ ಭಾರತ ಇಂದು ದೇವರು – ಧರ್ಮಗಳಿಂದ ದೂರ ಸರಿಯುತ್ತಾ ಇದೆ. ಆಧುನಿಕ ಸಂಸ್ಕೃತಿ, ತಂತ್ರಜ್ಞಾನಗಳ ಬೆನ್ನೆತ್ತಿ, ಸನಾತನ ಧರ್ಮ, ಸಂಸ್ಕೃತಿ, ಕಲೆಗಳ ಮರೆತು ನಾಶದಂಚಿಗೆ ಸಾಗುತ್ತಾ ಇದೆ. ಹೀಗೆ ಕಲಿಯುಗದಲ್ಲಿ ಇಂದು ಧರ್ಮ ಹಂತ ಹಂತವಾಗಿ ಮರೆಯಾಗುತ್ತಾ ಅಧರ್ಮ ತಾಂಡವವಾಡುತ್ತಿದೆ.    ಇಂತಹ ಈ ಸಂದಿಗ್ಧ ಕಾಲದಲ್ಲಿ ನಮ್ಮ ಸನಾತನ ಧರ್ಮ, ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯಗಳನ್ನು ಜನಮಾನಸಕ್ಕೆ ಪರಿಚಯಿಸುವ ಅಗತ್ಯವನ್ನರಿತ ನಮ್ಮ […]

Continue Reading

ವನಜೀವನ ಯಜ್ಞ : ಎ. ಎಸ್. ಮಹಾಬಲಗಿರಿ. ಶುಂಠಿಮನೆ, ಅರಳಗೋಡು.

  ಕೆಲವು ಶಕ್ತಿಗಳೇ ಹಾಗೆ. ವ್ಯಕ್ತಿಯಾಗಿ ಜನಿಸಿದರೂ ತರುಣ ದಿನಗಳಲ್ಲೇ ಶಕ್ತಿಯಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಅಂತಹ ಶಕ್ತಿಯೊಂದಕ್ಕೆ ಉನ್ನತವಾದ ಸ್ಥಾನ ಸಿಕ್ಕಿದ್ದಾದರೆ ಆ ಸ್ಥಾನಕ್ಕೇ ಒಂದು ಗೌರವವನ್ನು, ಔನ್ನತ್ಯವನ್ನು ತಂದುಕೊಂಡಲ್ಲಿ ಶಕ್ತಿ ಖಂಡಿತಾ ಸಫಲವಾಗುವುದಲ್ಲದೇ, ತನ್ನ ಸುತ್ತಲಿನ ಪರಿಸರವನ್ನು, ಅದು ಅಲಂಕರಿಸಿದ ಸ್ಥಾನದ ಅನುಯಾಯಿ-ಅಭಿಮಾನಿಗಳನ್ನೂ ಸಹ ಆದರ್ಶದ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ. ಅಲ್ಲದೇ ಸಮಗ್ರ ಸಮಾಜವನ್ನೇ ತಾರತಮ್ಯ, ಜಾತಿ ಭೇದವಿಲ್ಲದೇ ವಿಷಯವಾರು ಸಂಘಟಿಸಿ ಪ್ರಪಂಚ ಪಾವನವಾಗಿಸುವತ್ತ ವೇಗವಾಗಿ ಮುನ್ನಡೆಯುತ್ತ ಮುನ್ನಡೆಸುತ್ತಾ ಸಾಗುತ್ತದೆ.   ಅಂತಹ ಶಕ್ತಿಯೊಂದು ಮೂರ್ತೀಭವಿಸಿ […]

Continue Reading

ರಾಮಪದ – ಪರಮಪದ – ಮೋಕ್ಷಪದ : ಕಾಂಚನ ರೋಹಿಣಿ ಸುಬ್ಬರತ್ನಂ

  ದಿನಾಂಕ 18.12.2018ರಂದು ರಾಮಚಂದ್ರಾಪುರದಮಠದ ಶಾಖೆಯಾದ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ರಾಮಪದ -ಭಗವದವಲೋಕನ ದಿನ ಅಂದು ವೈಕುಂಠ ಏಕಾದಶೀ. ಮೋಕ್ಷವನ್ನು ಬಯಸುವವರಿಗೆ ವೈಕುಂಠದ ದ್ವಾರವು ತೆರೆದಿರುವ ದಿನ. ಭಗವಂತನಾದ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ ದಿನ. ಇಂತಹ ಸುದಿನದಲ್ಲಿ ಅನೇಕ ಭಕ್ತರೊಂದಿಗೆ ನನಗೂ ರಾಮಪದವನ್ನು ನೋಡುವ, ಸೇರುವ ಪುಣ್ಯದ ಅವಕಾಶವು ದೊರೆತುದೇ ಭಾಗ್ಯವಿಶೇಷ. ಮುಕ್ತಿಯ ಆಸೆಗಾಗಿ ದೇವಸ್ಥಾನಗಳಿಗೆ ಜನ ಮುತ್ತಿದ್ದರೆ ರಾಮಪದವನ್ನು ಬಯಸಿ ರಾಮಾಶ್ರಮದಲ್ಲಿ ಸೇರಿದ್ದವರಿಗೆ ಅನಾಯಾಸವಾಗಿ ಪುರುಷಾರ್ಥ ಗಳಿಕೆಗೆ ಸುಲಭಹಾದಿಯಾದ ಸಂಗೀತದ ಹಾಗೂ ಸಂಗೀತದಷ್ಟೇ ಸುಮಧುರವಾದ ಪ್ರವಚನದ […]

Continue Reading