ಕಣ್ಣಿಗೆ ಕಾಣುವ ಪ್ರತಿಯೊಂದು ಗೋವೂ ಕಾಮಧೇನು : ಯಶೋದಾ ಚಂದ್ರಶೇಖರ, ಶಿವಮೊಗ್ಗ

” ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ, ಗೋಸೇವೆ, ಗೋದಾನ ಮಾಡಿದರೆ ಬದುಕಿನಲ್ಲಿ ಭಾಗ್ಯದ ಬಾಗಿಲು ತೆರೆದಂತೆ, ಜಾತಿ ಮತ ಅಂತರವಿಲ್ಲದೆ ಎಲ್ಲರೂ ಭಾರತೀಯ ಗೋತಳಿಗಳ ರಕ್ಷಣೆಗಾಗಿ ಕೈ ಜೋಡಿಸುವ  ದಿನಗಳು ಹೆಚ್ಚು ದೂರವಿಲ್ಲ ” ಎಂದು ಗೋಮಾತೆಯ ಬಗ್ಗೆ ತಮಗಿರುವ ಶ್ರದ್ಧಾಭಕ್ತಿಗಳನ್ನು ಮಾತುಗಳ ಮೂಲಕ ವ್ಯಕ್ತಪಡಿಸಿದವರು  ಶ್ರೀರಾಮಚಂದ್ರಾಪುರ ಮಂಡಲದ ಶಿವಮೊಗ್ಗ ವಲಯದ ಯಶೋದಾ ಚಂದ್ರಶೇಖರ. ಸಾಗರದ ಚುಟ್ಟಿಕೆರೆ ಕೃಷ್ಣಪ್ಪ, ಬಂಗಾರಮ್ಮ ದಂಪತಿಗಳ ಪುತ್ರಿಯಾದ ಯಶೋದಾ ಶ್ರೀಮಠದ ಸೇವೆಯಲ್ಲಿ ಸದಾ ಶ್ರದ್ದೆ ಹೊಂದಿದವರು. ” ಗಿರಿನಗರದ ರಾಮಾಶ್ರಮಕ್ಕೆ […]

Continue Reading

” ಶ್ರೀಮಠದ ಸೇವೆಯಲ್ಲಿ ಮನೋ ತೃಪ್ತಿ ” : ಅನಿತಾ ಪ್ರಮೋದ ಪಂಡಿತ

  ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ಅನಿತಾ ಪ್ರಮೋದ ಪಂಡಿತ ಅವರು ಕೆಲವು ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿ ಇದ್ದುಕೊಂಡು ಸದಾ ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಶ್ರೀಗುರು ಸೇವೆ, ಗೋಸೇವೆಯಲ್ಲಿ ತೊಡಗಿಸಿಕೊಂಡವರು. ಹಿತ್ಲಳ್ಳಿಯ ನಾರಾಯಣ ಭಟ್ ಹಾಗೂ ಲಲಿತಾ ಅವರ ಪುತ್ರಿಯಾದ ಅನಿತಾ ಶಿರಸಿಯ ಸರಕಾರಿ ಕಾಲೇಜೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಒಂದು ಬಾರಿ ಗೋಸ್ವರ್ಗಕ್ಕೆ ಹೋದಾಗ ಅಲ್ಲಿ ಮುಕ್ತವಾಗಿ ವಿಹರಿಸುವ ಹಸುಗಳನ್ನು ಕಂಡಾಗ ಗೋಮಾತೆಗಾಗಿ ಯಾವುದಾದರೊಂದು ರೀತಿಯಲ್ಲಿ ಸೇವೆ ಮಾಡಬೇಕೆಂಬ ಅಭಿಲಾಷೆ ಇವರ ಮನದಲ್ಲಿ ಮೂಡಿ ಬಂತು. ” ಬಾಲ್ಯದಲ್ಲಿ […]

Continue Reading

ಶ್ರೀಮಠದ ಸೇವೆಯಲ್ಲಿ ಮಹದಾನಂದ : ಗೋದಾವರಿ ಪ್ರಕಾಶ್ ಹೆಗಡೆ

  ” ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಜರಗಿದ ವಿಶ್ವ ಗೋಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಸಮರ್ಪಿಸುವ ಸೌಭಾಗ್ಯ ಒದಗಿಬಂತು. ಅಂದು ಶ್ರೀ ಸಂಸ್ಥಾನದವರು ‘ ಗೋಮಾತೆಯ ಅನುಗ್ರಹದಿಂದ ಬದುಕು ಹಸನಾಗಲಿ ‘ ಎಂದು ಹರಸಿದರು. ಆ ಆಶೀರ್ವಾದವು ನಮ್ಮ ಬದುಕಿನ ಪಥವನ್ನು ಬದಲಿಸಿತು. ಅಂದಿನಿಂದ ಇಂದಿನವರೆಗೂ ಶ್ರೀಮಠದ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದೇವೆ. ನಮ್ಮ ಬದುಕು ಹಸನಾಗಲು ಕಾರಣ ಶ್ರೀಗುರುಗಳು ಮತ್ತು ಗೋಮಾತೆಯ ಕೃಪೆ ” ಈ ಭಾವಪೂರ್ಣ ನುಡಿಗಳು ಕುಮಟಾ ಮಂಡಲದ […]

Continue Reading

” ದೇಶೀ ಹಸುಗಳನ್ನು ಸಾಕಲು ಪ್ರೇರಣೆ ಶ್ರೀಗುರುಗಳ ಆಶೀರ್ವಚನ ” : ರೂಪಾ ವೆಂಕಟೇಶ್ ಮುಳ್ಳುಂಜ

  ” ಬದುಕಿನಲ್ಲಿ ಮೊದಲ ಆದ್ಯತೆ ಶ್ರೀಮಠದ ಸೇವೆಗೆ, ಇದಕ್ಕೆ ಕಾರಣ,ಪ್ರೇರಣ ನನ್ನ ತವರುಮನೆಯವರು. ಹಿರಿಯ ಗುರುಗಳ ಕಾಲದಿಂದಲೇ ನನ್ನ ತವರುಮನೆಯವರು ಶ್ರೀಮಠದ ಸಂಪರ್ಕದಲ್ಲಿ ಇದ್ದರು. ಹಿರಿಯ ಗುರುಗಳು ಈ ಊರಿಗೆ ಬಂದರೆ ನನ್ನ ತವರುಮನೆಯಲ್ಲಿ ಮೊಕ್ಕಾಂ ಆಗಿತ್ತು. ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರು ಪೀಠವೇರಿದ ನಂತರ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು ” ಎನ್ನುತ್ತಾರೆ ಮಂಗಳೂರು ಮಂಡಲದ ಕಲ್ಲಡ್ಕ ವಲಯದ ರೂಪಾ ವೆಂಕಟೇಶ್ವರ ಭಟ್ ಮುಳ್ಳುಂಜ. ಪಡೀಲು ಮಹಾಬಲೇಶ್ವರ ಭಟ್ ಹಾಗೂ ಸರಸ್ವತಿ ಭಟ್ […]

Continue Reading

ಪೂರ್ವ ಜನ್ಮದ ಸುಕೃತದಿಂದ ಶ್ರೀಮಠದ ಸೇವೆಯ ಅವಕಾಶ ದೊರಕಿದೆ ” : ದೀಪಾ ಆನಂದ ಭಟ್ಟ

” ನನಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿದಂತೆ ನಮ್ಮ ಮಕ್ಕಳಿಗೂ ಆ ಸೌಭಾಗ್ಯ ಒದಗಿಬಂತು. ಶ್ರೀಗುರುಗಳ ಆಶೀರ್ವಚನಗಳನ್ನು ನಿರಂತರವಾಗಿ ಕೇಳಿದ ನನ್ನ ಮಗ ಸ್ವಯಂ ಇಚ್ಛೆಯಿಂದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ವಿದ್ಯಾರ್ಥಿಯಾಗಿ ಸೇರಿದ್ದಾನೆ. ಇದು ಅತ್ಯಂತ ಖುಷಿಯ ವಿಚಾರ ” ಎಂದು ಹರ್ಷದಿಂದ ನುಡಿಯುವವರು ಗೇರುಸೊಪ್ಪ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಕೋರಮಂಗಲ ವಲಯ ನಿವಾಸಿಗಳಾಗಿರುವ ಆನಂದ ಭಟ್ಟ ಗದ್ದೆ ಇವರ ಪತ್ನಿಯಾದ ದೀಪಾ ಆನಂದ ಭಟ್ಟ. ಹೊನ್ನಾವರದ ಕಾಸರಕೋಡು ನಾರಾಯಣ ಮಂಜುನಾಥ ಹೆಗಡೆ ಹಾಗೂ […]

Continue Reading

ಶ್ರೀಮಠದ ಸೇವೆಗೆ ಸದಾ ಬದ್ದ : ಚಂದ್ರಕಲಾ ಬೆಂಗಳೂರು

  ಸೊರಬ ಬಳಿಯ ಕಂಪನಹಳ್ಳಿ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಚಂದ್ರಕಲಾ ಹಾಗೂ ಅವರ ಪತಿ ಲಕ್ಷ್ಮೀ ನಾರಾಯಣ ಹೆಗಡೆಯವರು ಸುಮಾರು ನಲುವತ್ತು ವರ್ಷಗಳ ಕಾಲ ಮುಂಬೈ ನಿವಾಸಿಗಳಾಗಿದ್ದವರು. ಮುಂಬೈಯಲ್ಲಿದ್ದುಕೊಂಡೇ ಶ್ರೀಮಠದ ವಿವಿಧ ಸೇವೆಗಳಲ್ಲಿ ಕೈ ಜೋಡಿಸಿದವರು. ಮುಂಬೈಯ ಡೊಂಬಿವಿಲಿಯಲ್ಲಿ ಎರಡು ಬಾರಿ ಶ್ರೀಗುರುಗಳ ರಾಮಕಥೆಯನ್ನು ನಡೆಸಿದ ಇವರು ಶ್ರೀ ರಾಮಚಂದ್ರಾಪುರ ಮಠದಲ್ಲಿ ಜರಗಿದ ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ಅಯೋಧ್ಯೆ, ಕಾಶಿಯೇ ಮೊದಲಾದ ಉತ್ತರ ಭಾರತ ಭಾಗದಿಂದ ಸಂತರನ್ನು ಕರೆತಂದು ಅವರ ಸತ್ಕಾರದಲ್ಲಿ ಸ್ವಯಂ ಸೇವಕರಾಗಿಯೂ ಸೇವೆ […]

Continue Reading

“ಬಾಳಿಗೆ ಬೆಳಕು ದೊರಕಿದ್ದು ಶ್ರೀಗುರು ಸೇವೆಯಿಂದ ” : ಪಾವನಾ .ಪಿ.ಭಟ್, ಮಂಗಳೂರು

” ೧೯೯೯ ರಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವರು ನಾವು.‌ ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇವೆ. ಅಂದಿನಿಂದ ಇಂದಿನ ವರೆಗೂ ಬಾಳಿನ ಏರಿಳಿತಗಳಲ್ಲಿ ಕೈ ಹಿಡಿದು ನಡೆಸಿದ್ದು ಶ್ರೀರಾಮ ದೇವರ ಅನುಗ್ರಹ, ಶ್ರೀಗುರುಗಳ ಕೃಪೆ ” ಎಂದು ಹೃದಯ ತುಂಬಿ ನುಡಿಯುವವರು ಮಂಗಳೂರು ಮಧ್ಯ ವಲಯದ ಕುಂಡೇರಿ ಮೂಲದ ಕಾಂಚನ ಪರಮೇಶ್ವರ ಭಟ್ ಅವರ ಪತ್ನಿ ಪಾವನಾ . ನೆಡ್ಲೆಯ ಕಡೆಂಗೋಡ್ಲು ನರಸಿಂಹ ಭಟ್ ಹಾಗೂ ಲಕ್ಷ್ಮೀ ಭಟ್ ಇವರ […]

Continue Reading

” ಎಳವೆಯಿಂದಲೇ ಶ್ರೀಮಠದ ಸಂಪರ್ಕ ಮಕ್ಕಳಿಗೆ ದೊರಕಬೇಕು ” : ಸುಮನಾ ನಂದೋಡಿ

” ತವರುಮನೆಯವರು ಹಿರಿಯ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇದ್ದ ಕಾರಣ ನನಗೂ ಶ್ರೀಮಠ, ಶ್ರೀಗುರುಗಳು ಎಂದರೆ ಬಾಲ್ಯದಿಂದಲೇ ಬಹಳ ಶ್ರದ್ದೆ ಭಕ್ತಿ. ಇದು ನಮ್ಮ ಮಕ್ಕಳವರೆಗೂ ಮುಂದುವರಿದಿದೆ ಎಂಬುದೇ ಅತ್ಯಂತ ನೆಮ್ಮದಿ ತರುವ ವಿಚಾರ ” ಎಂದು ಹರ್ಷದಿಂದ ನುಡಿಯುತ್ತಿರುವವರು ಮೂಲತಃ ಸಾಗರದ ಸಮೀಪದ ನಂದೋಡಿಯವರಾದ ಪ್ರಸ್ತುತ ಮಂಗಳೂರು ನಗರದಲ್ಲಿ ವಾಸಿಸುತ್ತಿರುವ ಸುಮನಾ ನಂದೋಡಿಯವರು. ಸಾಗರದ ಹುಳೇಗಲ್ ನ ಚೆನ್ನಕೇಶವ ಭಟ್ ಹಾಗೂ ಸರೋಜಿನಿ ದಂಪತಿಗಳ ಪುತ್ರಿಯಾದ ಇವರು ಮಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಕೇಶವ ನಂದೋಡಿ ಅವರ […]

Continue Reading

” ‌‌ಶ್ರೀಮಠದ ಸೇವೆಯಿಂದ ರಾಮಾನುಗ್ರಹ ” : ಉಷಾ ಕುಮಾರಿ ಚೇರಾಲು

” ಗಿರಿನಗರದ ಶ್ರೀರಾಮಾಶ್ರಮಕ್ಕೆ ಹೋಗಿದ್ದಾಗ ಶ್ರೀ ಗುರುಗಳ ಆಶೀರ್ವಾದದಿಂದ ಪ್ರೇರಣೆಗೊಂಡು ಶ್ರೀಮಠದ ಸೇವೆಯಲ್ಲಿ ಭಾಗಿಯಾಗಬೇಕು ಎಂಬ ಹಂಬಲ ಮೂಡಿತು. ಸುಮಾ ರಮೇಶ್ ಹಾಗೂ ಲಕ್ಷ್ಮೀ ಇಳಂತಿಲ ಅವರ ಪ್ರೀತಿಯ ಒತ್ತಡಕ್ಕೆ ಮಣಿದು ಮಾಸದ ಮಾತೆಯಾಗಿ ಸೇವೆ ಮಾಡಲು ಕೈಜೋಡಿಸಿದೆ. ಆದರೆ ಮನದ ಮೂಲೆಯಲ್ಲಿ ತುಂಬಾ ಅಳುಕಿತ್ತು. ನಮ್ಮ ವಲಯದ ನಿವೃತ್ತ ಶಿಕ್ಷಕಿ, ಸಮಾಜಸೇವಕಿ ಕಮಲಕ್ಕ ಅವರ ಸಹಕಾರದಿಂದ ಮಾಸದ ಮಾತೆಯಾಗಿ ಸೇವೆಮಾಡಲು ಮಾರ್ಗದರ್ಶನ ದೊರಕಿತು ” ಎನ್ನುತ್ತಾರೆ ಮಂಗಳೂರು ಮಂಡಲದ ಬಾಯಾರು ವಲಯದ ಉಷಾಕುಮಾರಿ ಚೇರಾಲು. ಚಾಲತ್ತಡ್ಕದ […]

Continue Reading

” ಗೋಮಾತೆಯ ಸೇವಾ ಕೈಂಕರ್ಯ ಮನಸ್ಸಿಗೆ ಮುದ ನೀಡುವ ಕಾರ್ಯ : ಸವಿತಾ ದತ್ತಾತ್ರೇಯ, ಬೆಂಗಳೂರು

” ಗೋವುಗಳ ಜೊತೆ ಒಡನಾಡುತ್ತಿದ್ದ ನನಗೆ ಬೆಂಗಳೂರು ನಗರಕ್ಕೆ ಬಂದ ಮೇಲೆ ಅದು ಮರೀಚಿಕೆಯಾಯಿತು. ಆದರೆ ಈಗ ನಮ್ಮ ಶ್ರೀಗುರುಗಳ ಗೋಸೇವಾ ಯೋಜನೆಯಲ್ಲಿ ಕೈ ಜೋಡಿಸಿದ ಮೇಲೆ ಅಸಾಧ್ಯ ಎನಿಸಿದ ಕಾರ್ಯವೂ ಸುಲಲಿತವಾಗಿ ಕೈಗೂಡಿತು ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ,ವಿಜಯನಗರ ವಲಯದ ಸವಿತಾ ದತ್ತಾತ್ರೇಯ ಅವರು. ಕುಮಟಾದ ಕತ್ತಗಾಲು ‌ನಾರಾಯಣ ಭಟ್ ಹಾಗೂ ಗೋದಾವರಿ ಭಟ್ ಇವರ ಪುತ್ರಿಯಾದ ಸವಿತಾ ಅವರ ಪತಿ ದತ್ತಾತ್ರೇಯ ಮಹಾದೇವ ಭಟ್. ಸುಮಾರು ನಲುವತ್ತು ವರ್ಷಗಳಿಂದ ಬೆಂಗಳೂರು ನಗರದಲ್ಲಿ […]

Continue Reading

” ಸತತ ಶ್ರೀಚರಣ ಸೇವೆ ದೊರಕಿಸೆಮಗೆ ರಾಮಾ ” : ವಿದ್ಯಾಗೌರಿ ಕುಳಮರ್ವ

  ” ಎಳವೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿದ ಕಾರಣ ಮಠವೆಂದರೆ ಮನಸ್ಸಿಗೆ ನೆಮ್ಮದಿ ನೀಡುವ ತಾಣವಾಗಿಬಿಟ್ಟಿದೆ. ಪ್ರತಿದಿನವೂ ಗುರುಸ್ಮರಣೆಯೊಂದಿಗೇ ದಿನವನ್ನು ಆರಂಭಿಸುವವರು ನಾವು . ಇದೇ ಅಭ್ಯಾಸ ನಮ್ಮ ಮಕ್ಕಳಿಗೂ ದೊರಕಿದೆ ” ಎಂದು ಸತತ ಶ್ರೀಮಠದ ಸೇವೆಯಲ್ಲಿ ನಿರತವಾಗುವ ಹಂಬಲ ವ್ಯಕ್ತಪಡಿಸಿದವರು ವಿದ್ಯಾಗೌರಿ ಕುಳಮರ್ವ. ಕುಳಮರ್ವ ಮನೆತನದ ಕೃಷ್ಣ ಭಟ್ ಹಾಗೂ ದೇವಕಿಯವರ ಪುತ್ರಿಯಾದ ವಿದ್ಯಾಗೌರಿ ತಾಳ್ತಜೆ ಮಹಾಲಿಂಗ ಭಟ್ ಅವರ ಪತ್ನಿ. ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ವಿದ್ಯಾಗೌರಿ ಅವರು ಮದುವೆಯ ನಂತರವೂ ಶ್ರೀಮಠದ ಸೇವೆಯಲ್ಲಿ […]

Continue Reading

” ಬದುಕಿನ ನೋವುಗಳಿಗೆ ಮುಕ್ತಿ ದೊರಕಿದ್ದು ಶ್ರೀಮಠದ ಸೇವೆಯಲ್ಲಿ” : ಪ್ರೇಮಲತಾ ಉಪ್ಪಿನಂಗಡಿ

  ” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಇರುವ ಕಾರಣ ಶ್ರೀಗುರುಗಳ ಕಾರುಣ್ಯದ ಬಗ್ಗೆ ತಿಳಿದಿತ್ತು. ಬದುಕಿನ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಸಂಪೂರ್ಣ ಶರಣಾಗಿದ್ದು ಶ್ರೀಗುರು ಚರಣಕ್ಕೆ. ಶ್ರೀಗುರುಗಳ ಆಶೀರ್ವಚನಗಳೇ ಭರವಸೆಯ ಸಾಂತ್ವನದ ನುಡಿಗಳಾಗಿ ಕತ್ತಲ ಬಾಳಿಗೆ ಬೆಳಕಿನ ಹಾದಿಯನ್ನು ತೋರಿದಾಗ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡೆ..ಇದರಲ್ಲಿ ದೊರಕುವ ನೆಮ್ಮದಿ, ಭರವಸೆ ಬೇರೆಲ್ಲೂ ಸಿಗಲಾರದು ಎಂಬುದು ನನ್ನ ಅನುಭವದ ನುಡಿ ” ಎನ್ನುತ್ತಾರೆ ಉಪ್ಪಿನಂಗಡಿ ಮಂಡಲದ , ಉಪ್ಪಿನಂಗಡಿ ವಲಯದ ನೆಕ್ಕಿಲಾಡಿ ಘಟಕದ ಪ್ರೇಮಲತಾ ಕಾಂಚನ ಅವರು. ಮಂಚಿಕಜೆಯ […]

Continue Reading

ಪ್ರತಿನಿತ್ಯವೂ ಗೋಸೇವೆ ಮಾಡುವ ಪುಣ್ಯಾವಕಾಶ ದೊರಕಿದೆ” : ಮಂಗಲಾ ನೀಲಕಂಠ ಉಪಾಧ್ಯಾಯ

ಹೊನ್ನಾವರ ಮಂಡಲದ ಭಟ್ಕಳ ವಲಯದ ದೇವಿಕಾನ ,ಕಾಯ್ಕಿಣಿಯ ಮಂಗಲಾ ನೀಲಕಂಠ ಉಪಾಧ್ಯಾಯ ಅವರು ನಿತ್ಯ ಗೋಸೇವೆಯಲ್ಲಿ ಸಂತೃಪ್ತಿ ಕಂಡವರು. ಸಾಗರದ ಸಮೀಪದ ವರದಹಳ್ಳಿಯ ಎಡಜಿಗಳೆ ಮಂಗಲಾ ಅವರ ತವರುಮನೆ. ಗೃಹಿಣಿಯಾಗಿರುವ ಇವರು ತಮ್ಮ ಗೃಹಕೃತ್ಯಗಳ ನಡುವೆ ಶ್ರೀಮಠದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಭಟ್ಕಳ ವಲಯದ ಮಾತೃ ಪ್ರಧಾನೆಯಾಗಿ ಆರು ವರ್ಷಗಳ ಕಾಲ ಸೇವೆ ಮಾಡಿದ ಇವರು ಪ್ರಸ್ತುತ ವಲಯ ಬಿಂದು ಸಿಂಧು ಸಂಚಾಲಕಿಯಾಗಿ ಶ್ರೀಗುರು ಸೇವೆ ಮಾಡುತ್ತಿದ್ದಾರೆ. ” ಚಿಕ್ಕಂದಿನಿಂದಲೇ ತವರುಮನೆಯಲ್ಲಿ ಗೋವುಗಳ ಒಡನಾಟದೊಂದಿಗೆ ಬೆಳೆದವಳು ನಾನು, […]

Continue Reading

” ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆಶೀರ್ವಚನಗಳೇ ಪ್ರೇರಣೆ ” : ಮಾಲಿನಿ ಕೆ. ಭಟ್ಟ

ಹೊನ್ನಾವರ ಮಂಡಲದ ಭಟ್ಕಳ ವಲಯದ ಗುರಿ ತಲುಪಿದ ಮಾಸದ ಮಾತೆಯಾಗಿರುವ  ಮಾಲಿನಿ ಕೆ. ಭಟ್ ಬಲಸೆಯ ಕೃಷ್ಣಾನಂದ ಶಿವರಾಮ ಭಟ್ಟರ ಪತ್ನಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಭಟ್ಕಳದ ಕಾರಗದ್ದೆಯ ವಾಸುದೇವ ವೆಂಕಟರಮಣ ಭಟ್ಟ ಹಾಗೂ ಸರಸ್ವತಿ ವಾಸುದೇವ ಭಟ್ಟ ಇವರ ಪುತ್ರಿ. ಶ್ರೀ ರಾಮಚಂದ್ರಾಪುರ ಮಠ ಹೊಸನಗರದಲ್ಲಿ ನಡೆದ ಶ್ರೀ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಅನುಭವ ಇವರಿಗಿದೆ. ” ಬಾಲ್ಯದಿಂದಲೇ ಗೋವುಗಳ ಮೇಲೆ ತುಂಬಾ ಪ್ರೀತಿಯಿತ್ತು. ಶ್ರೀಗುರುಗಳ ವಿವಿಧ […]

Continue Reading

” ಮನೆಯ ಗೋವುಗಳಷ್ಟೇ ಕಾಳಜಿ ಶ್ರೀಮಠದ ಗೋವುಗಳ ಮೇಲೂ ಇದೆ ” : ವಿಜಯಲಕ್ಷ್ಮಿ ನರ್ಕಳ

ಶ್ರೀಮಠದ ಸೇವೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ತೊಡಗಿಸಿಕೊಂಡವರು ಇವರು. ಮಾಸದ ಮಾತೆಯಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ್ದು ಲಕ್ಷ್ಮೀ ಪ್ರಕಾಶ್ ಇಳಂತಿಲ.ಮೊದಲು ಹೋದ ಮನೆಯಲ್ಲಿ ದೊರಕಿದ್ದು ಅತ್ಯಂತ ಕಹಿ ಅನುಭವ. ಕಣ್ಣೀರು ಸುರಿಸುತ್ತಲೇ ಹೊರಗೆ ನಡೆಯಬೇಕಾಗಿ ಬಂದ ಪರಿಸ್ಥಿತಿ. ‌ಆದರೂ ಶ್ರೀಗುರು ಚರಣಗಳಲ್ಲಿ ಇರಿಸಿದ ನಂಬಿಕೆ ಹುಸಿಯಾಗಲಿಲ್ಲ. ಗೋಪ್ರೇಮಿಯೊಬ್ಬರು ಒಂದು ಹಸುವಿನ ಒಂದು ವರ್ಷದ ನಿರ್ವಹಣಾ ವೆಚ್ಚವನ್ನು ಸಂಪೂರ್ಣವಾಗಿ ನೀಡಿದರು. ಇದರಿಂದಾಗಿ ಗುರಿ ತಲುಪಲು ಕಷ್ಟವಾಗಲಿಲ್ಲ.. ಇದು ಮಂಗಳೂರು ಮಂಡಲದ ಕಲ್ಲಡ್ಕ ವಲಯದ ಮಾತೃಪ್ರಧಾನೆಯಾಗಿರುವ ವಿಜಯಲಕ್ಷ್ಮಿ ನರ್ಕಳ ಅವರ […]

Continue Reading

” ಶ್ರೀ ಗುರುಗಳ ಅಭಯಹಸ್ತವೇ ಬದುಕಿನ ಶ್ರೀರಕ್ಷೆ  ” : ಶಾರದಾ ಕೃಷ್ಣ , ಗಿರಿನಗರ

” ಶ್ರೀ ಮಠದ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವುದು ಜೀವನದ ಅತ್ಯಂತ  ಹರ್ಷದ ಕ್ಷಣಗಳು. ಆ ನೆಮ್ಮದಿಯ, ಸಂತಸದ ಕ್ಷಣಗಳನ್ನು ವರ್ಣಿಸಲು ಸಾಧ್ಯವಿಲ್ಲ. ಮನಸ್ಸಿನಲ್ಲೇ ಬೇಡಿದ್ದನ್ನೂ ನಮಗೆ ಅನುಗ್ರಹಿಸುವ ಶ್ರೀಗುರುಗಳ ಅಭಯಹಸ್ತವೇ ಬದುಕಿನ ಶ್ರೀರಕ್ಷೆ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ವಲಯದ ಶಾರದಾ ಕೃಷ್ಣ ಅವರು. ದೈತೋಟದ ಶಂಕರನಾರಾಯಣ ಭಟ್, ವೆಂಕಟೇಶ್ವರಿ ಅಮ್ಮ ಅವರ ಪುತ್ರಿಯಾದ ಶಾರದಾ ಅವರಿಗೆ ಬಾಲ್ಯದಿಂದಲೇ ಹಸುಕರುಗಳೆಂದರೆ ಅತ್ಯಂತ ಪ್ರಿಯ. ತವರುಮನೆಯಲ್ಲಿ ಏಳೆಂಟು ಹಸುಗಳ ಒಡನಾಟದಲ್ಲಿ ಬೆಳೆದ ಶಾರದಾ […]

Continue Reading

ಗೋಮಾತೆಯ ಸೇವೆಗೆ ಸಕಾರಾತ್ಮಕ ಸ್ಪಂದನೆ ದೊರಕಿದೆ : ಉಮಾ ಪಿ. ಶೇಡಿಗುಮ್ಮೆ

೨೦೧೯ ರ ಚಾತುರ್ಮಾಸ್ಯದ ಸಂದರ್ಭದಲ್ಲಿ ವಲಯ ಭಿಕ್ಷಾಸೇವೆಯ ದಿವಸ ಶ್ರೀಗುರುಗಳ ಆಶೀರ್ವಚನದ ಪ್ರೇರಣೆ ಹಾಗೂ ವಲಯ ಮಾತೃ ವಿಭಾಗ ಪ್ರಧಾನೆಯಾಗಿರುವ ಶಿವಕುಮಾರಿ ಕುಂಚಿನಡ್ಕ ಇವರ ಬೆಂಬಲದಿಂದಾಗಿ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದವರು ಶ್ರೀಮತಿ ಉಮಾ ಪಿ . ಶೇಡಿಗುಮ್ಮೆ . ಮುಳ್ಳೇರಿಯ ಮಂಡಲ, ಕುಂಬಳೆ ವಲಯ ಕಣಿಪುರ ಘಟಕದವರಾದ ಇವರು ಚೆರುವತ್ತೂರಿನ ಮಾಧವ ರಾವ್ ,ಸರಸ್ವತಿ ದಂಪತಿಗಳ ಪುತ್ರಿ ಹಾಗೂ ಶೇಡಿಗುಮ್ಮೆ ಗಣೇಶ್ ಕುಮಾರ್ ಅವರ ಪತ್ನಿ. ಎಂ.ಎಸ್ಸಿ, ಬಿ.ಎಡ್ ಪಧವೀಧರರಾಗಿರುವ ಇವರು ಕುಂಬಳೆಯ […]

Continue Reading

ಶ್ರೀಮಠದ ಸೇವೆಯಲ್ಲಿ ಬದುಕು ಪಾವನವಾಗುತ್ತಿದೆ : ಸುಲೋಚನ‌ ಗಿರಿನಗರ

  ” ಶ್ರೀಮಠದ, ಗೋಮಾತೆಯ, ಶ್ರೀಗುರುಗಳ ಸೇವೆ ಮಾಡಲು ನಮಗೆ ದೊರಕಿರುವ ಈ ಅವಕಾಶ ನಿಜಕ್ಕೂ ಪೂರ್ವ ಜನ್ಮದ ಸುಕೃತದಿಂದ ಲಭಿಸಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಶ್ರೀಗುರುಗಳ ಆಶೀರ್ವಾದ ಪಡೆದು ಆರಂಭಿಸುವ ಯಾವುದೇ ಕಾರ್ಯವಾದರೂ ಅತಿ ಶೀಘ್ರದಲ್ಲಿ ಫಲ ದೊರಕುತ್ತದೆ ಎಂಬ ಅನುಭವ ನನ್ನದು ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ವಲಯದ ಸುಲೋಚನ ಗಿರಿನಗರ. ಸಿದ್ಧಾಪುರ ತಾಲೂಕಿನ ಇಟಗಿ ಹೊನ್ನೆಮಡಿಕೆಯ ಭಾಸ್ಕರ ಗಣೇಶ ಹೆಗಡೆ ಹಾಗೂ ಸರೋಜಾ ಭಾಸ್ಕರ ಹೆಗಡೆಯವರ ಪುತ್ರಿಯಾದ ಸುಲೋಚನ […]

Continue Reading

” ಸದಾ ಶ್ರೀಮಠದ ಸೇವೆಗೆ ತುಡಿಯುತ್ತಿದೆ ಮನಸ್ಸು ” : ವಿಜಯಾ ಸರ್ಪಂಗಳ

” ಶ್ರೀಗುರುಗಳ ಗೋಪ್ರೇಮ, ಗೋಮಾತೆಯ ರಕ್ಷಣೆಗಾಗಿ ಶ್ರೀ ಸಂಸ್ಥಾನದವರು ಕೈಗೊಂಡ ವಿವಿಧ ಯೋಜನೆಗಳು‌ ಹಾಗೂ ಶ್ರೀಮಠದ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳಬೇಕೆಂಬ ಹಂಬಲ ‘ ಇವುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇರಿಕೊಂಡೆ. ಈಗಾಗಲೇ ಒಂದು ವರ್ಷದ ಗುರಿ ತಲುಪಿರುವೆ. ಇನ್ನೊಂದು ವರ್ಷದ ಗುರಿ ತಲುಪುವ ಭರವಸೆಯಿದೆ ” ಎನ್ನುತ್ತಾರೆ ಮೂಲತಃ ಕಾಸರಗೋಡಿನ ಸರ್ಪಂಗಳದವರಾದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಶ್ರೀ ಅನ್ನಪೂರ್ಣೇಶ್ವರಿ ವಲಯ ನಿವಾಸಿಗಳಾಗಿರುವ ಎಸ್. ರಾಮಚಂದ್ರ ಭಟ್ಟರ ಪತ್ನಿ ವಿಜಯಾ ಸರ್ಪಂಗಳ ಅವರು. ಹಾಡು,ಸಂಗೀತ, ಹೊಲಿಗೆ, ಕಸೂತಿಗಳಲ್ಲಿ […]

Continue Reading

ಶ್ರೀಗುರುಗಳ ಕಾರುಣ್ಯದಿಂದ ಬದುಕಿನಲ್ಲಿ ಪವಾಡವೇ ನಡೆದಿದೆ: ಮಹಾದೇವಿ ಎಸ್‌ . ಭಟ್

  “ಶ್ರೀಗುರುಗಳ ಅನುಗ್ರಹವೊಂದಿದ್ದರೆ ಅಸಾಧ್ಯವಾದ ಯಾವ ಕಾರ್ಯವೂ ಇಲ್ಲ.‌ಗುರುವೊಲಿದರೆ ಕೊರಡು ಕೊನರುವುದು. ಇದಕ್ಕೆ ನನ್ನ ಬದುಕಿನಲ್ಲಿ ನಡೆದ ಸತ್ಯ ಘಟನೆಗಳೇ ಸಾಕ್ಷಿ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಕುಮಟಾ ಮಂಡಲದ, ಗುಡೇ ಅಂಗಡಿ ವಲಯದ ದೇವನಿ ಮನೆತನದ ಸೀತಾರಾಮ ಅನಂತ ಭಟ್ಟರ ಪತ್ನಿ ಮಹಾದೇವಿ ಎಸ್. ಭಟ್ . ಸಾಲಕೋಡು ಗ್ರಾಮದ ಕೆರೆಕೋಣ ವೆಂಕಟೇಶ ಹೆಗಡೆ ಮತ್ತು ಸುಬ್ಬಿ ಅವರ ಪುತ್ರಿಯಾದ ಮಹಾದೇವಿ ಅವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿತ್ತು. ಹಿಂದಿನ ಗುರುಗಳ ಕಾಲದಿಂದಲೂ ಇವರ ತವರುಮನೆಯವರು ಶ್ರೀಮಠದ […]

Continue Reading