ಗೋಮಾತೆಯ ಸೇವೆಗೆ ಸಕಾರಾತ್ಮಕ ಸ್ಪಂದನೆ ದೊರಕಿದೆ : ಉಮಾ ಪಿ. ಶೇಡಿಗುಮ್ಮೆ

೨೦೧೯ ರ ಚಾತುರ್ಮಾಸ್ಯದ ಸಂದರ್ಭದಲ್ಲಿ ವಲಯ ಭಿಕ್ಷಾಸೇವೆಯ ದಿವಸ ಶ್ರೀಗುರುಗಳ ಆಶೀರ್ವಚನದ ಪ್ರೇರಣೆ ಹಾಗೂ ವಲಯ ಮಾತೃ ವಿಭಾಗ ಪ್ರಧಾನೆಯಾಗಿರುವ ಶಿವಕುಮಾರಿ ಕುಂಚಿನಡ್ಕ ಇವರ ಬೆಂಬಲದಿಂದಾಗಿ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದವರು ಶ್ರೀಮತಿ ಉಮಾ ಪಿ . ಶೇಡಿಗುಮ್ಮೆ . ಮುಳ್ಳೇರಿಯ ಮಂಡಲ, ಕುಂಬಳೆ ವಲಯ ಕಣಿಪುರ ಘಟಕದವರಾದ ಇವರು ಚೆರುವತ್ತೂರಿನ ಮಾಧವ ರಾವ್ ,ಸರಸ್ವತಿ ದಂಪತಿಗಳ ಪುತ್ರಿ ಹಾಗೂ ಶೇಡಿಗುಮ್ಮೆ ಗಣೇಶ್ ಕುಮಾರ್ ಅವರ ಪತ್ನಿ. ಎಂ.ಎಸ್ಸಿ, ಬಿ.ಎಡ್ ಪಧವೀಧರರಾಗಿರುವ ಇವರು ಕುಂಬಳೆಯ […]

Continue Reading

ಶ್ರೀಮಠದ ಸೇವೆಯಲ್ಲಿ ಬದುಕು ಪಾವನವಾಗುತ್ತಿದೆ : ಸುಲೋಚನ‌ ಗಿರಿನಗರ

  ” ಶ್ರೀಮಠದ, ಗೋಮಾತೆಯ, ಶ್ರೀಗುರುಗಳ ಸೇವೆ ಮಾಡಲು ನಮಗೆ ದೊರಕಿರುವ ಈ ಅವಕಾಶ ನಿಜಕ್ಕೂ ಪೂರ್ವ ಜನ್ಮದ ಸುಕೃತದಿಂದ ಲಭಿಸಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಶ್ರೀಗುರುಗಳ ಆಶೀರ್ವಾದ ಪಡೆದು ಆರಂಭಿಸುವ ಯಾವುದೇ ಕಾರ್ಯವಾದರೂ ಅತಿ ಶೀಘ್ರದಲ್ಲಿ ಫಲ ದೊರಕುತ್ತದೆ ಎಂಬ ಅನುಭವ ನನ್ನದು ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ವಲಯದ ಸುಲೋಚನ ಗಿರಿನಗರ. ಸಿದ್ಧಾಪುರ ತಾಲೂಕಿನ ಇಟಗಿ ಹೊನ್ನೆಮಡಿಕೆಯ ಭಾಸ್ಕರ ಗಣೇಶ ಹೆಗಡೆ ಹಾಗೂ ಸರೋಜಾ ಭಾಸ್ಕರ ಹೆಗಡೆಯವರ ಪುತ್ರಿಯಾದ ಸುಲೋಚನ […]

Continue Reading

” ಸದಾ ಶ್ರೀಮಠದ ಸೇವೆಗೆ ತುಡಿಯುತ್ತಿದೆ ಮನಸ್ಸು ” : ವಿಜಯಾ ಸರ್ಪಂಗಳ

” ಶ್ರೀಗುರುಗಳ ಗೋಪ್ರೇಮ, ಗೋಮಾತೆಯ ರಕ್ಷಣೆಗಾಗಿ ಶ್ರೀ ಸಂಸ್ಥಾನದವರು ಕೈಗೊಂಡ ವಿವಿಧ ಯೋಜನೆಗಳು‌ ಹಾಗೂ ಶ್ರೀಮಠದ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳಬೇಕೆಂಬ ಹಂಬಲ ‘ ಇವುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇರಿಕೊಂಡೆ. ಈಗಾಗಲೇ ಒಂದು ವರ್ಷದ ಗುರಿ ತಲುಪಿರುವೆ. ಇನ್ನೊಂದು ವರ್ಷದ ಗುರಿ ತಲುಪುವ ಭರವಸೆಯಿದೆ ” ಎನ್ನುತ್ತಾರೆ ಮೂಲತಃ ಕಾಸರಗೋಡಿನ ಸರ್ಪಂಗಳದವರಾದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಶ್ರೀ ಅನ್ನಪೂರ್ಣೇಶ್ವರಿ ವಲಯ ನಿವಾಸಿಗಳಾಗಿರುವ ಎಸ್. ರಾಮಚಂದ್ರ ಭಟ್ಟರ ಪತ್ನಿ ವಿಜಯಾ ಸರ್ಪಂಗಳ ಅವರು. ಹಾಡು,ಸಂಗೀತ, ಹೊಲಿಗೆ, ಕಸೂತಿಗಳಲ್ಲಿ […]

Continue Reading

ಶ್ರೀಗುರುಗಳ ಕಾರುಣ್ಯದಿಂದ ಬದುಕಿನಲ್ಲಿ ಪವಾಡವೇ ನಡೆದಿದೆ: ಮಹಾದೇವಿ ಎಸ್‌ . ಭಟ್

  “ಶ್ರೀಗುರುಗಳ ಅನುಗ್ರಹವೊಂದಿದ್ದರೆ ಅಸಾಧ್ಯವಾದ ಯಾವ ಕಾರ್ಯವೂ ಇಲ್ಲ.‌ಗುರುವೊಲಿದರೆ ಕೊರಡು ಕೊನರುವುದು. ಇದಕ್ಕೆ ನನ್ನ ಬದುಕಿನಲ್ಲಿ ನಡೆದ ಸತ್ಯ ಘಟನೆಗಳೇ ಸಾಕ್ಷಿ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಕುಮಟಾ ಮಂಡಲದ, ಗುಡೇ ಅಂಗಡಿ ವಲಯದ ದೇವನಿ ಮನೆತನದ ಸೀತಾರಾಮ ಅನಂತ ಭಟ್ಟರ ಪತ್ನಿ ಮಹಾದೇವಿ ಎಸ್. ಭಟ್ . ಸಾಲಕೋಡು ಗ್ರಾಮದ ಕೆರೆಕೋಣ ವೆಂಕಟೇಶ ಹೆಗಡೆ ಮತ್ತು ಸುಬ್ಬಿ ಅವರ ಪುತ್ರಿಯಾದ ಮಹಾದೇವಿ ಅವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿತ್ತು. ಹಿಂದಿನ ಗುರುಗಳ ಕಾಲದಿಂದಲೂ ಇವರ ತವರುಮನೆಯವರು ಶ್ರೀಮಠದ […]

Continue Reading

“ಶ್ರೀಮಠದ ಸೇವೆಗೆ ಶ್ರೀಗುರುಗಳೇ ಪ್ರೇರಣೆ” : ಜೆಡ್ಡು ಸರಸ್ವತಿ ಭಟ್

  ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ‘ಜೆಡ್ಡು ಅಕ್ಕ’ ಎಂದೇ ಎಲ್ಲರಿಂದಲೂ ಪ್ರೀತಿಯಿಂದ ಕರೆಯಲ್ಪಡುವ ಸರಸ್ವತಿ ಭಟ್ ಅವರು ಮೂಲತಃ ವಿಟ್ಲ ಸಮೀಪದ ಜೆಡ್ಡು ಮನೆತನದವರು. ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಜಯಪ್ರಕಾಶ ವಲಯ ನಿವಾಸಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ತಮ್ಮ ಎಲ್ಲಾ ಕೆಲಸಗಳಿಗೂ ಪ್ರೇರಣೆ ಶ್ರೀಗುರುಗಳು ಎಂಬುದು ದೃಢವಾದ ನಂಬಿಕೆ.‌ ಪೆರುವಾಜೆಯ ಗೋವಿಂದ ಭಟ್, ಗೌರೀ ದಂಪತಿಗಳ ಪುತ್ರಿಯಾದ ಇವರು ಜೆಡ್ಡು ರಾಮಚಂದ್ರ ಭಟ್ಟರ ಪತ್ನಿ. ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ […]

Continue Reading

“ಪ್ರತಿಯೊಂದು ಹಸುವಿನಲ್ಲೂ ಲಕ್ಷ್ಮಿಯನ್ನು ಕಾಣುತ್ತಿದ್ದೇನೆ” : ಗೀತಾ ಯಾಜಿ, ಭಟ್ಕಳ

ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದ ಗೀತಾ ಯಾಜಿ ಅವರಿಗೆ ಹಸುಗಳೆಂದರೆ ವಿಪರೀತ ಮಮತೆ. ತಮ್ಮ ಬಳಿಗೆ ಬಂದ ಹಸುಗಳಿಗೆ ಒಂದಿಷ್ಟಾದರು ಮೇವು ಕೊಡದೆ ಕಳಿಸುವವರಲ್ಲ ಅವರು. ಪ್ರತಿಯೊಂದು ಹಸು ಬಳಿಗೆ ಬಂದಾಗಲೂ ಶ್ರೀಸಂಸ್ಥಾನದವರೇ ಆ ಹಸುವನ್ನು ತನ್ನ ಬಳಿಗೆ ಕಳುಹಿಸಿದ್ದಾರೆ ಎಂಬ ಭಾವನೆಯಿಂದ ನೋಡುವ ಗೀತಾ ಯಾಜಿ ಹೊನ್ನಾವರ ಮಂಡಲದ ಭಟ್ಕಳ ವಲಯದವರು. “ತವರುಮನೆಯಲ್ಲಿ ಹಿಂದೆ ಎರಡು ಹಟ್ಟಿಗಳ ತುಂಬಾ ಹಸುಗಳಿದ್ದವು. ಆ ಹಸುಗಳ ಜೊತೆಗಿನ ಒಡನಾಟದಿಂದಾಗಿಯೇ ಗೋಮಾತೆಯ ಬಗ್ಗೆ ಪ್ರೀತಿ ಮೂಡಲು ಸಾಧ್ಯವಾಯಿತು” ಎನ್ನುವ ಇವರು […]

Continue Reading

ನಿರಂತರವಾಗಿ ಗುರುಸೇವೆಯೇ ಜೀವನದ ಗುರಿ: ಇಂದಿರಾ ಬೈಲಕೇರಿ

  ಕೇಂದ್ರ ಸರಕಾರದ ಅಂಚೆ ಇಲಾಖೆಯಲ್ಲಿ ಉದ್ಯೋಗ ಸಲ್ಲಿಸಿ ನಿವೃತ್ತರಾಗಿರುವ ಇಂದಿರಾ ಬೈಲಕೇರಿ ಅವರು ಮೂಲತಃ ಗೋಕರ್ಣ ನಿವಾಸಿಗಳಾದರೂ ಪ್ರಸ್ತುತ ಶಿರಸಿಯ ಮಾರಿಕಾಂಬಾ ಕಾಲೋನಿಯಲ್ಲಿ ವಾಸಿಸುತ್ತಿರುವವರು. ಮೋಟಿನಸರ ವಿದ್ವಾನ್ ನರಸಿಂಹ ಶಾಸ್ತ್ರಿ ಮತ್ತು ಭವಾನಿ ದಂಪತಿಗಳ ಪುತ್ರಿಯಾದ ಇಂದಿರಾ ಅವರ ಪತಿ ರಾಮಚಂದ್ರ ಶಿವರಾಮ ಬೈಲಕೇರಿ . ಬಿ.ಎಸ್.ಎನ್.ಎಲ್.ನಲ್ಲಿ ಉದ್ಯೋಗಿಯಾಗಿದ್ದು ಈಗ ನಿವೃತ್ತರಾಗಿರುವ ಇವರು ಕಳೆದ ನಾಲ್ಕು ವರ್ಷಗಳಿಂದ ಅಂಬಾಗಿರಿ ವಲಯದಲ್ಲಿ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಪತಿಯ ಜೊತೆಗೂಡಿ ಇಂದಿರಾ ಅವರು ತಮ್ಮ ನಿವೃತ್ತ ಜೀವನವನ್ನು […]

Continue Reading

“ಶ್ರೀಗುರುಗಳ ಸೇವೆಗಾಗಿ ದೊರಕಿದ ಪುನರ್ಜನ್ಮವಿದು”: ಕಲ್ಪನಾ ತಳವಾಟ

“೧೯೯೯ರಲ್ಲಿ ಶ್ರೀಮಠಕ್ಕೆ ಕುಟುಂಬ ಸಮೇತಳಾಗಿ ಹೋಗಿದ್ದಾಗ ಶ್ರೀ ಸಂಸ್ಥಾನದವರು ‘ಗುರುಸೇವೆ ಮಾಡು’ ಎಂದು ಆಶೀರ್ವಾದ ಮಾಡಿದ್ದರು. ಅಂದಿನಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ೨೦೦೩ ರಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದೆ, ಮುಂದೆ ಆರು ವರ್ಷಗಳ ನಂತರ ಸಿದ್ಧಾಪುರ ಮಂಡಲದ ಮಾತೃಪ್ರಧಾನೆಯಾದೆ, ಮುಂದಿನ ಮೂರು ವರ್ಷಗಳ ಕಾಲ ಮಹಾಮಂಡಲದ ಮಾತೃಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದ್ದೇನೆ” ಎನ್ನುವ ಕಲ್ಪನಾ ತಳವಾಟ ಇವರು ಸಿದ್ಧಾಪುರ ಮಂಡಲದ ತಾಳಗುಪ್ಪ ವಲಯದ ಸತೀಶ್ ತಳವಾಟ ಅವರ ಪತ್ನಿ. ಪ್ರಸ್ತುತ ಮಾತೃತ್ವಮ್ ನ ಗೃಹ ಲಕ್ಷ್ಮಿ ಯಾಗಿ […]

Continue Reading

ಗುರುಕೃಪಾ ಕಟಾಕ್ಷದಿಂದಲೇ ದೊರಕಿದ ಶ್ರೀಗುರು ಸೇವಾಭಾಗ್ಯ: ಸುವರ್ಣ ಮಾಲಿನಿ ,ಹೊಸಮನೆ

  ಮಂಗಳೂರು ಮಂಡಲ ಮಧ್ಯವಲಯದ ಮೇರಿಹಿಲ್ ಗುರು ನಗರದ ಗುರುನಿಲಯ ನಿವಾಸಿಗಳಾಗಿರುವ ಭಾಸ್ಕರ ಹೊಸಮನೆ ಅವರ ಪತ್ನಿಯಾಗಿರುವ ಸುವರ್ಣ ಮಾಲಿನಿ ಅವರು ಸುಳ್ಯ ಸಮೀಪದ ಬದಂತಡ್ಕದ ನರಸಿಂಹ ಭಟ್ ಹಾಗೂ ಸುಮತಿ ದಂಪತಿಗಳ ಪುತ್ರಿ. ಮಂಗಳೂರಿನ ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ವಾಣಿಜ್ಯ ಶಾಸ್ತ್ರದ ಸಹ ಪ್ರಾಧ್ಯಾಪಕಿ ಹಾಗೂ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುವ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಸ್ವತಃ ತಾವೇ ಪೂರ್ಣ […]

Continue Reading

ಶ್ರೀಮಠದ ಸೇವೆ ಬದುಕಿನ ಪಲ್ಲವಿ: ಭಾರತೀ ಕೊಡಿಪ್ಪಾಡಿ

ಭಾರತಿ ಅವರ ಮಕ್ಕಳಿಬ್ಬರೂ ಉನ್ನತ ಪದವಿ ಗಳಿಸಿ ಉದ್ಯೋಗ ನಿರತರು. ಅಮ್ಮನೆಂದರೆ ಅವರಿಗೆ ವಿಪರೀತ ಪ್ರೀತಿ. ತಾಯಿಯ ಇಚ್ಛೆ ಮೀರಿದವರಲ್ಲ. ಇಂಥಹ ತುಂಬು ಪ್ರೀತಿಯ ವಾತಾವರಣವಿರುವ ಕುಟುಂಬವಿದ್ದರೂ ಅವರು ಬಯಸಿದ್ದು ಸರಳ ಜೀವನವನ್ನು, ಗೋಸೇವೆಯನ್ನು,ಅದರಲ್ಲೂ ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿರುವ ಗೋವುಗಳ ಸೇವೆಯನ್ನು. ಶ್ರೀಮಠಕ್ಕೆ ಬರುವ ಅತಿಥಿಗಳನ್ನು ಉಪಚರಿಸುತ್ತಾ ,ಗೋಶಾಲೆಯಲ್ಲಿರುವ ಹಸುಗಳ ಸೇವೆ ಮಾಡುತ್ತಾ ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡವರು. ಪಡಾರು ಪಿ.ಕೆ.ನಾರಾಯಣ ಭಟ್ ಹಾಗೂ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಚೆಕ್ಕೆಮನೆ ಮೂಲದ ಸುಳುಗೋಡು ಚಂದ್ರಶೇಖರ […]

Continue Reading

“ಗುರುಸೇವೆಯಿಂದ ಒಳಿತಾಗಿದೆ”: ಲಕ್ಷ್ಮೀ ಎಸ್.ಭಟ್

“ಹಲವಾರು ವರ್ಷಗಳಿಂದ ಶ್ರೀಮಠಕ್ಕೆ ಹೋಗುತ್ತಿದ್ದೇವೆ. ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿವಿಧ ಯೋಜನೆಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಲಭಿಸಿದೆ” ಎನ್ನುತ್ತಾರೆ ಉತ್ತರಕನ್ನಡ ಮೂಲದ ಹೊನ್ನಾವರ ತಾಲೂಕಿನ ಕಡತೋಕಾ ಮೂಲದ ಪ್ರಸ್ತುತ ಬೆಂಗಳೂರಿನ ಸರ್ವಜ್ಞ ವಲಯ ನಿವಾಸಿಗಳಾಗಿರುವ ಲಕ್ಷ್ಮೀ ಎಸ್. ಭಟ್. ಶ್ರೀಮಠದ ನಿರ್ದೇಶಾನುಸಾರವಾಗಿ ಪಠಿಸ ಬೇಕಾಗಿರುವ ಎಲ್ಲಾ ಸ್ತೋತ್ರಗಳನ್ನೂ ಕಂಠಪಾಠ ಮಾಡಿ ನಿತ್ಯವೂ ಪಠಿಸುವ ಲಕ್ಷ್ಮೀ ಭಟ್ ಅವರು ಕುಂಕುಮಾರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣಗಳನ್ನೂ ಮಾಡುತ್ತಾರೆ. ಧಾರ್ಮಿಕ ವಿಚಾರಗಳಲ್ಲಿ ಅತ್ಯಂತ ಆಸಕ್ತಿ ಹೊಂದಿರುವ […]

Continue Reading

ಗೋ ಸೇವೆಯಲ್ಲಡಗಿದೆ ನೆಮ್ಮದಿಯ ಸೆಲೆ: ಸಿರಿ ಕೂಡೂರು

ಬೆಂಗಳೂರು ಮಹಾನಗರದಲ್ಲಿ ಹುಟ್ಟಿ,ಬೆಳೆದು  ಮಂಗಳೂರು ಹೋಬಳಿಯ ಉರಿಮಜಲು ಮೂಲದ ಕೂಡೂರು ಮನೆತನದ ಲಕ್ಷ್ಮೀ ನಾರಾಯಣ ಕೂಡೂರು(ಎಲ್.ಎನ್.ಕೂಡೂರು) ಅವರನ್ನು ವಿವಾಹವಾದ ಸಿರಿ ಅವರಿಗೆ ಶ್ರೀ ಮಠದ ಸಂಪರ್ಕ ದೊರಕಿದ್ದು ಮದುವೆಯ ನಂತರ. “ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೀಠಾರೋಹಣ ಮಾಡಿದ ನಂತರ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು. ಶ್ರೀಗುರುಗಳ  ನಿರ್ದೇಶನದಂತೆ ಮಹಿಳಾ ಪರಿಷತ್ ರೂಪೀಕರಣಗೊಂಡಾಗ ನಾನು ವಿಟ್ಲ ಸೀಮಾ ಪರಿಷತ್ ನ ಮಾತೃ ಪ್ರಧಾನೆಯಾಗಿದ್ದೆ. ಅಂದು ಸಂಘಟನೆ ಬಲಪಡಿಸಲು ಹಲವಾರು ಕಡೆಗೆ ಭೇಟಿ ನೀಡಿದೆ. ಶ್ರೀಮಠದ ಸೇವೆಯಲ್ಲಿ […]

Continue Reading

“ಶ್ರೀಮಠದ ಸೇವೆಯೇ ಹೃದಯದುಸಿರು” : ಸುಶೀಲಾ ಜಿ.ಕೆ.ಭಟ್ ಮತ್ತು ಗೀತಾ ಪ್ರಸನ್ನ

ಹೊಸಮನೆ ಮಹಾಲಿಂಗ ಭಟ್, ಪಾರ್ವತಿ ದಂಪತಿಗಳ ಪುತ್ರಿಯಾದ ಸುಶೀಲಾ ಜಿ.ಕೆ. ಭಟ್ ಮೂಲತಃ ಮುಳ್ಳೇರಿಯ ಮಂಡಲದ ವಳಕ್ಕುಂಜದ ಗೋಪಾಲಕೃಷ್ಣ ಭಟ್ ಅವರ ಪತ್ನಿ. ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಆರ್. ಆರ್ . ಪುರ ನಿವಾಸಿಗಳಾಗಿರುವ ಇವರು ಹಾಗೂ ಇವರ ಪುತ್ರಿ, ಧರ್ಮತ್ತಡ್ಕ ಸಮೀಪದ ಪೂಕಳ ಕಂಪ ಸುಬ್ರಹ್ಮಣ್ಯ ಪ್ರಸನ್ನ ಇವರ ಪತ್ನಿಯಾದ ಗೀತಾ(ಪ್ರಸ್ತುತ ಬೆಂಗಳೂರು ನಿವಾಸಿಗಳು) ಇಬ್ಬರೂ ಗುರುಸೇವೆಯಲ್ಲಿ ಸದಾ ನಿರತರಾದವರು. “ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೀಠಾರೋಹಣದ ನಂತರ ನಾವು ಶ್ರೀಮಠದ ನಿಕಟ […]

Continue Reading

ಅನವರತ ಶ್ರೀ ಗುರುಚರಣ ಸ್ಮರಣೆಯೊಂದೇ ಮನದಲ್ಲಿ: ಯಶೋದಾ ಕೋಡಿಮೂಲೆ

“ನಮ್ಮ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೀಠವೇರಿದ ಸಂದರ್ಭದಲ್ಲಿ ಅವರ ಸಂದರ್ಶನವೊಂದನ್ನು ಪತ್ರಿಕೆಯಲ್ಲಿ ಓದಿದೆ. ಬದುಕಿನ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅಂದು ನಾವಿದ್ದೆವು.‌ ಆಗ ಶ್ರೀ ಗುರುಚರಣಗಳನ್ನು ನಂಬಿದರೆ ಕಷ್ಟದಿಂದ ಮುಕ್ತಿ ಸಿಗಬಹುದು ಎಂದು ಮನಸ್ಸಿಗೆ ಅನ್ನಿಸಿತು. ಅಂದಿನಿಂದ ಸತತವಾಗಿ ಶ್ರೀಗುರುಗಳನ್ನು ಸ್ಮರಿಸುತ್ತಲೇ ಇದ್ದೆ. ಒಂದು ಬಾರಿ ಅವರ ದರ್ಶನ ಪಡೆದು ಮಂತ್ರಾಕ್ಷತೆ ಸ್ವೀಕರಿಸಬೇಕೆಂದು ಕಾತರಿಸುತ್ತಲೇ ಇದ್ದೆ. ನಾನಿರುವ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮಕ್ಕಳು ಹೊಸನಗರಕ್ಕೆ ಹೋಗುವಾಗ […]

Continue Reading

“ಕಷ್ಟ ಪರಂಪರೆಯಿಂದ ಮುಕ್ತಿ ದೊರಕಿದ್ದು ಶ್ರೀ ಗುರು ಕಾರುಣ್ಯದಿಂದ ” : ಕೃಷ್ಣಕುಮಾರಿ ಬದನಾಜೆ

“ಶ್ರೀ ಗುರುಚರಣಗಳನ್ನು ನಂಬಿದವರಿಗೆ ಬದುಕಿನಲ್ಲಿ ಸೋಲಿಲ್ಲ.ಎಂಥಹ ಕಷ್ಟದ ಹೊಡೆತವನ್ನು ನಿವಾರಿಸುವ ಶಕ್ತಿ ಗುರು ಕೃಪೆಗಿದೆ.ಇದು ನಮ್ಮ ಬದುಕಿನಲ್ಲಿ ಅನುಭವಿಸಿ ಅರಿತುಕೊಂಡ ಸತ್ಯ. ಆದುದರಿಂದಲೇ ಬದುಕಿನಲ್ಲಿ ಮೊದಲ ಆದ್ಯತೆ ಗುರು ಸೇವೆ,ಗೋಸೇವೆಗೆ” ಎನ್ನುತ್ತಾರೆ ಮಿಂಚಿನಡ್ಕ ಮೂಲದ ಪ್ರಸ್ತುತ ವಿಟ್ಲ ಸಮೀಪ ಬದನಾಜೆ ನಿವಾಸಿಗಳಾಗಿರುವ ಕೃಷ್ಣಕುಮಾರಿ ಬದನಾಜೆ. ಶ್ರೀಮಠದ ಸಂಪರ್ಕ ಅವರಿಗೆ ಎಳವೆಯಿಂದಲೇ ದೊರಕಿತ್ತು. ತಂದೆ ಶೇಂತಾರು ಗೋಪಾಲಕೃಷ್ಣ ಭಟ್ ಉರುವಾಲು ವಲಯದ ಗುರಿಕ್ಕಾರರಾಗಿ ಸೇವೆ ಸಲ್ಲಿಸಿದವರು. ಪತಿ ಬದನಾಜೆ ಪುರುಷೋತ್ತಮ ಭಟ್ ಮಂಗಳೂರು ಹೋಬಳಿಯ ಅಮೃತಸತ್ವ ಸಂಚಾಲಕರಾಗಿ, ವಿಟ್ಲ […]

Continue Reading

ಗೋಸೇವೆ ಮತ್ತು ಶ್ರೀ ಮಠದ ಸೇವೆಯಿಂದ ದೊರಕುವ ಆತ್ಮತೃಪ್ತಿ ಇನ್ನೆಲ್ಲೂ ಸಿಗದು: ಡಾ. ಶಾರದಾ ಜಯಗೋವಿಂದ

ಮೂಲತಃ ಮುಂಗ್ಲಿಮನೆ ಫ್ರೊ. ಮರಿಯಪ್ಪ ಭಟ್ ಮತ್ತು ಸತ್ಯಭಾಮಾ ದಂಪತಿಗಳ ಪುತ್ರಿಯಾದ ಡಾ. ಶಾರದಾ ಜಯಗೋವಿಂದ ಅವರು ಎಂ.ಎ.ಪಿಎಚ್.ಡಿ ಪದವಿ ಗಳಿಸಿದವರು. ಚೆನ್ನೈ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ (Rank)ದೊಂದಿಗೆ ಇಂಗ್ಲೀಷ್ ಎಂ. ಎ.ಪದವಿ ಗಳಿಸಿದ ಅವರು ಆಂಗ್ಲಭಾಷಾ ಉಪನ್ಯಾಸಕಿಯಾಗಿ ದೆಹಲಿ,ನೈಜೀರಿಯಾಗಳಲ್ಲಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದವರು. ಆಲಂಗಾರು ಮನೆತನದ ಜಯಗೋವಿಂದ ಅವರ ಪತ್ನಿಯಾದ ಶಾರದಾ ಅವರು ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ನಿವಾಸಿಗಳಾಗಿ ಶ್ರೀಮಠದ ಸೇವೆಗೆ ಸದಾ ಮುಂಚೂಣಿಯಲ್ಲಿದ್ದಾರೆ. ೧೯೯೧ ರ […]

Continue Reading

ಶ್ರೀ ಮಠದ ಸೇವೆ ಮನಸ್ಸಿಗೆ ಮುದ ನೀಡುವ ಕಾರ್ಯ: ಮನೋರಂಜಿನಿ ಆರ್ .ಭಟ್ , ಮುಂಬೈ

“ಶ್ರೀಮಠದ ಸೇವೆ ಮನಸ್ಸಿಗೆ ಅತ್ಯಂತ ಮುದ ನೀಡುತ್ತಿದೆ. ಮುಂಬೈ ಮಹಾನಗರದಲ್ಲಿ ಪ್ರತೀ ತಿಂಗಳು ನಡೆಯುವ ಹವ್ಯಕ ಸಭೆಗಳು ನಮ್ಮ ಸಂಘಟನೆಯನ್ನು ಬಲ ಪಡಿಸಲು ಅತ್ಯಂತ ಉಪಯುಕ್ತವಾಗಿದೆ. ಶ್ರೀಗುರುಗಳ ಎಲ್ಲಾ ಯೋಜನೆಗಳಲ್ಲೂ ನಾವೆಲ್ಲ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದೇವೆ” ಈ ಮಾತುಗಳು ಸಿದ್ಧಮೂಲೆ ಮೂಲದ ಉದ್ಯೋಗ ನಿಮಿತ್ತ ಪ್ರಸ್ತುತ ಮುಂಬೈ ನಿವಾಸಿಗಳಾಗಿರುವ ರಮಣ ಭಟ್ ಸಿದ್ಧಮೂಲೆ ಇವರ ಪತ್ನಿ ಮನೋರಂಜಿನಿಯವರದ್ದು. ಮಂಗಳೂರು ಸಮೀಪದ ಪಣಂಬೂರು ರಾಮರಾವ್,ಮೀನಾಕ್ಷಿ ದಂಪತಿಗಳ ಪುತ್ರಿಯಾದ ಮನೋರಂಜಿನಿಯವರು ಮುಂಬೈ ನಗರದಲ್ಲೇ ಬೆಳೆದವರು. ಕೆನರಾ ಬ್ಯಾಂಕ್ ನಲ್ಲಿ ಉನ್ನತ ಉದ್ಯೋಗದಲ್ಲಿದ್ದ […]

Continue Reading

ಗೋಮಾತೆಯ ಸೇವೆಯಿಂದ ಸಾರ್ಥಕ ಭಾವ ಮೂಡಿದೆ: ಕಂಜಾಕ್ಷಿ ನಾಗಭೂಷಣ

ಸಾಗರ ಸಮೀಪದ ಹುಕ್ಲು ಮೂಲದವರಾದ ಪ್ರಸ್ತುತ ಉದ್ಯೋಗ ನಿಮಿತ್ತ ಬೆಂಗಳೂರಿನ ಜೆಪಿ ನಗರ ನಿವಾಸಿಯಾಗಿರುವ ಕಂಜಾಕ್ಷಿ ನಾಗಭೂಷಣ ಅವರು ಶ್ರೀಮಠದ ಸೇವೆ, ಗೋಸೇವೆಯಲ್ಲಿ ಸಾರ್ಥಕತೆ ಕಂಡವರು. “ಶ್ರೀಗುರುಗಳ ಮಾತುಗಳಿಂದ ಪ್ರೇರಣೆಗೊಂಡು ಮಾಸದ ಮಾತೆಯಾದೆ. ಇದರಲ್ಲಿ ವೈವಿಧ್ಯಮಯ ಅನುಭವಗಳನ್ನು ಗಳಿಸಿಕೊಂಡು ಮಾತೃತ್ವಮ್ ಗುರಿಯನ್ನು ತಲುಪಿದೆ. ನನ್ನ ಕೈಲಾದ ಮಟ್ಟಿಗೆ ಗೋಸೇವೆ, ಗುರುಸೇವೆ ಮಾಡಿದ ನೆಮ್ಮದಿ, ಸಂತೃಪ್ತಿ ಮನದಲ್ಲಿದೆ” ಎನ್ನುವ ಇವರು ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದವರು. ಈ ಅನುಭವವೇ ಅವರಿಗೆ ಮಾತೃತ್ವಮ್ ಗುರಿ […]

Continue Reading

ಶ್ರೀ ಸಂಸ್ಥಾನದವರ ಯೋಜನೆಗಳಲ್ಲಿ ಭಾಗಿಯಾಗುವುದೇ ಸೌಭಾಗ್ಯ : ಜ್ಯೋತಿ ಕೇಶವ ಭಟ್

ಅಳಿಕೆ ಗ್ರಾಮದ ಎರುಂಬು ಕೇಶವ ಭಟ್ ಇವರ ಪತ್ನಿಯಾಗಿರುವ ಜ್ಯೋತಿ ಕೆ.ಭಟ್ ವೃತ್ತಿಯಲ್ಲಿ ಉಪನ್ಯಾಸಕಿಯಾದರೂ ಶ್ರೀಮಠದ ಸೇವಾಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವವರು. ನೆಗಳಗುಳಿ ಮಹಾಬಲೇಶ್ವರ ಭಟ್ ಶಂಕರಿ ಅಮ್ಮ ದಂಪತಿಗಳ ಪುತ್ರಿಯಾಗಿರುವ ಜ್ಯೋತಿಗೆ ಬಾಲ್ಯದಿಂದಲೇ ಗೋವುಗಳ ಮೇಲೆ ವಿಪರೀತ ಪ್ರೀತಿ. “ತವರುಮನೆಯಲ್ಲಿದ್ದ ದೇಶೀ ತಳಿಯ ಹಸುವಿನ ಹಾಲು ಕುಡಿದೇ ಬೆಳೆದ ನನಗೆ ಈಗಲೂ ಗೋವುಗಳೆಂದರೆ ವಿಶೇಷ ವ್ಯಾಮೋಹ. ಆದರೆ ನಮ್ಮ ಉದ್ಯೋಗ ನಿಮಿತ್ತ ಪೇಟೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಬಂದ ಕಾರಣ ಶ್ರೀಗುರುಗಳ ಗೋಸೇವಾ ಯೋಜನೆಗಳಿಗೆ ನಮ್ಮಿಂದ ಸಾಧ್ಯವಾದಷ್ಟು ಸಹಕಾರ […]

Continue Reading

“ಮಾಸದ ಮಾತೆಯಾಗಲು ಕಾರಣ, ಪ್ರೇರಣ ಹಾಗೂ ಧಾರಣಾಶಕ್ತಿ ಶ್ರೀಚರಣ” ಲಲಿತಾಲಕ್ಷ್ಮೀ ಭಟ್ಟ ಸಿದ್ಧಾಪುರ

ಲಲಿತಾಲಕ್ಷ್ಮೀ ಎಂಬ ಹೆಸರು ಶ್ರೀಮಠದ ಶಿಷ್ಯರಿಗೆ ಸದಾ ಸುಪರಿಚಿತ. ಅದರಲ್ಲೂ ಗುರುಚರಣ ಸೇವಕಿ ಲಲಿತಾಲಕ್ಷ್ಮೀ ಎಂಬ ಕಾವ್ಯನಾಮದಿಂದ ಸದಾ ಶ್ರೀಗುರುಗಳ ಬಗ್ಗೆ, ಶ್ರೀಮಠದ ಬಗ್ಗೆ, ಶ್ರೀಮಠದ ಶಿಷ್ಯಬಂಧುಗಳ ಅನುಭವಗಳ ಬಗ್ಗೆ ಬಹಳ ಸೊಗಸಾದ ಭಾಷೆಯಲ್ಲಿ ಆಸ್ತಿಕರ ಮನಸ್ಸಿನಲ್ಲಿ ಭಾವುಕತೆ ತುಂಬುವಂತಹ ಆಪ್ತ ಶೈಲಿಯ ಬರಹವನ್ನು ಮಾಧ್ಯಮಗಳಲ್ಲಿ ಪ್ರಸ್ತುತ ಪಡಿಸುವ ಇವರ ಲೇಖನಗಳನ್ನು ಓದದ ಶಿಷ್ಯಬಂಧುಗಳು ವಿರಳ. ಶ್ರೀಮಠದ ಸೇವೆಯಲ್ಲಿ ಅತೀವ ಆಸಕ್ತಿ, ಶ್ರದ್ಧೆ,ಭಕ್ತಿ ಹೊಂದಿರುವ ಇವರು ಮಾತೃತ್ವಮ್ ಯೋಜನೆಯಲ್ಲಿ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಆರಂಭಿಸಿ ಒಂದೇ […]

Continue Reading