” ನಗರನಿವಾಸಿಯಾದರೂ ಗೋಸೇವೆಯ ಸದವಕಾಶ ದೊರಕಿದ್ದು ಮಾತೃತ್ವಮ್ ಯೋಜನೆಯಿಂದ ” : ರೂಪಾ ಹೆಗಡೆ , ಬೆಂಗಳೂರು

  ” ದೇಶೀ ತಳಿಯ ಗೋವುಗಳ ರಕ್ಷಣೆಗಾಗಿ ನಮ್ಮ ಶ್ರೀಗಳು ಹಾಕಿರುವ ಕಾರ್ಯಯೋಜನೆಗಳು ನಿಜಕ್ಕೂ ಅದ್ಭುತ. ಗೋ ಜಾಗೃತಿಗಾಗಿ ಗೋಯಾತ್ರೆ, ವಿಶ್ವ ಗೋ ಸಮ್ಮೇಳನ , ವಿಶ್ವ ಮಂಗಲ ಗೋಗ್ರಾಮ ಯಾತ್ರೆ……ಈ ರೀತಿಯ ಅನೇಕ ಅಭಿಯಾನಗಳಿಂದ ಸಮಾಜ ಎಚ್ಚರಗೊಳ್ಳುತ್ತಿದೆ. ದೇಶೀಯ ಗೋವಿನ ಉಪಯುಕ್ತತೆಯ ಬಗ್ಗೆ, ಗವ್ಯೋತ್ಪನ್ನಗಳ ಬಳಕೆಯ ಬಗ್ಗೆ ಜನರಿಗೆ ಆಸಕ್ತಿ ಮೂಡಲಾರಂಭಿಸಿದೆ. ಗೋವುಗಳ ಮೇಲೆ ಪ್ರೀತಿಯಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಗೋಸಾಕಣೆ ಅಸಾಧ್ಯವಾದ ಅನೇಕ ಮಂದಿಗೆ ಗೋಸೇವೆಗೆ ಅವಕಾಶ ಒದಗಿದ್ದು ಶ್ರೀಗುರುಗಳ ಮಹತ್ವಪೂರ್ಣ ಯೋಜನೆಯಾದ ಮಾತೃತ್ವಮ್ ಮೂಲಕ […]

Continue Reading

” ಶ್ರೀಗುರು ಕರುಣಾಮೃತದ ಸವಿ ಅಪಾರ ” : ಶುಭಲಕ್ಷ್ಮಿ ಮುಂಡಾಜೆ

  ” ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಗೋಮಾತೆಯ ಸೇವೆ ಆರಂಭಿಸುವಾಗ ಗುರಿ ತಲುಪಲು ಸಾಧ್ಯವೇ ‘ ಎಂಬ ಅಳುಕು ಮನದಲ್ಲಿತ್ತು. ಶ್ರೀಗುರುಗಳಿಂದ ಮಂತ್ರಾಕ್ಷತೆ ಪಡೆದ ಮೇಲೆ ಬಹು ಬೇಗನೆ ಗುರಿ ಮುಟ್ಟಿದೆ. ಶ್ರೀಗುರು ಕರುಣೆಯ ಬಗ್ಗೆ ಇದಕ್ಕಿಂತ ಹೆಚ್ಚು ಹೇಳಲು ಇನ್ನೇನಿದೆ ?” ಎಂದವರು ಮುಂಡಾಜೆ ಮೂಲದ ಪ್ರಸ್ತುತ ಉಪ್ಪಿನಂಗಡಿ ಮಂಡಲ ,ಮಾಣಿ ವಲಯದ ಕೆದಿಲ ನಿವಾಸಿಗಳಾಗಿರುವ ನರಸಿಂಹರಾಜ್ ಅವರ ಪತ್ನಿ ಶುಭಲಕ್ಷ್ಮಿ. ಸಾಮೆತ್ತಡ್ಕ ಸತ್ಯನಾರಾಯಣ ಭಟ್, ಸರ್ವಮಂಗಳಾ ದಂಪತಿಗಳ ಪುತ್ರಿಯಾದ ಇವರು ಎರಡು […]

Continue Reading

” ಗೋಸೇವೆಯಲ್ಲಿ ಭಾಗಿಯಾಗುವುದು ಬಾಳಿನ ಭಾಗ್ಯ ” : ಸುಜಲಾ ಭಟ್ ಬೆಂಗಳೂರು

  ” ಮುಕ್ಕೋಟಿ ದೇವರುಗಳ ಆವಾಸಸ್ಥಾನವಾದ ಗೋಮಾತೆ ನಮಗೆ ಪರಮಪೂಜ್ಯಳು. ನೂತನ ಗೃಹಪ್ರವೇಶದ ಸಂದರ್ಭದಲ್ಲಿ ಗೋಮಾತೆಯನ್ನೂ ಮನೆಯೊಳಗೆ ಕರೆತಂದು ಪೂಜಿಸುವ ಸಂಸ್ಕೃತಿ ನಮ್ಮದು. ಇಂದು ಪೇಟೆ ಜೀವನದ ಧಾವಂತದ ನಡುವೆ ಮನೆಗಳಲ್ಲಿ ಗೋವನ್ನು ಸಾಕುವುದು ಕಷ್ಟಕರ. ಆದರೆ ಶ್ರೀಗುರುಗಳ ಮಾತೃತ್ವಮ್ ಯೋಜನೆಯ ಮೂಲಕ ಗೋಮಾತೆಯ ಸೇವೆ ಮಾಡುವ ಅವಕಾಶ ಒದಗಿ ಬಂದಿರುವುದು ಬಾಳಿನ ಭಾಗ್ಯ ಎಂದು ಭಾವಿಸುತ್ತೇನೆ ” ಎಂದವರು ಮೂಲತಃ ಕಾಸರಗೋಡಿನ ದೊಡ್ಡಮಾಣಿಯವರಾದ , ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಅನ್ನಪೂರ್ಣೇಶ್ವರಿ ವಲಯ ನಿವಾಸಿಗಳಾಗಿರುವ ಮಹಾಲಿಂಗ […]

Continue Reading

” ಗೋವು ಎಂಬುದೇ ಮಧುರ ಭಾವ ” : ಸುನಂದಾ ಮಂಗಳೂರು

  ” ನಮ್ಮ ಸಂಸ್ಕೃತಿಯಲ್ಲಿ ಮಾತೆಯ ಸ್ಥಾನದಲ್ಲಿ ಗುರುತಿಸಲ್ಪಡುವುದು ಗೋವು ಮಾತ್ರ. ನಮ್ಮ ಗುರುಗಳ ಗೋ ಪರ ಆಂದೋಲನಗಳು ನಮ್ಮ ಗೋಸೇವೆಗೆ ಸ್ಪೂರ್ತಿ ನೀಡಿದೆ. ಗೋವಿನ ಧಾರ್ಮಿಕ ಮಹತ್ವ, ಗೋಜನ್ಯ ಉತ್ಪನ್ನಗಳ ಔಷಧೀಯ ಗುಣಗಳನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸುವ ಹೊಣೆ ನಮ್ಮಂತಹ ಮಾತೆಯರ ಮೇಲಿದೆ.‌ ಶ್ರೀಗುರುಗಳ ಅನುಗ್ರಹದಿಂದ ಈ ನಿಟ್ಟಿನಲ್ಲಿ ಕಿಂಚಿತ್ ಸೇವೆ ಮಾಡಲು ಸಾಧ್ಯವಾಗುತ್ತಿದೆ ಎಂಬುದೇ ಸಂತಸದ ವಿಚಾರ ” ಎಂದು ನುಡಿದವರು ಮೂಲತಃ ಪೈಲೂರಿನವರಾದ ಪ್ರಸ್ತುತ ಮಂಗಳೂರು ಮಂಡಲ ಮಧ್ಯ ವಲಯ ನಿವಾಸಿಗಳಾಗಿರುವ […]

Continue Reading

” ಬಾಗಿನ ಸ್ವೀಕಾರ ಎಂದರೆ ಬಾಳಿನ ಸೌಭಾಗ್ಯ ” : ಶೋಭಾ ಆರ್. ಭಟ್ಟ ಮಣ್ಣಿಗೆ

  ” ಕೆಲವು ವರ್ಷಗಳ ಹಿಂದೆ ಶ್ರೀ ಸಂಸ್ಥಾನದವರು ನಮ್ಮೂರಿನ ಆಸುಪಾಸಿಗೆ ಬಂದರೆ ಸಾಧ್ಯವಾದಾಗಲೆಲ್ಲ ನಮ್ಮ ಮನೆಯ ಮಲೆನಾಡು ಗಿಡ್ಡ ತಳಿಯ ಹಸುವಿನ ಹಾಲನ್ನು ಕೊಂಡೊಯ್ದು , ಶ್ರೀ ಕರಾರ್ಚಿತ ದೇವರುಗಳ ಪೂಜೆಯನ್ನು ಮನಸ್ಸು ಹೃದಯ ತುಂಬುವಷ್ಟು ಶ್ರದ್ಧೆಯಿಂದ ನೋಡಿ ಬರುತ್ತಿದ್ದೆ. ನಂತರ ಶ್ರೀಮಠದ ಒಂದೊಂದೇ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಶ್ರೀಗುರುಕೃಪೆಯಿಂದ ಒದಗಿಬಂತು. ಶರಾವತಿ ಎಡದಂಡೆಯಲ್ಲಿ ಮುಷ್ಟಿ ಭಿಕ್ಷಾ ಸಹಾಯಕಿಯಾದೆ. ಮುಂದೆ ವಲಯ ಮಾತೃಪ್ರಧಾನೆಯಾದೆ. ಇದೀಗ ಮಂಡಲ ಬಿಂದು ಸಿಂಧು ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದೆಲ್ಲವೂ […]

Continue Reading

ಗೋಸಂರಕ್ಷಣೆ ಮನುಕುಲದ ಅಸ್ತಿತ್ವಕ್ಕೆ ಅತೀ ಅಗತ್ಯ : ಮಂಗಳಾ ಶ್ರೀಧರ ಜೋಶಿ

    ” ಗೋವು ಭಾರತೀಯರ ಜೀವನಾಡಿ. ಗೋವಿಲ್ಲದೆ ನಾವಿಲ್ಲ. ಗೋ ಸಂರಕ್ಷಣೆ ನಮ್ಮ ಬದುಕಿಗೆ, ಅಸ್ತಿತ್ವಕ್ಕೆ ಅತೀ ಅಗತ್ಯ ಎಂಬುದನ್ನು ತಿಳಿಸುವುದಕ್ಕಾಗಿಯೇ ನಮ್ಮ ಗುರುಗಳು ದೇಶೀಯ ಹಸುಗಳ ಸಂರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ. ಶ್ರೀಗುರುಗಳ ಅನುಗ್ರಹದಿಂದ ಅದರಲ್ಲೊಂದು ಸೇವಾಬಿಂದುವಾಗಿ ನಮ್ಮ ಕೈಲಾದಷ್ಟು ಸೇವೆ ಸಲ್ಲಿಸುವ ಸದವಕಾಶ ಒದಗಿ ಬಂದಿದ್ದು ಪೂರ್ವ ಜನ್ಮದ ಸುಕೃತದಿಂದ ” ಎಂದವರು ಹೊನ್ನಾವರ ಕಾಸರಕೋಡು ಮೂಲದ ಪ್ರಸ್ತುತ ಮಂಗಳೂರು ದಕ್ಷಿಣ ಮಂಡಲ ನಿವಾಸಿಗಳಾಗಿರುವ ಶ್ರೀಧರ ಜೋಶಿ ಅವರ ಪತ್ನಿ ಮಂಗಳಾ.   […]

Continue Reading

” ಗೋಸೇವಾ ಮನೋಭಾವವಿದ್ದರೆ ಗುರಿ ತಲುಪುವ ಹಾದಿ ಶ್ರೀಗುರುಗಳು ತೋರುತ್ತಾರೆ ” : ಸ್ವಪ್ನಲಕ್ಷ್ಮಿ .ಕೆ

  ” ಶ್ರೀಮಠದ ಸೇವೆಯಲ್ಲಿ ತುಂಬಾ ಆಸಕ್ತಿಯಿದ್ದರೂ ನನ್ನ ದೈನಂದಿನ ಜೀವನದ ಜವಾಬ್ದಾರಿಗಳ ನಡುವೆ ಮಾಸದ ಮಾತೆಯಾಗಿ ಗುರಿ ಸೇರಲು ಸಾಧ್ಯವೇ ಎಂಬ ಆತಂಕದಿಂದ ಆರಂಭದಲ್ಲಿ ಮಾಸದ ಮಾತೆಯಾಗಲು ತುಸು ಅಳುಕಿದೆ. ಮುಂದೆ ಶ್ರೀಗುರುಗಳೇ ” ಮಾಸದ ಮಾತೆಯಾಗು ” ಎಂದು ಹರಸಿದಾಗ ನನ್ನ ತುಮುಲವನ್ನು ಭಿನ್ನವಿಸಿದೆ.‌ ” ನಿನಗೆ ಶೀಘ್ರವಾಗಿ ಗುರಿ ಮುಟ್ಟಲು ಸಾಧ್ಯವಿದೆ ” ಎಂಬ ಶ್ರೀಗುರುಗಳ ಅನುಗ್ರಹ ಬಹಳ ಬೇಗನೆ ಫಲಿಸಿತು. ಅಪ್ಪ, ಅಮ್ಮ, ತಂಗಿ ಹಾಗೂ ಮನೆಯವರ ಸಹಕಾರದಿಂದ ಬಹಳ ಬೇಗನೆ […]

Continue Reading

” ದೇಶೀಯ ತಳಿಯ ಹಸುಗಳು ದೈವಸ್ವರೂಪಿಗಳು ” : ಶಾರದಾ ರಾಮಚಂದ್ರ ಭಟ್, ಆನೆಕಾರ್

  ” ನಮ್ಮ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶಿಷ್ಟ ಸ್ಥಾನವಿದೆ. ಗೋಗ್ರಾಸ, ಗೋದಾನಗಳು ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಒಳಗೊಂಡವುಗಳು. ಹಟ್ಟಿ ತುಂಬ ಹಸುಗಳಿದ್ದ ಕಾಲವೊಂದಿತ್ತು. ಗೋ ಆಧಾರಿತ ಕೃಷಿಯಿಂದ ಜೀವನ ಸಾಗಿಸುತ್ತಿದ್ದವರಿಗೂ ಕಾಲ ಬದಲಾದಂತೆ ಜೀವನ ಕ್ರಮವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು. ‌ನಮ್ಮ ಹಟ್ಟಿಯ ಹಸುಗಳನ್ನು ಇನ್ನೊಬ್ಬರಿಗೆ ಕೊಡುವಾಗ ಉಂಟಾಗುವ ಸಂಕಟ ಅಸಹನೀಯ. ಆದರೆ ಈಗ ಹಿಂದಿನಂತೆ ಹಟ್ಟಿ ತುಂಬ ಹಸುಗಳನ್ನು ಸಾಕುವುದು ಸುಲಭವಲ್ಲ ” ಎಂದು ಗೋವುಗಳ ಬಗ್ಗೆ ಮನತುಂಬಿ ನುಡಿದವರು ಉಪ್ಪಿನಂಗಡಿ ಮಂಡಲ ಚೊಕ್ಕಾಡಿ ವಲಯದ […]

Continue Reading

” ಗೋಮಾತೆಗಾಗಿ ಸಮಾಜ ಒಗ್ಗೂಡಲು ಕಾರಣ ಶ್ರೀಗುರುಗಳು ” : ಪೂರ್ಣಿಮಾ ಈಶ್ವರ ಭಟ್, ಮಂಗಳೂರು

  ” ಸಮಾಜದ ಒಳಿತಿಗಾಗಿ ಶ್ರೀಗುರುಗಳು ಕೈಗೊಂಡಿರುವ ಅನೇಕ ಯೋಜನೆಗಳಲ್ಲಿ ಅತ್ಯಂತ ಸರಳ,ಸುಲಭವಾಗಿರುವ ಯೋಜನೆ ಮಾತೃತ್ವಮ್. ಶ್ರೀಗುರುಗಳ ಅನುಗ್ರಹವಿದ್ದರೆ ಇದರಲ್ಲಿ ಗುರಿ ತಲುಪುವುದು ಕಷ್ಟಕರವಲ್ಲ. ಇಂದು ಗೋಮಾತೆಯ ಸೇವೆಗಾಗಿ ಸಮಾಜ ಒಂದಾಗುತ್ತಿದೆ ಎನ್ನಲು ಹರ್ಷವಾಗುತ್ತಿದೆ ” ಎಂದವರು ಮಂಗಳೂರು ಮಂಡಲ ಮಧ್ಯ ವಲಯದ ಕಿಳಿಂಗಾರು ಈಶ್ವರ ಭಟ್ ಅವರ ಪತ್ನಿ ಪೂರ್ಣಿಮಾ .   ಗೃಹಿಣಿಯಾಗಿರುವ ಇವರು ಗಂಗರಮಜಲು ಈಶ್ವರ ಭಟ್ , ಶಾರದಾ ದಂಪತಿಗಳ ಪುತ್ರಿ.‌   ” ಲಕ್ಷ್ಮೀ ಪ್ರಕಾಶ್ ಹಾಗೂ ಸುಮಾ ರಮೇಶ್ […]

Continue Reading

ಗೋಸೇವೆಯೇ ನಮ್ಮ ಜೀವನ : ಆಶಾಕಿರಣ ಆರ್. ಹೆಮ್ಮಣ್ಣ

  Hem’s ಸಂಸ್ಥೆಯ ಮೂಲಕ ಸಮಾಜಕ್ಕೆ ಪರಿಚಿತರಾಗಿರುವ ಆಶಾಕಿರಣ ಆರ್ ಹೆಮ್ಮಣ್ಣ ಅವರು ಎಳವೆಯಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವರು. ಶ್ರೀರಾಮಚಂದ್ರಾಪುರ ಮಂಡಲದ ಗನವಳ್ಳಿಯ ವಾಮದೇವಯ್ಯ ಹಾಗೂ ಲೀಲಾವತಿ ದಂಪತಿಗಳ ಪುತ್ರಿಯಾದ ಆಶಾಕಿರಣ ಪ್ರಸ್ತುತ ಮಂಗಳೂರು ಮಂಡಲ ಕುಂದಾಪುರ ವಲಯದ ನಿವಾಸಿಯಾಗಿದ್ದಾರೆ. ‘ ಸುರಭಿ ಸಾರ’ ದ ತಯಾರಕ ಸಂಸ್ಥೆಯಾದ ಹೆಮ್ಸ್ ಉದ್ಯಮವನ್ನು ನಡೆಸುತ್ತಿರುವ ರಾಘವೇಂದ್ರ ಹೆಮ್ಮಣ್ಣ ಅವರ ಪತ್ನಿಯಾದ ಇವರು ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆ. ” ಬಾಲ್ಯದಲ್ಲೇ ಶ್ರೀಮಠಕ್ಕೆ ಬರುತ್ತಿದ್ದೆ.‌ಮದುವೆಯ ನಂತರ ಮತ್ತಷ್ಟು […]

Continue Reading

ಗೋಸೇವೆಗೆ ಪ್ರೇರಣೆ ಮಹಾನಂದಿ : ಶೈಲಾ ರಾಮಚಂದ್ರ ಭಟ್ ,ಪದ್ಯಾಣ

  ” ಬಾಲ್ಯದಲ್ಲೇ ಗೋವುಗಳ ಮೇಲೆ ತುಂಬಾ ಪ್ರೀತಿ ನನಗೆ. ೯೯ ರಿಂದ ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಇದು ಮತ್ತಷ್ಟು ಹೆಚ್ಚಾಯಿತು. ಹೊಸನಗರದ ಗೋಶಾಲೆಗಾಗಿ ವೈವಿಧ್ಯಮಯ ತಳಿಗಳ ಅನ್ವೇಷಣೆಗಾಗಿ ಅನೇಕ ಊರುಗಳಿಗೆ ತೆರಳಿದ‌ ಅನುಭವವಿದೆ. ಸಂತೆಗಳಲ್ಲಿ ಹಸುಗಳನ್ನು ಮಾರಾಟಕ್ಕಾಗಿ ಕಟ್ಟಿ ಹಾಕುವುದನ್ನು ಕಂಡಾಗ ಮನಸ್ಸು ಕರಗಿ ಕಣ್ಣೀರು ಸುರಿಸಿದ್ದೂ ಇದೆ. ನನ್ನ ಇಷ್ಟದ ಗೋವು ಮಹಾನಂದಿ. ಅವನನ್ನು ನಾನು ‘ ದೊಡ್ಡಣ್ಣ’ ಎಂದೇ ಕರೆಯುತ್ತಿದ್ದೆ. ಅವನೇ ನನ್ನ ಗೋಸೇವೆಗೆ ಪ್ರೇರಣೆ ” ಎಂದವರು ಮಂಗಳೂರು ಮಂಡಲ […]

Continue Reading

” ಶ್ರೀಮಠದ ಸೇವೆಯೆಂದರೆ ಮಕ್ಕಳಿಗೂ ಪ್ರೀತಿ ” : ಪವಿತ್ರಾ ವಿ. ಹೆಬ್ಬಾರ್.

  ” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕವಿತ್ತು. ಶ್ರೀ ಗುರುಗಳು ಪೀಠಾರೋಹಣದ ನಂತರ ಮೊದಲ ಬಾರಿಗೆ ನಮ್ಮೂರಿಗೆ ಬಂದಾಗ ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ಶ್ರೀಗುರುಗಳ ಆಗಮನದ ಸಂದರ್ಭದಲ್ಲಿ ಕಲಶ ಹಿಡಿಯಲು ಹೋಗಿದ್ದೆ. ಆ ನೆನಪು ಈಗಲೂ ಮನದಲ್ಲಿ ಹಸಿರಾಗಿದೆ. ಈಗ ನನ್ನ ಮಕ್ಕಳಿಗೂ ಶ್ರೀಮಠ, ಶ್ರೀಗುರುಗಳು ಎಂದರೆ ತುಂಬಾ ಶ್ರದ್ಧೆ, ಭಕ್ತಿ ” ಈ ಮಾತುಗಳು ಕುಮಟಾ ಮಂಡಲ,ಕುಮಟಾ ವಲಯದ ವಿಶ್ವೇಶ್ವರ ಬಿ. ಹೆಬ್ಬಾರ್ ಅವರ ಪತ್ನಿ ಪವಿತ್ರಾ ವಿ. ಹೆಬ್ಬಾರ್ ಅವರದ್ದು. ಹೊನ್ನಾವರ ಗೇರುಸೊಪ್ಪಾದ ಸುಬ್ರಾಯ […]

Continue Reading

” ಮನದ ಭಾವನೆಗಳನ್ನು ಅರಿತು ಅನುಗ್ರಹಿಸುವವರು ಶ್ರೀಗುರುಗಳು ” : ಲಲಿತಾ ವಿ. ಹೆಗಡೆ

  ” ಬದುಕಿನ ಪ್ರತೀ ಹೆಜ್ಜೆಯಲ್ಲಿಯೂ ಶ್ರೀಗುರು ಕಾರುಣ್ಯದ ಅನುಭವವನ್ನು ಪಡೆದವರು ನಾವು. ಜೀವನದ ಏರುಪೇರುಗಳಲ್ಲಿ ಕಂಗೆಟ್ಟು ಕುಸಿದು ಹೋಗುವಾಗಲೂ ಭರವಸೆಯ ದೀವಿಗೆಯಾಗಿ ಬಾಳಿಗೆ ಬೆಳಕು ತೋರಿದವರು ನಮ್ಮ ಗುರುಗಳು. ಜೀವನದ ಕೊನೆ ತನಕವೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರಕಬೇಕೆಂಬುದೇ ನನ್ನ‌ ನಿತ್ಯ ಪ್ರಾರ್ಥನೆ ” ಎಂಬ ಭಾವಪೂರ್ಣ ನುಡಿಗಳು ಕುಮಟಾ ಮಂಡಲ , ಗುಡೇಅಂಗಡಿ ವಲಯದ ವಿಶ್ವನಾಥ ಹೆಗಡೆಯವರ ಪತ್ನಿ ಲಲಿತಾ ವಿ.ಹೆಗಡೆ ಅವರದ್ದು.   ಕಲ್ಲಬ್ಬೆಯ ಸತ್ಯನಾರಾಯಣ ಹೆಗಡೆ,ಕಮಲ ದಂಪತಿಗಳ ಪುತ್ರಿಯಾದ ಇವರು […]

Continue Reading

” ನಿರಂತರ ಶ್ರೀಗುರು ಸ್ಮರಣೆಯಿಂದ ಕಷ್ಟಗಳು ದೂರ ” : ಛಾಯಾಮೂರ್ತಿ ಹೊಸನಗರ

” ಬಾಲ್ಯದಿಂದಲೇ ಹಸುಗಳ ಮೇಲೆ ತುಂಬ ಮಮತೆ. ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೆವು. ಜೊತೆಗೆ ಮೊದಲಿನಿಂದಲೂ ಶ್ರೀಮಠದ ಸೇವೆಯಲ್ಲಿ ಆಸಕ್ತಿ ಹೊಂದಿದವರು ನಾವು.ಹಾಗಾಗಿಯೇ ಶ್ರೀಗುರುಗಳ ನಿರ್ದೇಶಾನುಸಾರವಾಗಿ ದೊರಕಿದ ವಿವಿಧ ರೀತಿಯ ಗೋಸೇವೆಯಲ್ಲಿ ಕೈ ಜೋಡಿಸಿದ್ದೇವೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಕ್ಷೇಮಾಭಿವೃದ್ಧಿಯ ಪಥ ತೆರೆದುಕೊಂಡಿದೆ ” ಎಂದು ನುಡಿದವರು ರಾಮಚಂದ್ರಾಪುರ ಮಂಡಲ ಹೊಸನಗರ ವಲಯದ ಹೆದ್ಲಿ ನಿವಾಸಿಗಳಾಗಿರುವ ರಾಮಮೂರ್ತಿ ಅವರ ಪತ್ನಿ ಛಾಯಾ ಆರ್. ಮೂರ್ತಿ. ಹೆದ್ಲಿ ಭಾಸ್ಕರ ಭಟ್, ಸರಸ್ವತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ […]

Continue Reading

” ನೊಂದ ಮನಸ್ಸಿಗೆ ಸಾಂತ್ವನದ ತಂಪು ದೊರಕಿದ್ದು ಶ್ರೀಗುರು ಸೇವೆಯಿಂದ ” : ಚಂದ್ರಕಲಾ ಎಸ್.ಎನ್ ಚಾಳೆತ್ತಡ್ಕ

  ” ಚಲಿಸುವ ದೇವಾಲಯ ಎಂದೇ ಕರೆಯಲ್ಪಡುವ ಗೋಮಾತೆಯ ಸೇವೆಗೆ ಅವಕಾಶ ದೊರಕಿದ್ದು ಶ್ರೀಗುರುಗಳ ಅನುಗ್ರಹದಿಂದ. ಶ್ರೀಮಠದ ಸೇವೆಯಲ್ಲಿ ನಿರತರಾದವರಿಗೆ ಬದುಕಿನಲ್ಲಿ ಕಂಡ ಕನಸುಗಳೆಲ್ಲವೂ ಶ್ರೀಗುರು ಕೃಪೆಯಿಂದ ನನಸಾಗುತ್ತವೆ. ನೊಂದ ಮನಸ್ಸಿಗೆ ಸಾಂತ್ವನದ ತಂಪು ದೊರಕುವುದು ಶ್ರೀಚರಣ ಸೇವೆಯಿಂದ ” ಎಂದು ನುಡಿದವರು ಮುಳ್ಳೇರಿಯ ಮಂಡಲ ನೀರ್ಚಾಲ್ ವಲಯದ ” ವಿಶ್ವಾಮಿತ್ರ ” ನಿವಾಸಿಗಳಾಗಿರುವ ಶಂಕರನಾರಾಯಣ ಭಟ್ ಚಾಳೆತ್ತಡ್ಕ ಅವರ ಪತ್ನಿ ಚಂದ್ರಕಲಾ ಚಾಳೆತ್ತಡ್ಕ.   ಕಾಯರಡ್ಕ ಮೂಲದ ಮುಂಡೋಳೆ ರಾಮ ಭಟ್, ಶಾರದಾ ದಂಪತಿಗಳ ಪುತ್ರಿಯಾದ […]

Continue Reading

” ನೆಮ್ಮದಿಯ ಬದುಕಿಗೆ ಶ್ರೀಗುರುಕೃಪೆಯೊಂದಿದ್ದರೆ ಸಾಕು” : ಭವಾನಿ ವಿ. ಹೆಗಡೆ , ಕುಮಟಾ

” ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದೇವೆ. ಶ್ರೀಗುರುಕೃಪೆಯಿಂದಲೇ ಬದುಕು ಇಂದು ಸರಾಗವಾಗಿ ಮುನ್ನಡೆಯುತ್ತಿದೆ. ಮನದ ಭಾವಗಳನ್ನೆಲ್ಲ ಮಾತುಗಳ ಮೂಲಕ ಹೇಳುವುದು ಕಷ್ಟ. ಅಂತರಂಗದ ಭಾವ ಸಮರ್ಪಣೆಯ ಸೇವೆ ನಮ್ಮದು. ತ್ರಿಮೂರ್ತಿಗಳ ಸಾಕ್ಷಾತ್ ಸ್ವರೂಪರಾದ ಶ್ರೀಗುರುಗಳ ಅನುಗ್ರಹವೊಂದಿದ್ದರೆ ಬದುಕಿನಲ್ಲಿ ಪವಾಡವೇ ನಡೆಯುತ್ತದೆ ” ಎಂದು ಭಾವಪೂರ್ಣವಾಗಿ ನುಡಿದವರು ಕುಮಟಾ ಮಂಡಲ, ಗುಡೇಅಂಗಡಿ ವಲಯದ ” ವರಲಕ್ಷ್ಮಿ” ನಿವಾಸದಲ್ಲಿರುವ ವೆಂಕಟ್ರಮಣ ಹೆಗಡೆಯವರ ಪತ್ನಿ ಭವಾನಿ ವಿ.ಹೆಗಡೆ.   ಕುಮಟಾದ ಮೂರೂರಿನ ವಿಷ್ಣು ಭಟ್ , ವರದಾ ಭಟ್ ದಂಪತಿಗಳ […]

Continue Reading

” ಬದುಕಿನ ಸುಭದ್ರ ನೆಲೆಗೆ ಶ್ರೀರಕ್ಷೆ ಗುರುಪೀಠ ” : ಸುವರ್ಣಿನಿ ಎನ್. ಎಸ್

    ” ಶ್ರೀಗುರುಗಳ ಮೇಲಿನ ಅಚಲ ನಂಬಿಕೆ ಬಾಳಿಗೆ ಭರವಸೆಯ ಬೆಳಕನ್ನು ನೀಡಿದೆ. ಶ್ರೀಮಠದ ಸೇವೆ, ಗೋಮಾತೆಯ ಸೇವೆಯಲ್ಲಿ ತೊಡಗಿಸುವುದರಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ ” ಎಂದು ನುಡಿದವರು ಉಪ್ಪಿನಂಗಡಿ ಮಂಡಲ ಪಂಜ ವಲಯದ ಸುವರ್ಣಿನಿ ಎನ್.ಎಸ್.   ದಿ. ಸದಾಶಿವ ಭಟ್ ನೇರೋಳು ಅವರ ಪತ್ನಿಯಾದ ಸುವರ್ಣಿನಿ ಪಂಜ ವಲಯದ ಪುತ್ಯ ಚಕ್ರಕೋಡಿ ‘ಚಿರಶ್ಯಾಮಲ’ ದ ನಾರಾಯಣ ಶಾಸ್ತ್ರಿ ,ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾಗಿದ್ದಾರೆ.   ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಶ್ರೀಮಠದ […]

Continue Reading

” ಶ್ರೀಗುರು ತೋರಿದ ಪಥದಲ್ಲಿ ಮುನ್ನಡೆಯುವೆವು ” : ವಸಂತಿ ಆರ್ ಭಟ್ ಪದ್ಯಾಣ

  ” ಸಮಾಜದ ಶ್ರೇಯೋಭಿವೃದ್ಧಿಗಾಗಿ ನಮ್ಮ ಗುರುಗಳು ಕೈಗೊಳ್ಳುವ ಅನೇಕ ಯೋಜನೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರಕಿರುವುದೇ ಸುಕೃತ. ಇಂತಹ ಗುರುಗಳನ್ನು ಪಡೆದ ನಾವೇ ಭಾಗ್ಯವಂತರು. ಶ್ರೀಗುರುಗಳನ್ನು ನಂಬಿದವರಿಗೆ ಬದುಕಿನಲ್ಲಿ ನೆಮ್ಮದಿ, ಶಾಂತಿ ಖಂಡಿತ ದೊರಕುತ್ತದೆ. ಅದಕ್ಕಾಗಿಯೇ ಅವರು ತೋರಿದ ಪಥದಲ್ಲಿ ಮುನ್ನಡೆಯುವ ಅಭಿಲಾಷೆ ನಮ್ಮದು ” ಹೀಗೆನ್ನುವವರು ಮಂಗಳೂರು ಮಂಡಲ ಮಧ್ಯ ವಲಯದ ನಿವಾಸಿಗಳಾಗಿರುವ ಪದ್ಯಾಣ ರಾಮಕೃಷ್ಣ ಭಟ್ಟರ ಪತ್ನಿ ವಸಂತಿ ಆರ್ ಭಟ್ . ಕಳಂಜ ವಾರಣಾಸಿಯ ಸೀತಾರಾಮಯ್ಯ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾದ ಇವರು […]

Continue Reading

” ಶ್ರೀಮಠದ ಸೇವೆ ಅನಿರ್ವಚನೀಯ ಅನುಭೂತಿ ” : ಸವಿತಾ ಜಯರಾಮ ಭಟ್ ,ಗುಂಜಗೋಡು

” ಶ್ರೀಮಠದ ಸೇವೆ ಅನಿರ್ವಚನೀಯ ಅನುಭೂತಿ ” : ಸವಿತಾ ಜಯರಾಮ ಭಟ್ ,ಗುಂಜಗೋಡು ” ತವರುಮನೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿದೆ. ಬಿಳಗಿ ಸೀಮೆ ಭೀಷ್ಮ ‘ ಎಂದೇ ಶ್ರೀಗುರುಗಳಿಂದ ಬಿರುದು ಪಡೆದ ಕೆಳಗಿನಮನೆ ಸುಬ್ರಾಯ ಹೆಗಡೆಯವರ ಮಗಳು ನಾನು.‌ ಹಿಂದಿನ ಗುರುಗಳ ಕಾಲದಿಂದಲೇ ಶ್ರೀಮಠದ ಪರಂಪರೆಯ ಬಗ್ಗೆ ತಿಳಿದಿದೆ . ಮದುವೆಯ ನಂತರ ಶ್ರೀಮಠದ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶಗಳು ದೊರೆತವು. ಹನ್ನೊಂದು ವರ್ಷಗಳ ಕಾಲ ಮಾತೃಪ್ರಧಾನೆಯಾಗಿ ಸೇವೆ ಸಲ್ಲಿಸಿದ್ದೇನೆ.‌ ಶ್ರೀಗುರುಗಳ ವಿವಿಧ ಯೋಜನೆಗಳಲ್ಲಿ ಕೈ ಜೋಡಿಸುವಾಗ […]

Continue Reading

” ಆತ್ಮ ಸಾಕ್ಷಾತ್ಕಾರದ ಹಾದಿ ತೋರುವವರು ಶ್ರೀಗುರು ” : ರುಕ್ಮಾವತಿ ಆರ್. ಚಂದ್ರ, ಸಾಗರ

  ಮೂಲತಃ ರಾಮಚಂದ್ರಾಪುರ ಮಂಡಲದ ಗಡಿಕಟ್ಟೆಯವರಾದ ಪ್ರಸ್ತುತ ಸಾಗರ ಪೂರ್ವ ವಲಯದ ನಿವಾಸಿಗಳಾಗಿರುವ ರಾಮಚಂದ್ರ ಅವರ ಪತ್ನಿ ರುಕ್ಮಾವತಿ ಆರ್. ಚಂದ್ರ ಅವರು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು.   ” ಬಾಲ್ಯದಲ್ಲೇ ಹಸುಗಳ ಮೇಲೆ ವಿಶೇಷ ಮಮತೆಯಿತ್ತು.  ಗೋವುಗಳ ಮೇಲೆ ಪೂಜ್ಯ ಭಾವನೆ ಮೂಡುವಂತಹ ವಾತಾವರಣದಲ್ಲಿ ಹುಟ್ಟಿ ಬೆಳೆದವಳು ನಾನು. ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಶ್ರೀಗುರುಗಳ ಪ್ರವಚನಗಳನ್ನು ಕೇಳಿ ಈ ಶ್ರದ್ಧೆ ಇನ್ನಷ್ಟು ಹೆಚ್ಚಾಗಿದೆ ” ಎನ್ನುವ ರುಕ್ಮಾವತಿ ಅವರು ಬ್ಯಾಂಕ್ […]

Continue Reading