ಗೋವುಗಳ ಒಡನಾಟದ ಖುಷಿ ವರ್ಣನೆಗೆ ಸಿಲುಕದು ” : ವಾಣಿಶ್ರೀ ಶರ್ಮಾ

  ” ಐದನೇ ವಯಸ್ಸಿನಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವಳು ನಾನು. ಅಪ್ಪ ಮಾಲೂರು ಗೋಶಾಲೆಯಲ್ಲಿ ಸೇವಾ ನಿರತರಾದುದರಿಂದ ನನಗೂ ಗೋವುಗಳ ಸಾಂಗತ್ಯ ಎಳವೆಯಿಂದಲೇ ದೊರಕಿತು. ಮಾನವನ ಕಷ್ಟಗಳನ್ನು ಅರಿತು ಅವನಿಗೆ ಸಹಾಯ ಮಾಡಲು ಅನೇಕ ಮಂದಿ ಮುಂದೆ ಬರುತ್ತಾರೆ. ಆದರೆ ಗೋಮಾತೆಯ ಕಷ್ಟಗಳನ್ನು ನಾವೇ ತಿಳಿದು ಅವಳ ಸೇವೆ ಮಾಡಬೇಕಷ್ಟೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಈ ಕಾರಣದಿಂದ ನಾನು ಗೋಸೇವೆಗೆ ಕೈ ಜೋಡಿಸಿದೆ ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ರಾಜರಾಜೇಶ್ವರಿ ವಲಯದ ಉಜ್ವಲ ಭಟ್ ಅವರ […]

Continue Reading

ಶ್ರೀರಾಮನ ಅನುಗ್ರಹದಿಂದ ಬದುಕಿನಲ್ಲಿ ನೆಮ್ಮದಿ ” : ಅಕ್ಷತಾ ಗಣೇಶ ಭಟ್, ತೋಟದಮೂಲೆ

  ” ದೇಶೀಯ ಗೋವುಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಿ, ಗೋಜನ್ಯ ಉತ್ಪನ್ನಗಳ ಸದುಪಯೋಗಗಳ ಬಗ್ಗೆ ಜನರಲ್ಲಿ ಎಚ್ಚರ ಮೂಡಿಸುವ ಮಹತ್ಕಾರ್ಯದಲ್ಲಿ ಭಾಗಿಯಾಗಿ ಗೋಸೇವೆ ಮಾಡುವುದೆಂದರೆ ಪೂರ್ವ ಜನ್ಮದ ಸುಕೃತ ” ಎನ್ನುವವರು ಕನ್ಯಾನದ ಪಂಜಜೆ ಮೂಲದ ತೋಟದಮೂಲೆ ನಿವಾಸಿಗಳಾಗಿದ್ದ , ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಶ್ರೀಗಿರಿನಗರ ವಲಯದ ಹನುಮಂತ ನಗರದಲ್ಲಿ ವಾಸಿಸುವ ಗಣೇಶ ಭಟ್ ಅವರ ಪತ್ನಿ ಅಕ್ಷತಾ. ಇಪ್ಪತ್ತು ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿರುವ ಅಕ್ಷತಾ ಮುದ್ರಜೆ ಸುಬ್ರಹ್ಮಣ್ಯ ಭಟ್ ಹಾಗೂ ಇಂದಿರಾ ದಂಪತಿಗಳ ಪುತ್ರಿ. […]

Continue Reading

ಗೋಮಾತೆಯ ಸೇವೆಗಾಗಿ ಸಮಾಜದಲ್ಲಿ ಒಗ್ಗಟ್ಟು ಮೂಡಿದೆ : ಅನಿತಾ ಹೆಗಡೆ, ಬೆಂಗಳೂರು

  ” ಗೋಸೇವೆ ನಮ್ಮ ಜೀವನದ ಅವಿಭಾಜ್ಯ ಅಂಗ. ಶ್ರೀಗುರುಗಳಿಂದಾಗಿ ನಮಗೆ ಇಂತಹ ಅವಕಾಶ ಒದಗಿಬಂತು. ಪೂರ್ವ ಜನ್ಮದ ಸುಕೃತದಿಂದ ನಾವು ನಮ್ಮ ಗುರುಗಳನ್ನು ಪಡೆದೆವು. ಅವರ ಮಾರ್ಗದರ್ಶನದಿಂದ ದೊರಕಿದ ಗೋಮಾತೆಯ ಸೇವೆಗಾಗಿ ಸಮಾಜವೇ ಒಂದಾಗಿದೆ ” ಎನ್ನುವವರು ಮೂಲತಃ ಸಿದ್ಧಾಪುರ ತಾಲೂಕಿನವರಾದ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ ಯಲಹಂಕ ಅವಲಳ್ಳಿಯ ನಾರಾಯಣ ಹೆಗಡೆಯವರ ಪತ್ನಿ ಅನಿತಾ ಹೆಗಡೆ. ಸಿದ್ಧಾಪುರ ತಾಲೂಕಿನ ಕರಿಬಾಳು ಶಿವರಾಮ ಭಟ್ಟ ಹಾಗೂ ಸಾವಿತ್ರಿ ಭಟ್ಟ ಅವರ ಪುತ್ರಿಯಾದ ಅನಿತಾ ಹೆಗಡೆಯವರು ಮಾತೃತ್ವಮ್ […]

Continue Reading

ಶ್ರೀಗುರುಕೃಪೆಯಿಂದ ಕಂಡ ಕನಸುಗಳೆಲ್ಲ ನನಸಾಗಿವೆ : ಸರಸ್ವತಿ ಕೂವೆತ್ತಂಡ

  ” ಎರಡು ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿ ಇದ್ದೇವೆ. ಶ್ರೀಗುರುಸೇವೆ, ಗೋಸೇವೆಯಿಂದ ಬದುಕಿಗೆ ಒಳಿತಾಗಿದೆ.‌ ಅಸಾಧ್ಯವೆಂದು ಭಾವಿಸಿದ ಅನೇಕ ಕನಸುಗಳು ಕೈಗೂಡಿವೆ. ಶ್ರೀಗುರುಗಳ ಕೃಪೆ ನಮ್ಮ ಬದುಕಿಗೆ ಆಸರೆಯಾಗಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲ ಉರುವಾಲು ವಲಯದ ಕೂವೆತ್ತಂಡ ಶ್ರೀಧರ ಭಟ್ಟರ ಪತ್ನಿ ಸರಸ್ವತಿ ಎಸ್.ಭಟ್. ಪುತ್ತೂರು ಸಮೀಪದ ಕೂಜೋಡಿ ಗೋವಿಂದ ಭಟ್, ಗೌರಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಫೈನಾನ್ಸ್ ಒಂದರಲ್ಲಿ ಉದ್ಯೋಗಿಯಾಗಿದ್ದಾರೆ. ರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ೧೧ ದಿನಗಳ ಕಾಲ ಶ್ರೀರಾಮಚಂದ್ರಾಪುರ ಮಠ ,ಹೊಸನಗರದಲ್ಲಿ […]

Continue Reading

ಗೋಮಾತೆಯ ಸೇವೆ ಮಾಡಲು ಹೃದಯ ಶ್ರೀಮಂತಿಕೆ ಇದ್ದರೆ ಸಾಕು : ಪುಷ್ಪಾ ಹರೀಶ್ , ಬೆಂಗಳೂರು

  ” ಗೋಸೇವೆ ಮಾಡಲು ಮುಂದೆ ಬರುವ ಮಾತೆಯರು ಯಾವುದೇ ಕಾರಣಕ್ಕೂ ಅಳುಕಬಾರದು, ಗೋಸೇವೆ ಮಾಡಲು ಪೂರ್ವ ಜನ್ಮದ ಸುಕೃತ ಬೇಕು, ಗೋಮಾತೆಯ ಸೇವೆಗೆ ಹೃದಯ ಶ್ರೀಮಂತಿಕೆ ಅತೀ ಅಗತ್ಯ ” ಎಂದವರು ಬೆಂಗಳೂರು ಉತ್ತರ ಮಂಡಲ ಸರ್ವಜ್ಞ ವಲಯದ ಹರೀಶ್ ಭಟ್ ಅವರ ಪತ್ನಿ ಪುಷ್ಪಾ. ಮುರುಡೇಶ್ವರದ ಗಜಾನನ ಭಟ್ ಹಾಗೂ ಭವಾನಿ ದಂಪತಿಗಳ ಪುತ್ರಿಯಾದ ಇವರು ಸರ್ವಜ್ಞ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ” ತವರಿಗೆ ಹೋಗಿದ್ದಾಗ ಅಕ್ಕನ ಜೊತೆ ಮೊದಲ ಬಾರಿ […]

Continue Reading

ಸುರಭಿ ಸೇವೆಯ ಸಾರ್ಥಕ ಕ್ಷಣಗಳು : ಹೇಮಾವತಿ ಹೆಗಡೆ

  ” ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವಳು. ಸಹಜವಾಗಿಯೇ ಗೋವುಗಳ ಮೇಲೆ ಪ್ರೀತಿಯಿದೆ. ಇತ್ತೀಚೆಗಂತೂ ಶ್ರೀಗುರುಗಳ ಪ್ರೇರಣೆಯಿಂದ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ಮತ್ತೆ ಒದಗಿ ಬಂತು. ಗೋಮಾತೆಯ ಸೇವೆ ಬದುಕಿನ ಸಾರ್ಥಕ ಕ್ಷಣಗಳು ಎಂದೇ ನನ್ನ ಅನಿಸಿಕೆ ” ಎನ್ನುತ್ತಾ ತಮ್ಮ ಗೋಪ್ರೇಮ ಮೆರೆದವರು ಮೂಲತಃ ಸಿದ್ಧಾಪುರ ತಾಲೂಕು ಅಲವಳ್ಳಿಯ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ ರಾಜಮಲ್ಲೇಶ್ವರ ವಲಯ ನಿವಾಸಿಗಳಾಗಿರುವ ಬಿ.ಎಸ್. ಹೆಗಡೆಯವರ ಪತ್ನಿ ಹೇಮಾವತಿ ಹೆಗಡೆ. ಯಲ್ಲಾಪುರ ತಾಲೂಕು ಮಂಚಿಕೇರಿಯ ವೆಂಕಟ್ರಮಣ ಭಟ್, ಅನಸೂಯಾ […]

Continue Reading

ಗೋಮಾತೆಯ ಸೇವೆಯೇ ಒಂದು ಖುಷಿ : ಸುನಂದಾ ನಾರಾಯಣ ಭಟ್, ಪೋಳ್ಯ

  ” ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.‌ ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ಗೋಸೇವೆಯಲ್ಲಿ ತೊಡಗಿಸಿಕೊಂಡೆ. ಗೋಮಾತೆಯ ಸೇವೆಯಲ್ಲಿ ಮಗ್ನಳಾಗಿರುವಾಗ, ಗೋಮಾತೆಯ ಸೇವೆಗಾಗಿ ಸಮರ್ಪಣೆ ಮಾಡಿದಾಗ ದೊರಕುವ ಸಂತಸ, ನೆಮ್ಮದಿ, ಶಾಂತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ” ಎನ್ನುತ್ತಾ ಗೋಮಾತೆಯ ಸೇವೆಯಲ್ಲಿ ಆನಂದ ಕಂಡವರು ದಕ್ಷಿಣ ಕನ್ನಡದ ಪೋಳ್ಯ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ , ಸರ್ವಧಾರಿ ವಲಯ ನಿವಾಸಿಗಳಾಗಿರುವ ನಾರಾಯಣ ಭಟ್ ಪೋಳ್ಯ ಇವರ ಪತ್ನಿ ಸುನಂದಾ ಎನ್. ಭಟ್. ಕುಮಟಾದ ಬಾಡ […]

Continue Reading

ಗೋಮಾತೆ ಸಂಪೂಜ್ಯಳು : ಸುಶೀಲಾ ವಾದ್ಯಕೋಡಿ

  ” ಗೋವು ನೀಡುವ ಎಲ್ಲಾ ಉತ್ಪನ್ನಗಳು ನಮ್ಮ ಬದುಕಿಗೆ ಬೇಕು, ನಮ್ಮ ಸಂಸ್ಕೃತಿಯಲ್ಲಿ ಗೋಮಾತೆಗೆ ಪೂಜನೀಯ ಸ್ಥಾನವಿದೆ. ಶುದ್ಧ ಭಾರತೀಯ ತಳಿಯ ಹಸುವಿನ ಹಾಲಿನಲ್ಲಿ ಅನೇಕ ಔಷಧೀಯ ಗುಣಗಳಿವೆ. ಹಾಗಾಗಿ ಭಾರತೀಯ ತಳಿಯ ಹಸುಗಳ ರಕ್ಷಣೆಗೆ ಸಮಾಜವೇ ಕಟಿಬದ್ಧವಾಗಿ ನಿಲ್ಲಬೇಕಿದೆ. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲದ ಉರುವಾಲು ವಲಯದ ವಾದ್ಯಕೋಡಿ ಶಂಕರ ಭಟ್ಟರ ಪತ್ನಿ ಸುಶೀಲಾ. ದೋಟ ಸುಬ್ರಹ್ಮಣ್ಯ ಭಟ್, ಈಶ್ವರಿ ದಂಪತಿಗಳ ಪುತ್ರಿಯಾದ ಇವರು ಉರುವಾಲು ವಲಯದ ಮಾತೃ […]

Continue Reading

ಗೋಪ್ರೇಮ ಉಸಿರಿನಷ್ಟೇ ಸಹಜ : ಕಿರಣಾ ಮೂರ್ತಿ , ಯೇತಡ್ಕ

  ” ನಮ್ಮವರು ಗೋ ಡಾಕ್ಟರ್ ಆದ ಕಾರಣ ಸಹಜವಾಗಿಯೇ ಗೋವುಗಳ ಮೇಲೆ ಪ್ರೀತಿ ಮೂಡಿತು. ಆದರೆ ಶ್ರೀಮಠದ ಸಂಪರ್ಕಕ್ಕೆ ಬರುವ ವರೆಗೂ ನನಗೆ ದೇಶೀಯ ತಳಿ ಹಾಗೂ ವಿದೇಶೀ ತಳಿಗಳ ನಡುವಿನ ವ್ಯತ್ಯಾಸ ತಿಳಿದಿರಲಿಲ್ಲ. ನಂತರ ದೇಶೀಯ ತಳಿಯ ಹಸುಗಳ ಉಪಯುಕ್ತತೆ, ಅವುಗಳ ಮೌಲ್ಯ ಅರಿವಾಯಿತು, ಈಗ ಪೇಟೆಯಲ್ಲಿದ್ದರೂ ಮೂರು ಹಸುಗಳು ಹಾಗೂ ನಾಲ್ಕು ಕರುಗಳನ್ನು ಸಾಕುತ್ತಿದ್ದೇವೆ. ಗೋಮಾತೆ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದಾಳೆ ” ಈ ಮಾತುಗಳು ‘ ಗೋವಿಲ್ಲದೆ ನಾವಿಲ್ಲ ‘ ಎಂಬ […]

Continue Reading

ಶ್ರೀಗುರು ಕರುಣೆಗಿಂತ ಮಿಗಿಲಾದ್ದು ಯಾವುದೂ ಇಲ್ಲ ” : ವಾಣಿ ಶ್ರೀಕೃಷ್ಣ ಭಟ್

” ಹದಿನಾರು ವರ್ಷಗಳ ಹಿಂದೆ ಬೆಂಗಳೂರು ನಗರದಿಂದ ಬಂದು ಉಜಿರೆಯಲ್ಲಿ ವಾಸ್ತವ್ಯ ಹೂಡಿದವರು ನಾವು.‌ ಶ್ರೀಗುರುಗಳ ಕೃಪೆಯಿಂದ ಬದುಕಿನ ಅನೇಕ ಕಷ್ಟಪರಂಪರೆಗಳು ದೂರವಾಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ ” ಎಂದು ನುಡಿದವರು ಉಜಿರೆ ಸಮೀಪದ ಕಾಶಿಬೆಟ್ಟು ಪ್ರಗತಿ ನಗರದ ಶ್ರೀಸನ್ನಿಧಿ ‘ ನಿವಾಸದ ಶೇಂತಾರು ಶ್ರೀಕೃಷ್ಣ ಭಟ್ ಇವರ ಪತ್ನಿ ವಾಣಿ. ಪಂಜಸೀಮೆಯ ಭೀಮಗುಳಿ ಶಿವರಾಮ ಭಟ್ಟ, ಶಾರದಾ ದಂಪತಿಗಳ ಪುತ್ರಿಯಾದ ಇವರು ಉಪ್ಪಿನಂಗಡಿ ಮಂಡಲದ ಉಜಿರೆ ವಲಯದ ಮಾತೃಪ್ರಧಾನೆಯಾಗಿದ್ದಾರೆ. ಮಂಡಲ ಮಾತೃ ಪ್ರಧಾನೆಯವರ ಮೂಲಕ […]

Continue Reading

” ಗೋಮಾತೆಯ ಸೇವೆ ಮಾಡಲು ಶ್ರೀಗುರುಕೃಪೆ ಬೇಕು ” : ದೀಪಾ ಸಹದೇವ , ಬೆಂಗಳೂರು

” ನಾವೆಲ್ಲರೂ ಗೋಮಾತೆಯ ಹಾಲನ್ನು ಕುಡಿದು ಬೆಳೆದವರು, ಚಲಿಸುವ ದೇವಾಲಯವಾದ ಗೋಮಾತೆಯ ರಕ್ಷಣೆಗಾಗಿ ಪುರಾಣೇತಿಹಾಸಗಳಲ್ಲಿ ಅನೇಕ ಮಂದಿ ಮಹಾತ್ಯಾಗಗಳನ್ನು ಮಾಡಿದ್ದಾರೆ. ನಮ್ಮ ಬದುಕಿಗೆ ಇವರೆಲ್ಲರೂ ಮಾರ್ಗದರ್ಶಿಗಳಾಗಬೇಕು. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಶ್ರೀಗುರುಗಳ ಮಾತುಗಳೇ ನನ್ನ ಗೋಸೇವೆಗೆ ಪ್ರೇರಣೆ ” ಎಂದು ನುಡಿದವರು ಗುತ್ತಿಗಾರು ಸಮೀಪದ ಕಟ್ಟ ಮೂಲದ ಪ್ರಸ್ತುತ ದಕ್ಷಿಣ ಬೆಂಗಳೂರು ಮಂಡಲದ ,ಗಿರಿನಗರ ವಲಯದಲ್ಲಿ ವಾಸಿಸುತ್ತಿರುವ ಸಹದೇವ ಕಟ್ಟ ಇವರ ಪತ್ನಿ ದೀಪಾ. ಮಂಗಳೂರಿನ ವಿಜಯ ಭಟ್ ಹಾಗೂ ಜಯಶ್ರೀ ದಂಪತಿಗಳ ಪುತ್ರಿಯಾದ […]

Continue Reading

” ಸಮರ್ಪಣಾ ಭಾವದ ಸೇವೆಯಿಂದ ಮನಸ್ಸಿಗೆ ನೆಮ್ಮದಿ ” ಸರಸ್ವತಿ ಪ್ರಭಾಕರ ಹೆಗಡೆ, ಸಾಗರ

  ” ಸಾವಿರದ ಸುರಭಿ ಯೋಜನೆಯಲ್ಲಿ ಗೋಮಾತೆಯ ಸೇವೆ ಮಾಡುವ ಮಾತೆಯರಿಗೆ ಸಹಕಾರ ನೀಡುತ್ತಾ ಸುರಭಿ ಸೇವಿಕೆಯಾಗಿ ಸೇವೆ ಮಾಡಿದೆ. ಮಾತೃತ್ವಮ್ ನ ಮಾಸದ ಮಾತೆಯರಿಗೂ ಸಹಕಾರ ನೀಡಿದೆ. ನಮ್ಮ ವಲಯ ಕೋಶಾಧ್ಯಕ್ಷೆ ರುಕ್ಮಾವತಿ ರಾಮಚಂದ್ರ ಅವರು ‘ ನೀನೇ ಮಾಸದ ಮಾತೆಯಾಗು ‘ ಎಂದು ಪ್ರೋತ್ಸಾಹ ನೀಡಿದರು. ಅವರ ಮಾರ್ಗದರ್ಶನದ ಮೂಲಕ ನಾನೂ ಮಾಸದ ಮಾತೆಯಾಗಿ ಸೇವೆ ಮಾಡಲು ನಿರ್ಧರಿಸಿದೆ. ” ಎನ್ನುವವರು ಸಾಗರ ಮಂಡಲದ ಪೂರ್ವ ವಲಯದ ‘ ಅರುಣೋದಯ’ ಅಗ್ರಹಾರದ ನಿವಾಸಿಗಳಾಗಿರುವ ಪ್ರಭಾಕರ […]

Continue Reading

” ಬದುಕಿನ ಅದೃಷ್ಟ ಎಂಬುದು ಶ್ರೀಗುರು ಸೇವೆಯ ಸೌಭಾಗ್ಯ ” : ನವ್ಯಶ್ರೀ ಹೊಸಕೊಪ್ಪ

  ” ಗುರು ಶಿಷ್ಯ ಸಂಬಂಧ ಎಂಬುದು ಆತ್ಮ ಸಂಬಂಧ, ನನ್ನ ಕಣ್ಣಿಗೆ ಕಾಣುವ ಶ್ರೀರಾಮ ದೇವರು ಎಂದರೆ ಶ್ರೀಗುರುಗಳೇ. ಒಮ್ಮೆಯೂ ನಾನು ಯಾವ ವಿಚಾರಕ್ಕೂ ಶ್ರೀಗುರುಗಳನ್ನು ಭೇಟಿಯಾಗಿ ನಿವೇದನೆ ಮಾಡಿಲ್ಲ, ಆದರೂ ಅನೇಕ ಸಂಕಷ್ಟಗಳಿಂದ ಪಾರಾಗಿದ್ದು ಶ್ರೀಗುರುಗಳ ಕೃಪಾ ಕಟಾಕ್ಷದಿಂದ ಎಂಬುದೇ ಸತ್ಯ. ಬದುಕಿನ ಅದೃಷ್ಟ ಎಂದರೆ ಅದು ಶ್ರೀಗುರು ಸೇವೆಯ ಸೌಭಾಗ್ಯ. ಇದಕ್ಕಿಂತ ಮಿಗಿಲಾಗಿ ನನ್ನ ಬದುಕಿನಲ್ಲಿ ಯಾವುದೂ ಇಲ್ಲ ” ಎಂಬ ಭಾವಪೂರ್ಣ ನುಡಿಗಳು ನವ್ಯಶ್ರೀ ಹೊಸಕೊಪ್ಪ ಅವರದ್ದು. ಮನೆಘಟ್ಟದ ಸುಬ್ಬರಾವ್, ಪ್ರಭಾ […]

Continue Reading

ಮನವೆಂದೂ ಶ್ರೀಮಠದ ಸೇವೆಯಲ್ಲಿ ತಲ್ಲೀನ ” : ಪ್ರೇಮಲತಾ ಜಿ. ಭಟ್ , ಕಜೆಹಿತ್ತಿಲು

  ” ನಮ್ಮ ಸಮಾಜವನ್ನು ಒಗ್ಗೂಡಿಸಿ, ಗೋಮಾತೆಯ ಮಹತ್ವವನ್ನು ತಿಳಿಸಿ, ಅದರ ಉಳಿವಿಗಾಗಿ ಅವಿರತ ಶ್ರಮಿಸುವ ನಮ್ಮ ಶ್ರೀಗುರುಗಳ ಮಹೋನ್ನತ ಪರಿಕಲ್ಪನೆಯಾದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇವೆ ಮಾಡುವ ಅವಕಾಶ ದೊರಕಿದ್ದು ಮನಸ್ಸಿಗೆ ಅತ್ಯಂತ ಸಂತಸ ನೀಡಿದೆ. ಮನದ ಪ್ರಾರ್ಥನೆಯನ್ನು ತಾನೇ ಅರಿತು ಅದಕ್ಕೆ ಕೂಡಲೇ ಪರಿಹಾರ ದೊರಕುವಂತೆ ಮಾಡುವ ಶ್ರೀಚರಣ ಸೇವೆಯಲ್ಲಿ ಮನಸ್ಸು ಸದಾ ತಲ್ಲೀನವಾಗಲು ಬಯಸುತ್ತಿದೆ.‌ ಆ ಖುಷಿಯನ್ನು ವರ್ಣಿಸಲು ಸಾಧ್ಯವಿಲ್ಲ , ಬದುಕಿನಲ್ಲಿ ನೆಮ್ಮದಿ, ಶಾಂತಿಯ ಆಶ್ರಯಧಾಮವೇ ಶ್ರೀರಾಮದೇವರು. ಇದು […]

Continue Reading

” ಶ್ರೀಮಠದ ಸೇವೆಯಿಂದ ದೊರಕುವುದು ಮನಕ್ಕೆ ಆನಂದ ” : ವಾಸಂತಿ ಹೆಗಡೆ ಬೆಂಗಳೂರು

  ” ದೊಡ್ಡ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇರುವವರು ನಾವು, ಕೆಲವು ಕಾಲ ವಿದೇಶದಲ್ಲಿ ಇದ್ದು ಬಂದವರಾದರೂ ಮನಸ್ಸಿಗೆ ಆನಂದ ದೊರಕುವುದು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಾಗಲೇ. ಬೇರೆಲ್ಲೂ ಸಿಗದ ನೆಮ್ಮದಿ, ಶಾಂತಿ ಇಲ್ಲಿದೆ ” ಎನ್ನುವವರು ಹೊನ್ನಾವರ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ವಿಜಯನಗರ ವಲಯ ನಿವಾಸಿಗಳಾಗಿರುವ ವಾಸಂತಿ ಹೆಗಡೆ. ಕುಮಟಾದ ಶಂಕರ ರಾಮ ಹೆಗಡೆ ಹಾಗೂ ಲಕ್ಷ್ಮೀ ಹೆಗಡೆಯವರ ಪುತ್ರಿಯಾದ ವಾಸಂತಿ ಹೆಗಡೆಯವರು ಶ್ರೀಮಠದ ವಿವಿಧ ವಿಭಾಗಗಳಲ್ಲಿ ಸೇವೆ ಮಾಡಿದ ಅನುಭವವುಳ್ಳವರು. ಮಂಡಲಾಧ್ಯಕ್ಷರಾದ […]

Continue Reading

ಶ್ರೀಗುರು ಕಾರುಣ್ಯದಿಂದ ದೊರಕಿದ ಮರುಜನ್ಮವಿದು ” : ಲಕ್ಷ್ಮೀ ಮಂಜುನಾಥ, ತುಮಕೂರು

” ಪೂರ್ವ ಜನ್ಮದ ಸುಕೃತದಿಂದ ಶ್ರೀಮಠದ ಸಂಪರ್ಕಕ್ಕೆ ಬಂದೆವು, ಶ್ರೀಗುರುಗಳ ಚರಣ ಸೇವಾ ಸೌಭಾಗ್ಯವೂ ಒದಗಿಬಂತು. ಇತ್ತೀಚೆಗಂತೂ ಕೊರೋನಾ ಬಂದಾಗ ಶ್ರೀಗುರುಗಳ ಚರಣಕ್ಕೆ ಶರಣಾಗಿ ಗೋಸೇವೆ, ಶ್ರೀಮಠದ ಸೇವೆಗಾಗಿಯೇ ಮರುಜನ್ಮ ಪಡೆದಂತೆ ಬದುಕಿ ಬಂದೆ, ನನ್ನ ಮನದ ಭಾವನೆಗಳನ್ನೆಲ್ಲ ಹೇಳಲು ಪದಗಳೇ ಸಾಲದು, ಅಕ್ಷರ ರೂಪ ನೀಡಲೂ ಅಸಾಧ್ಯ, ಏನಿದ್ದರೂ ಶ್ರೀಗುರುಗಳ ಕರುಣೆ, ಆಶೀರ್ವಾದ ,ಅದುವೇ ನಮ್ಮ ಬದುಕಿನ ಶ್ರೀರಕ್ಷೆ ” ಎಂದು ಭಾವಪೂರ್ಣವಾಗಿ ನುಡಿಯುವವರು ತುಮಕೂರಿನ ಲಕ್ಷ್ಮೀ ಮಂಜುನಾಥ . ಶೃಂಗೇರಿಯ ನಾಗಭೂಷಣ ಭಟ್ ಹಾಗೂ […]

Continue Reading

ಬದುಕಿನ ಪಥ ಬದಲಾಗಿದ್ದು ಶ್ರೀಗುರುಗಳ ಮಾರ್ಗದರ್ಶನದಿಂದ ” : ಗೀತಾ ಮಂಜುನಾಥ ಹೆಗಡೆ ,ಕೆರೆಮನೆ

  ” ಸುಮಾರು ಹದಿನೇಳು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆಧುನಿಕ ಬದುಕಿನಿಂದ ಧಾರ್ಮಿಕ, ಸೌಹಾರ್ದಯುತ ನೆಮ್ಮದಿಯ ಬದುಕಿನ ಪಥ ತೆರೆದುಕೊಂಡಿದ್ದು ಶ್ರೀಗುರು ಸೇವೆಯಿಂದ. ಜೀವನದ ಶೈಲಿ, ರೀತಿ ನೀತಿಗಳು,ಸಂಸ್ಕಾರಗಳು ಸಂಪೂರ್ಣ ಬದಲಾಗಿದ್ದು ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ” ಎಂದು ಶ್ರದ್ಧೆಯಿಂದ ನುಡಿಯುವವರು ಹೊನ್ನಾವರ ಮಂಡಲ ಅಪ್ಸರಕೊಂಡ ವಲಯದ ಗುಣವಂತೆ ಕೆರೆಮನೆಯ ಮಂಜುನಾಥ ಹೆಗಡೆಯವರ ಪತ್ನಿ ಗೀತಾ ಎಂ.ಹೆಗಡೆ. ಸಿದ್ಧಾಪುರ ತಾಲೂಕಿನ ಕ್ಯಾದಗಿ ಗಜಾನನ ಹೆಗಡೆ, ಸೀತಮ್ಮ ದಂಪತಿಗಳ ಪುತ್ರಿಯಾದ ಗೀತಾ ಸ್ವಯಂ ಇಚ್ಛೆಯಿಂದ ಮಾಸದ ಮಾತೆಯಾಗಿ […]

Continue Reading

ಗೋಮಾತೆಯ ಸೇವೆಯಲ್ಲಿ ಭಾಗಿಯಾಗುವುದೇ ಅವಿಸ್ಮರಣೀಯ ಅನುಭವ ” : ವನಮಾಲಾ ಬಿ. ಭಟ್, ಆರ್ಲಪದವು

” ನಮ್ಮ ದೇಶದ ಸಂಸ್ಕೃತಿಯ ಪ್ರತೀಕ ಗೋಮಾತೆ, ಅವಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ‘ ಎಂಬ ಶ್ರೀಗುರುಗಳ ಮಾತುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದೆ.‌ ಗೋಮಾತೆಯ ಸೇವೆ ನಿಜಕ್ಕೂ ಅವಿಸ್ಮರಣೀಯ ಅನುಭವ ನೀಡಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲದ ಬೆಟ್ಟಂಪಾಡಿ ವಲಯದ ಆರ್ಲಪದವು ನಿವಾಸಿಗಳಾಗಿರುವ ಬಾಲಕೃಷ್ಣ ಭಟ್ ಇವರ ಪತ್ನಿ ವನಮಾಲಾ ಭಟ್ ಅವರು. ವಾದ್ಯಕೋಡಿ ಗಣಪತಿ ಭಟ್, ಶಂಕರಿ ಅಮ್ಮ ದಂಪತಿಗಳ ಪುತ್ರಿಯಾದ ವನಮಾಲಾ ಅವರು ಮಾತೃತ್ವಮ್ ಯೋಜನೆಯ ಮೂಲಕ ಒಂದು […]

Continue Reading

ಶ್ರೀಗುರು ಚರಣ ಸೇವೆಯ ಕುಸುಮಗಳು : ಕಮಲಾ ಸುಬ್ರಹ್ಮಣ್ಯ ಹೆಗಡೆ

  ಒಂದು ಮನೆಯ ಪ್ರತಿಯೊಬ್ಬ ಸದಸ್ಯನೂ ಶ್ರೀಗುರುಗಳ ಸೇವೆಯಲ್ಲಿ ತೊಡಗಿಸಿಕೊಂಡರೆ ಆ ಮನೆಯವರನ್ನೆಲ್ಲ ‘ ಶ್ರೀಗುರು ಸೇವೆಯ ಚರಣ ಕುಸುಮಗಳು ‘ ಎಂದು ಹೇಳಬಹುದಲ್ಲವೇ ? ಅಂತಹ ಒಂದು ಕುಟುಂಬ ಹೊನ್ನಾವರ ಮಂಡಲದ ಹೊನ್ನಾವರ ವಲಯದ ನೀಲ್ಕೋಡು ಗುಬ್ಬಿಮನೆಯ ಸುಬ್ರಹ್ಮಣ್ಯ ಹೆಗಡೆ ಅವರ ಪತ್ನಿ ಕಮಲಾ ಎಸ್. ಹೆಗಡೆ ಅವರದ್ದು. ” ನಮ್ಮ ಸೇವೆಯ ಬಗ್ಗೆ ಹೇಳಲೇನಿದೆ..? ಶ್ರೀಗುರುಗಳ ಅನುಗ್ರಹ, ಆಶೀರ್ವಾದದಿಂದ ನಾವೆಲ್ಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಪುಣ್ಯ ದೊರಕಿದೆ. ‌ಇದಕ್ಕಿಂತ ಮಿಗಿಲಾದ ಸೌಭಾಗ್ಯ ಇನ್ನೇನಿದೆ ” […]

Continue Reading

ಗೋಮಾತೆಯ ಸೇವೆಗೆ ಸರಳ ಹಾದಿ ; ಮಾತೃತ್ವಮ್ :ಸುಜಾತ ಮೈಸೂರು

  ” ಶ್ರೀಗುರುಸೇವೆಯಲ್ಲಿ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಾಗ ದೊರಕುವ ನೆಮ್ಮದಿ, ಸಂತಸ ಬಣ್ಣನೆಗೆ ಸಿಗುವಂಥದ್ದಲ್ಲ. ಶ್ರೀಗುರು ಕೃಪೆಯೂ ಹಾಗೆಯೇ, ಬದುಕಿನಲ್ಲಿ ಅನೇಕ ಸಮಸ್ಯೆಗಳು ತಲೆದೋರಿದಾಗ ಸುಜ್ಞಾನವೆಂಬ ಬೆಳಕನ್ನು ನೀಡಿ ಆ ತೊಂದರೆಗಳನ್ನು ನಿವಾರಿಸುವುದು ಶ್ರೀಗುರುಗಳ ಅನುಗ್ರಹ. ಅದನ್ನು ಮಾತಿನ ಮೂಲಕವಾಗಲಿ, ಅಕ್ಷರಗಳ ಮೂಲಕವಾಗಲಿ ವಿವರಿಸಲು ಸಾಧ್ಯವಿಲ್ಲ. ಶ್ರೀಗುರುಗಳ ಮಹತ್ವದ ಯೋಜನೆಯಾದ ಮಾತೃತ್ವಮ್ ಮಾತೆಯರಿಗೆ ಮನೆಯಲ್ಲಿದ್ದುಕೊಂಡೇ ಗೋಸೇವೆ ಮಾಡಲು ದೊರಕಿದ ಅತ್ಯಂತ ಸುಲಭ ಹಾಗೂ ಸರಳವಾದ ಹಾದಿ . ಯಾರಿಗೂ ಯಾವುದೇ ಒತ್ತಡವಿಲ್ಲದೆ ಮಾಡಬಹುದಾದ ಸೇವೆಯಿದು ” ಎನ್ನುವವರು […]

Continue Reading