ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ-೮

ವ್ಯಾಸಮಹರ್ಷಿಗಳ ರೂಪದ ಬೆಳಕು ಶುಕಮಹರ್ಷಿಗಳ ರೂಪದಿಂದ ಹೊರಹೊಮ್ಮಿ ಅವಿಚ್ಛಿನ್ನ ಗುರುಪರಂಪರೆಯನ್ನು ಮುಂದುವರೆಸಿತು. ಗುರುಪರಂಪರೆಗೆ ಮೆರಗು ನೀಡಿ ಲೋಕ ಬೆಳಗಿದ ಶುಕ ಮುನಿಯ ಪಾತ್ರ ಪರಿಚಯವನ್ನು ಮಾಡಿಕೊಳ್ಳೋಣ. ಶುಕರು ಜನಿಸಿದ್ದು ಅರಣಿಯಲ್ಲಿ. (ಅರಣಿಯೆಂದರೆ ಯಜ್ಞಾಗ್ನಿಯನ್ನು ಸಿದ್ಧಪಡಿಸುವ ಸಾಧನ). ವ್ಯಾಸರು ಅಗ್ನಿಯಂತಹ, ಭೂಮಿಯಂತಹ, ಜಲದಂತಹ, ವಾಯುವಿನಂತಹ, ಅಂತರಿಕ್ಷದಂತಹ ಧೈರ್ಯಹೊಂದಿರುವ ಪುತ್ರಾಪೇಕ್ಷೆಯ ಸುಸಂಕಲ್ಪವ  ಹೊತ್ತು ಮಹೇಶ್ವರನ ಕುರಿತು  ದಿವ್ಯಂಶತವರ್ಷಗಳ ದೀರ್ಘತಪಸ್ಸನ್ನಾಚರಿಸುತ್ತಾರೆ. ತತ್ಫಲವಾಗಿ ಸಾಕ್ಷಾತ್ ಪರಮೇಶ್ವರನೇ ಪ್ರತ್ಯಕ್ಷನಾಗಿ ಅಗ್ನಿಯಂತಹ, ವಾಯುವಿನಂತಹ, ಭೂಮಿಯಂತಹ, ಜಲದಂತಹ ಶುದ್ಧವಾದ ಮಹಾತ್ಮನಾದ ಸುತ ಜನಿಸುವನೆಂದು ವರ ದಯಪಾಲಿಸುತ್ತಾನೆ. ವರ […]

Continue Reading

ಗೋಸೇವೆ ಮತ್ತು ಶ್ರೀ ಮಠದ ಸೇವೆಯಿಂದ ದೊರಕುವ ಆತ್ಮತೃಪ್ತಿ ಇನ್ನೆಲ್ಲೂ ಸಿಗದು: ಡಾ. ಶಾರದಾ ಜಯಗೋವಿಂದ

ಮೂಲತಃ ಮುಂಗ್ಲಿಮನೆ ಫ್ರೊ. ಮರಿಯಪ್ಪ ಭಟ್ ಮತ್ತು ಸತ್ಯಭಾಮಾ ದಂಪತಿಗಳ ಪುತ್ರಿಯಾದ ಡಾ. ಶಾರದಾ ಜಯಗೋವಿಂದ ಅವರು ಎಂ.ಎ.ಪಿಎಚ್.ಡಿ ಪದವಿ ಗಳಿಸಿದವರು. ಚೆನ್ನೈ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ (Rank)ದೊಂದಿಗೆ ಇಂಗ್ಲೀಷ್ ಎಂ. ಎ.ಪದವಿ ಗಳಿಸಿದ ಅವರು ಆಂಗ್ಲಭಾಷಾ ಉಪನ್ಯಾಸಕಿಯಾಗಿ ದೆಹಲಿ,ನೈಜೀರಿಯಾಗಳಲ್ಲಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದವರು. ಆಲಂಗಾರು ಮನೆತನದ ಜಯಗೋವಿಂದ ಅವರ ಪತ್ನಿಯಾದ ಶಾರದಾ ಅವರು ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ನಿವಾಸಿಗಳಾಗಿ ಶ್ರೀಮಠದ ಸೇವೆಗೆ ಸದಾ ಮುಂಚೂಣಿಯಲ್ಲಿದ್ದಾರೆ. ೧೯೯೧ ರ […]

Continue Reading

ಗುರುಕಿರಣ್ ಹೆಗಡೆಯ ಹಾಡಿನ ಲಹರಿ

ಪ್ರಪಂಚದಲ್ಲಿ ನಾನಾ ಕಲೆಗಳಿದ್ದರೂ ಸಂಗೀತದ ಆಕರ್ಷಣೆಯೇ ವಿಭಿನ್ನ. ಇಂತಹ ಸಂಗೀತದ ವಿವಿಧ ಪ್ರಕಾರಗಳನ್ನು ಒಲಿಸಿಕೊಂಡಿರುವ ಸರಸ್ವತೀ ಪುತ್ರ ಹೊನ್ನಾವರದ ಗುರುಕಿರಣ್ ಹೆಗಡೆ. ಮನೆಯಲ್ಲಿ ಈತನ ತಾಯಿ ಹಾಡುತ್ತಿದ್ದರು. ಹಾಗಾಗಿ ಚಿಕ್ಕಂದಿನಿಂದಲೇ ತಾಯಿಯ ಮಾರ್ಗದರ್ಶನದಲ್ಲಿ ಸಂಗೀತ ಶಾರದೆಗೆ ಶರಣೆಂದ ಈತ ಇಂದು ಝೀ ಕನ್ನಡ ಸರಿಗಮಪ ಸ್ಪರ್ಧೆಯಲ್ಲಿ ರನ್ನರ್‌ಅಪ್ ಸ್ಥಾನ ಪಡೆಯುವ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದಾನೆ. ಪ್ರಾರಂಭದಲ್ಲಿ ತಾಯಿಯ ಬಳಿ ಅಧ್ಯಯನ ನಡೆಸಿದ ಈತ ಬಳಿಕ ಕೆಲಕಾಲ ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಸುಗಮ ಸಂಗೀತವನ್ನು ಹೊನ್ನಾವರದ ವಿ.ರಾಜೇಶ್ವರಿ ಭಟ್ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ -೭

ಬ್ರಹ್ಮರ್ಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠರ ಮರಿಮಗ, ಶಕ್ತಿ ಮಹರ್ಷಿಯ ಮೊಮ್ಮಗ, ಪರಾಶರರ ಪುತ್ರ ಮತ್ತು ಶುಕಬ್ರಹ್ಮರ್ಷಿಯ ತಂದೆಯಾದ ಅಕಲ್ಮಷರೂ, ತಪೋನಿಧಿಯೂ ಆದ ವ್ಯಾಸಮಹರ್ಷಿಗಳಿಗೆ ನಮಿಸುತ್ತಾ ಮುಂದುವರೆಯೋಣ. ತಾಯಿ ದೇವಿ ಸತ್ಯವತಿಯ ಆಜ್ಞಾನುಸಾರ ಸಂತತಿಯ ಭಾಗ್ಯವನ್ನು ಕರುಣಿಸಿ ನಶಿಸುತ್ತಿದ್ದ ಆ ಕುರುಕುಲವನ್ನು ಉಳಿಸಿದ ಮಹಾಮಹಿಮರು. ಸಮಾಜಕ್ಕೆ ಅವರ ಅರಿವಿನ ಹರಿವು ಯಾವ ಯಾವ ರೂಪದಿಂದ ಹರಿಯಿತೆಂದು ತಿಳಿಯಲು ಅವರ ರಚನೆಗಳನ್ನು ಅವಲೋಕಿಸೋಣ.  ಮಹಾಕಾವ್ಯ ಮಹಾಭಾರತ, ವೇದರಾಶಿಯ ವಿಂಗಡಣೆಯಷ್ಟೇ ಅಲ್ಲದೆ ವೇದಾಂತನ್ಯಾಯವನ್ನು ಸಮರ್ಥಿಸುವ ಬ್ರಹ್ಮಸೂತ್ರ, ವೇದಾರ್ಥವನ್ನು ವಿವರಿಸುವ ಹದಿನೆಂಟು ಪುರಾಣಗಳನ್ನು ರಚಿಸಿದರೆಂದು […]

Continue Reading

ಶ್ರೀ ಮಠದ ಸೇವೆ ಮನಸ್ಸಿಗೆ ಮುದ ನೀಡುವ ಕಾರ್ಯ: ಮನೋರಂಜಿನಿ ಆರ್ .ಭಟ್ , ಮುಂಬೈ

“ಶ್ರೀಮಠದ ಸೇವೆ ಮನಸ್ಸಿಗೆ ಅತ್ಯಂತ ಮುದ ನೀಡುತ್ತಿದೆ. ಮುಂಬೈ ಮಹಾನಗರದಲ್ಲಿ ಪ್ರತೀ ತಿಂಗಳು ನಡೆಯುವ ಹವ್ಯಕ ಸಭೆಗಳು ನಮ್ಮ ಸಂಘಟನೆಯನ್ನು ಬಲ ಪಡಿಸಲು ಅತ್ಯಂತ ಉಪಯುಕ್ತವಾಗಿದೆ. ಶ್ರೀಗುರುಗಳ ಎಲ್ಲಾ ಯೋಜನೆಗಳಲ್ಲೂ ನಾವೆಲ್ಲ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದೇವೆ” ಈ ಮಾತುಗಳು ಸಿದ್ಧಮೂಲೆ ಮೂಲದ ಉದ್ಯೋಗ ನಿಮಿತ್ತ ಪ್ರಸ್ತುತ ಮುಂಬೈ ನಿವಾಸಿಗಳಾಗಿರುವ ರಮಣ ಭಟ್ ಸಿದ್ಧಮೂಲೆ ಇವರ ಪತ್ನಿ ಮನೋರಂಜಿನಿಯವರದ್ದು. ಮಂಗಳೂರು ಸಮೀಪದ ಪಣಂಬೂರು ರಾಮರಾವ್,ಮೀನಾಕ್ಷಿ ದಂಪತಿಗಳ ಪುತ್ರಿಯಾದ ಮನೋರಂಜಿನಿಯವರು ಮುಂಬೈ ನಗರದಲ್ಲೇ ಬೆಳೆದವರು. ಕೆನರಾ ಬ್ಯಾಂಕ್ ನಲ್ಲಿ ಉನ್ನತ ಉದ್ಯೋಗದಲ್ಲಿದ್ದ […]

Continue Reading

ಸಮರ್ಥ್ ರಾವ್ ಎಂಬ ಚೆಸ್ ರಂಗದ ಅದ್ಭುತ!

ಹುಟ್ಟುವ ಸಂದsದಲ್ಲೇ ಸೆಲೆಬ್ರಲ್ ಪಾಲ್ಸಿ ಎಂಬ ಅಂಗವೈಕಲ್ಯತೆಗೆ ತುತ್ತಾದ ಪರಿಣಾಮ ಸ್ವತಂತ್ರವಾಗಿ ನಿಲ್ಲಲು ಅಥವಾ ನಡೆಯಲು ಸಾಧ್ಯವಿಲ್ಲ. ದೇಹದ ಸಮತೋಲನ ಇಲ್ಲದ ಇವರಿಗೆ ೭೫% ಕ್ಕಿಂತಲೂ ಅಧಿಕ ಅಂಗವೈಕಲ್ಯತೆ ಆವರಿಸಿದೆ. ದೈನಂದಿನ ಚಟುವಟಿಕೆ ನಡೆಸಲು ಕೂಡ ಬೇರೆಯವರನ್ನು ಅವಲಂಬಿಸಿದ್ದಾರೆ. ಆದರೆ ಈ ಎಲ್ಲದರ ನಡುವೆಯೂ ತನ್ನ ಅವಿರತ ಪರಿಶ್ರಮದಿಂದ ಇಂದು ಚದುರಂಗ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ. ಅಂದಹಾಗೆ ಇವರ ಹೆಸರು ಸಮರ್ಥ್ ಜೆ. ರಾವ್. ಮೂಲತಃ ಕುಂದಾಪುರದ ಬಸ್ರೂರಿನ ಸದ್ಯ ಹೊನ್ನಾವರದಲ್ಲಿ ನೆಲೆಸಿರುವ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ~ ಸಂಚಿಕೆ – ೬

ಮಹಾತೇಜಸ್ವಿ ಬಾಲಕ, ಯಮುನಾ ನದಿಯ ದ್ವೀಪದಲ್ಲಿ ಜನಿಸಿ ಹುಟ್ಟಿದೊಡನೆಯೇ ತಾಯಿಗೆ ಸಾಷ್ಟಾಂಗ ಪ್ರಣಾಮ ಮಾಡಿ ತಾಯಿಯ ಅನುಜ್ಞೆಯನ್ನು ಪಡೆದು ಸ್ಮರಿಸಿದಾಗ ಬರುವೆನೆಂದು ಆ ತಾಯಿಗೆ ಹೇಳಿ ತಪಸ್ಸನ್ನಾಚರಿಸಲು ನಡೆದ ಬಾಲಕ. ಅವನೇ ಮುಂದೆ ಲೋಕಪ್ರಸಿದ್ಧನಾದ ಬ್ರಹ್ಮರ್ಷಿ ಶ್ರೀಕೃಷ್ಣದ್ವೈಪಾಯನ. ಅವಿಚ್ಛಿನ್ನ ಗುರುಪರಂಪರೆಯ ಅರಿವಿನ ಹರಿವು ಪರಾಶರರ ನಂತರ ಹೀಗೆ ಬ್ರಹ್ಮರ್ಷಿ ಶ್ರೀಕೃಷ್ಣದ್ವೈಪಾಯನರ ರೂಪದಿಂದ ಮುಂದುವರೆಯಿತು. ಬ್ರಹ್ಮರ್ಷಿ ಪರಾಶರ ಮತ್ತು ಸತ್ಯವತಿಯ ಸಮಾಗಮದಿಂದ ನದಿಯ ಮಧ್ಯದ ದ್ವೀಪದಲ್ಲಿ ಹುಟ್ಟಿದ್ದರಿಂದ ಶ್ರೀಕೃಷ್ಣದ್ವೈಪಾಯನರಿಗೆ ಅನ್ವರ್ಥವಾಗಿ ದ್ವೈಪಾಯನನೆಂದು ಮತ್ತು ಕಪ್ಪು ಬಣ್ಣ ಹೊಂದಿದ್ದರಿಂದ ಕೃಷ್ಣ […]

Continue Reading

ಗೋಮಾತೆಯ ಸೇವೆಯಿಂದ ಸಾರ್ಥಕ ಭಾವ ಮೂಡಿದೆ: ಕಂಜಾಕ್ಷಿ ನಾಗಭೂಷಣ

ಸಾಗರ ಸಮೀಪದ ಹುಕ್ಲು ಮೂಲದವರಾದ ಪ್ರಸ್ತುತ ಉದ್ಯೋಗ ನಿಮಿತ್ತ ಬೆಂಗಳೂರಿನ ಜೆಪಿ ನಗರ ನಿವಾಸಿಯಾಗಿರುವ ಕಂಜಾಕ್ಷಿ ನಾಗಭೂಷಣ ಅವರು ಶ್ರೀಮಠದ ಸೇವೆ, ಗೋಸೇವೆಯಲ್ಲಿ ಸಾರ್ಥಕತೆ ಕಂಡವರು. “ಶ್ರೀಗುರುಗಳ ಮಾತುಗಳಿಂದ ಪ್ರೇರಣೆಗೊಂಡು ಮಾಸದ ಮಾತೆಯಾದೆ. ಇದರಲ್ಲಿ ವೈವಿಧ್ಯಮಯ ಅನುಭವಗಳನ್ನು ಗಳಿಸಿಕೊಂಡು ಮಾತೃತ್ವಮ್ ಗುರಿಯನ್ನು ತಲುಪಿದೆ. ನನ್ನ ಕೈಲಾದ ಮಟ್ಟಿಗೆ ಗೋಸೇವೆ, ಗುರುಸೇವೆ ಮಾಡಿದ ನೆಮ್ಮದಿ, ಸಂತೃಪ್ತಿ ಮನದಲ್ಲಿದೆ” ಎನ್ನುವ ಇವರು ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದವರು. ಈ ಅನುಭವವೇ ಅವರಿಗೆ ಮಾತೃತ್ವಮ್ ಗುರಿ […]

Continue Reading

ಬಹುಮುಖ ಪ್ರತಿಭೆ ಸಾನ್ವಿ ರಾವ್

ಭರತನಾಟ್ಯ, ಸಂಗೀತ, ಚೆಸ್, ಟೇಬಲ್ ಟೆನ್ನಿಸ್, ಏಕಪಾತ್ರಾಭಿನಯ, ಭಾಷಣ, ಚಿತ್ರಕಲೆ, ಕೈಬರಹ, ದೇಶಭಕ್ತಿಗೀತೆ, ಜನಪದ ಗೀತೆ, ಛದ್ಮವೇಷ…. ಹೀಗೆ ಹತ್ತಾರು ಕ್ಷೇತ್ರದಲ್ಲಿ ಮಿಂಚುತ್ತಿದ್ದಾಳೆ ಹದಿನಾಲ್ಕರ ಹರೆಯದ ಪ್ರತಿಭೆ. ಇವಳೇ ಹೊನ್ನಾವರದ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಜಗದೀಶ ರಾವ್ ಬಿ.ಎಸ್. ಹಾಗೂ ವಿನುತಾ ಭಟ್ ದಂಪತಿಯ ಪುತ್ರಿ ಸಾನ್ವಿ ರಾವ್. ಹೊನ್ನಾವರದ ಎಂಪಿಇ ಸೊಸೈಟಿಯ ಸೆಂಟ್ರಲ್ ಸ್ಕೂಲ್‌ನ ೯ನೇ ತರಗತಿ ವಿದ್ಯಾರ್ಥಿನಿಯಾದ ಈಕೆ, ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾಳೆ. ಸಂಗೀತ ಸಾಧಕಿ: ವಿ.ಸೌಮ್ಯ ಭಟ್ ಅವರ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೫

ಬ್ರಹ್ಮರ್ಷಿ ಶಕ್ತಿ ಅದೃಶ್ಯಂತಿಯರ ಪುತ್ರ ಬ್ರಹ್ಮರ್ಷಿ ಪರಾಶರ. ವಂಶವೇ ನಶಿಸಿಹೋಗುವಾಗ ಕುಲವನ್ನು ಕಾಪಾಡಿ ವಂಶ ಬೆಳಗಿದ ಮಹಾಮುನಿ. ವಿಧಿಯಾಟದಂತೆ ತಮ್ಮ ನೂರು ಮಕ್ಕಳನ್ನೂ ಕಳೆದುಕೊಂಡು ಲೋಕನಿಯಮದಂತೆ ಮಹಾ ದುಃಖದಲ್ಲಿ ಮುಳುಗಿದ ವಸಿಷ್ಠರು ಆತ್ಮಹತ್ಯೆಗೆ ಮುಂದಾದಾಗ ಅವರಿಗೆ ತಿಳಿದ ಸಂಗತಿ ಸೊಸೆ ಅದೃಶ್ಯಂತಿ ಗರ್ಭವತಿ. ಆ ಗರ್ಭಸ್ಥ ಶಿಶು ವಸಿಷ್ಠರಿಗೆ ಬದುಕಿಗೆ ಭರವಸೆಯ ಬೆಳಕ ನೀಡಿ, ಅವರ ಸಾವನ್ನು ತಡೆದು ಜಯಿಸಿದ್ದಕ್ಕೆ ಅವರೇ ( ವಸಿಷ್ಠರೇ) ‘ಪರಾಶರ’ ಎಂಬ ನಾಮಕರಣವನ್ನು ಮಾಡಿದರು. ಮಗು ಹುಟ್ಟಿದ ಮೇಲೆ ವಸಿಷ್ಠರೇ ತಮ್ಮ […]

Continue Reading

ಶ್ರೀ ಸಂಸ್ಥಾನದವರ ಯೋಜನೆಗಳಲ್ಲಿ ಭಾಗಿಯಾಗುವುದೇ ಸೌಭಾಗ್ಯ : ಜ್ಯೋತಿ ಕೇಶವ ಭಟ್

ಅಳಿಕೆ ಗ್ರಾಮದ ಎರುಂಬು ಕೇಶವ ಭಟ್ ಇವರ ಪತ್ನಿಯಾಗಿರುವ ಜ್ಯೋತಿ ಕೆ.ಭಟ್ ವೃತ್ತಿಯಲ್ಲಿ ಉಪನ್ಯಾಸಕಿಯಾದರೂ ಶ್ರೀಮಠದ ಸೇವಾಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವವರು. ನೆಗಳಗುಳಿ ಮಹಾಬಲೇಶ್ವರ ಭಟ್ ಶಂಕರಿ ಅಮ್ಮ ದಂಪತಿಗಳ ಪುತ್ರಿಯಾಗಿರುವ ಜ್ಯೋತಿಗೆ ಬಾಲ್ಯದಿಂದಲೇ ಗೋವುಗಳ ಮೇಲೆ ವಿಪರೀತ ಪ್ರೀತಿ. “ತವರುಮನೆಯಲ್ಲಿದ್ದ ದೇಶೀ ತಳಿಯ ಹಸುವಿನ ಹಾಲು ಕುಡಿದೇ ಬೆಳೆದ ನನಗೆ ಈಗಲೂ ಗೋವುಗಳೆಂದರೆ ವಿಶೇಷ ವ್ಯಾಮೋಹ. ಆದರೆ ನಮ್ಮ ಉದ್ಯೋಗ ನಿಮಿತ್ತ ಪೇಟೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಬಂದ ಕಾರಣ ಶ್ರೀಗುರುಗಳ ಗೋಸೇವಾ ಯೋಜನೆಗಳಿಗೆ ನಮ್ಮಿಂದ ಸಾಧ್ಯವಾದಷ್ಟು ಸಹಕಾರ […]

Continue Reading

ಕಲಾ ಸಾಧನೆಯ ಯುವ ಪ್ರತಿಭೆ ರವೀಂದ್ರ ಹೆಗಡೆ

ಕಲೆ ಎನ್ನುವುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕಲಾ ಲೋಕದಲ್ಲಿ ಸ್ವ ಪರಿಶ್ರಮದಿಂದ ಅಧ್ಯಯನ ನಡೆಸಿ ಛಾಪು ಮೂಡಿಸುತ್ತಿರುವ ಪ್ರತಿಭೆಯೇ ಸಿದ್ದಾಪುರದ ರಾಮಕೃಷ್ಣ ಹೆಗಡೆ ಮತ್ತು ರೇಖಾ ದಂಪತಿ ಪುತ್ರ ರವೀಂದ್ರ ಹೆಗಡೆ. ಮಣ್ಣಾಟದಿಂದ ಕುಂಚದವರೆಗೆ….: ‘ಬಾಲ್ಯದ ದಿನಗಳಲ್ಲಿ ದಿನವಿಡೀ ಮಣ್ಣಿನಲ್ಲೇ ಆಟ ಆಡುತ್ತಿದ್ದೆ. ಮಣ್ಣಿನಿಂದ ಬಟ್ಟೆಗಳನ್ನು ಕಲೆ ಮಾಡಿಕೊಳ್ಳುತ್ತಿದ್ದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನನ್ನ ತಾಯಿ ಬಣ್ಣದ ಬ್ರಶ್ ಕೊಟ್ಟು ಕೂರಿಸುತ್ತಿದ್ದರು. ಅಂದು ಬಟ್ಟೆ ಕಲೆ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೪

ಅವಿಚ್ಛಿನ್ನ ಗುರುಪರಂಪರೆಯ ಅರಿವಿನ  ಹರಿವಿನಲ್ಲಿ ಬರುವ ಮುಂದಿನ ಪಾತ್ರ ಬ್ರಹ್ಮರ್ಷಿ ಶಕ್ತಿ. ಹೋಲಿಕೆಯೇ ಇಲ್ಲದ ಎರಡು ವ್ಯಕ್ತಿತ್ವಗಳಾದ ವಸಿಷ್ಠ ಅರುಂಧತಿಯರ ಧರ್ಮದಾಂಪತ್ಯದ ಫಲ ಇವರು. ಹೆಸರೇ ಸೂಚಿಸುವಂತೆ ಬ್ರಹ್ಮರ್ಷಿ ಶಕ್ತಿಗಳ ಜ್ಞಾನ ಚಕ್ಷುವಿನ ಶಕ್ತಿ ಅಗಾಧ. ತಂದೆಯೊಡನೆ ಯಜ್ಞ, ಯಾಗ, ವಿದ್ಯಾದಾನ ಒಟ್ಟಿನಲ್ಲಿ ಬ್ರಹ್ಮಚರ್ಯೆ ಚಾಚೂ ತಪ್ಪದೇ ಸಾಗುತ್ತಿದ್ದರೂ ವಿಧಿನಿಯಾಮಕವಾದ ಭೂಲೋಕ ಇವರ ಬದುಕಿನಲ್ಲೂ ಚಿತ್ರ ವಿಚಿತ್ರ ಘಟನೆಗಳಿಗೆ ಇವರನ್ನು ಪಾತ್ರಧಾರಿಯನ್ನಾಗಿ ಮಾಡಿತು. ಅದೊಂದು ಸಂದರ್ಭ; ಇಕ್ಷ್ವಾಕು ವಂಶಸ್ಥನಾದ ಸತ್ಯವ್ರತನೆಂಬ ರಾಜ ಸಶರೀರ ಸ್ವರ್ಗಸ್ಥನಾಗಬೇಕೆಂಬ ಬಯಕೆಯ ಈಡೇರಿಕೆಗೆ […]

Continue Reading

“ಮಾಸದ ಮಾತೆಯಾಗಲು ಕಾರಣ, ಪ್ರೇರಣ ಹಾಗೂ ಧಾರಣಾಶಕ್ತಿ ಶ್ರೀಚರಣ” ಲಲಿತಾಲಕ್ಷ್ಮೀ ಭಟ್ಟ ಸಿದ್ಧಾಪುರ

ಲಲಿತಾಲಕ್ಷ್ಮೀ ಎಂಬ ಹೆಸರು ಶ್ರೀಮಠದ ಶಿಷ್ಯರಿಗೆ ಸದಾ ಸುಪರಿಚಿತ. ಅದರಲ್ಲೂ ಗುರುಚರಣ ಸೇವಕಿ ಲಲಿತಾಲಕ್ಷ್ಮೀ ಎಂಬ ಕಾವ್ಯನಾಮದಿಂದ ಸದಾ ಶ್ರೀಗುರುಗಳ ಬಗ್ಗೆ, ಶ್ರೀಮಠದ ಬಗ್ಗೆ, ಶ್ರೀಮಠದ ಶಿಷ್ಯಬಂಧುಗಳ ಅನುಭವಗಳ ಬಗ್ಗೆ ಬಹಳ ಸೊಗಸಾದ ಭಾಷೆಯಲ್ಲಿ ಆಸ್ತಿಕರ ಮನಸ್ಸಿನಲ್ಲಿ ಭಾವುಕತೆ ತುಂಬುವಂತಹ ಆಪ್ತ ಶೈಲಿಯ ಬರಹವನ್ನು ಮಾಧ್ಯಮಗಳಲ್ಲಿ ಪ್ರಸ್ತುತ ಪಡಿಸುವ ಇವರ ಲೇಖನಗಳನ್ನು ಓದದ ಶಿಷ್ಯಬಂಧುಗಳು ವಿರಳ. ಶ್ರೀಮಠದ ಸೇವೆಯಲ್ಲಿ ಅತೀವ ಆಸಕ್ತಿ, ಶ್ರದ್ಧೆ,ಭಕ್ತಿ ಹೊಂದಿರುವ ಇವರು ಮಾತೃತ್ವಮ್ ಯೋಜನೆಯಲ್ಲಿ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಆರಂಭಿಸಿ ಒಂದೇ […]

Continue Reading

ರಂಗೋಲಿ ಕಲೆಯ ಏಕಲವ್ಯ!

ಆತ ಡಿಪ್ಲೋಮಾ ಅಧ್ಯಯನ ಮಾಡುತ್ತಿರುವ ಕಿಶೋರ. ಈತ ರಂಗೋಲಿ ಪುಡಿಯನ್ನು ಹಿಡಿದರೆ ಸರಾಗವಾಗಿ ವಿವಿಧ ಕಲಾಕೃತಿಗಳನ್ನು ಚಿತ್ರಿಸಬಲ್ಲ. ಕ್ಲೇ ಮಾಡೆಲಿಂಗ್‌ನಲ್ಲೂ ಹಲವಾರು ಕಲಾಕೃತಿ ಮತ್ತು ಎಕ್ರೆಲಿಕ್ ಪೇಂಟ್ ಮೂಲಕ ಚಿತ್ರ ಬಿಡಿಸುವ ವಿಶಿಷ್ಟ ಕಲೆಯನ್ನು ಒಲಿಸಿಕೊಂಡಿದ್ದಾನೆ. ಕಲಾ ಲೋಕದಲ್ಲಿ ಅಸಾಧಾರಣ ಸಾಧನೆ ಮಾಡುತ್ತಿರುವ ವಿನಾಯಕ ಹೆಬ್ಬಾರ್ ಈ ಕಲಾ ಸಾಧಕ. ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಮಣಕಿ ಗ್ರಾಮದ ರಾಮಚಂದ್ರ ಹೆಬ್ಬಾರ್ ಮತ್ತು ವಿನೋದಿನಿ ಹೆಬ್ಬಾರ ದಂಪತಿಗಳ ಪುತ್ರ ವಿನಾಯಕ ತನ್ನ ಅವಿರತ ಶ್ರಮದ ಮೂಲಕ ಕಲಾ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೩

ಗುರುಪರಂಪರಾನುಗತವಾಗಿ  ಅರಿವು ಅವಿಚ್ಚಿನ್ನವಾಗಿ ಹೇಗೆ ಹರಿಯಿತು ಎಂದು ಅವಲೋಕಿಸುವಾಗ ಗುರು ಎಂದು, ಜ್ಞಾನಪರಂಪರೆಯ ಹರಿವಿನ ಕೊಂಡಿಗಳಿಗೆ ಬೆಸುಗೆಯೆಂದು ಎನ್ನಿಸಿಕೊಳ್ಳುವ ಪಾತ್ರಗಳ ಪರಿಚಯ ಮಾಡಿಕೊಳ್ಳುವುದು ಅತ್ಯವಶ್ಯ. ಮೊದಲನೆ ಸಂಚಿಕೆಯಲ್ಲೇ ಅವಲೋಕಿಸಿದಂತೆ ಶ್ವೇತಾಶ್ವತರೋಪನಿಷತ್ತಿನ ಅನುಕ್ರಮಣಿಕೆಯ ಪ್ರಕಾರ ಬ್ರಹ್ಮನ ತರುವಾಯು ಬರುವ ಶುದ್ಧಪಾತ್ರ ಬ್ರಹ್ಮರ್ಷಿ ವಸಿಷ್ಠ ಮುನಿಶ್ರೇಷ್ಠ ಕ್ಷಮಾಮೂರ್ತಿ ಎಲ್ಲೂ ಕೊರತೆಯನ್ನೇ ಕಾಣಲಾಗದ ವ್ಯಕ್ತಿತ್ವ. ಇವರ ಜನನವೇ ಒಂದದ್ಭುತ. ಸತ್ಯಯುಗದ ಕಾಲದಲ್ಲಿ ಮಹಾತಪಸ್ವಿ ಮೈತ್ರಾವರುಣರು ತಪವಗೈಯ್ಯುತ್ತಿದ್ದಾಗ ದೇವಲೋಕದ ಅಪ್ಸರೆ ಊರ್ವಶಿ ಆ ಜಾಗದ ಸನಿಹಕ್ಕೆ ಬಂದು ನೃತ್ಯಗೈದಳು. ಅದ್ಯಾವ ಘಳಿಗೆಯೋ ಏನೋ!! […]

Continue Reading

“ಶ್ರೀಮಠದ ಸೇವೆಗೆ ಬದುಕಿನಲ್ಲಿ ಮೊದಲ ಆದ್ಯತೆ” : ಮಲ್ಲಿಕಾ ಕಲ್ಲಡ್ಕ

ವದ್ವ ಲಕ್ಷ್ಮೀ ನಾರಾಯಣ ಭಟ್ ಹಾಗೂ ಸರಸ್ವತಿ ಇವರ ಪುತ್ರಿಯಾದ ಮಲ್ಲಿಕಾ ಕಲ್ಲಡ್ಕ ಅವರಿಗೆ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಅತೀವ ಆಸಕ್ತಿ. ಮುಳಿಯ ಗೋಪಾಲಕೃಷ್ಣ ಭಟ್ ಅವರನ್ನು ವಿವಾಹವಾದ ನಂತರ ಶ್ರೀಮಠದ ಸಂಪರ್ಕ ದೊರಕಿತು. ಜೊತೆಗೆ ಶ್ರೀ ಮಠದ ವಿವಿಧ ಸೇವಾ ಯೋಜನೆಗಳಲ್ಲಿ ಭಾಗಿಯಾಗುವ ಸದವಕಾಶವೂ ಒದಗಿಬಂತು. ಪ್ರಸ್ತುತ ಮಾತೃತ್ವಮ್ ನ ವಿವೇಕ ಲಕ್ಷ್ಮಿ ವಿಭಾಗದ ಕೇಂದ್ರ ಮಟ್ಟದ ಅಧ್ಯಕ್ಷೆಯಾಗಿರುವ ಮಲ್ಲಿಕಾ ಅವರು ತಮ್ಮ ಸೇವೆಯ ಸಂದರ್ಭದಲ್ಲಿ ವೈವಿಧ್ಯಮಯ ಅನುಭವಗಳನ್ನು ಪಡೆದುಕೊಂಡವರು. “ಹಿರಿಯ ಗುರುಗಳ ಕಾಲದಿಂದಲೂ ಶ್ರೀಮಠದ […]

Continue Reading

ಲಾಕ್‌ಡೌನ್ ಸಮಯ ಸದ್ಭಳಕೆ: ಮನೆಯಲ್ಲೇಯಕ್ಷಗಾನ ಮುಖವರ್ಣಿಕೆ ಬಿಡಿಸಿ ಹೆಜ್ಜೆ ಹಾಕುತ್ತಿದ್ದಾನೆ ೧೪ ರ ಪೋರ!

ಕಳೆದ ೩-೪ ತಿಂಗಳುಗಳಿಂದ ಎಲ್ಲಿ ನೋಡಿದರೂಕೊರೊನಾದ್ದೇ ಸುದ್ದಿ. ಮನೆಯಿಂದ ಹೊರಬಂದರೂಅದೇ ಸುದ್ದಿ. ಸರ್ಕಾರದ ಜಾರಿಗೊಳಿಸಿದ್ದ ಲಾಕ್‌ಡೌನ್ ಬಹುತೇಕ ಸಡಿಲಿಕೆಆಗುತ್ತಾ ಬಂದರೂ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವಕುರಿತು ಸರ್ಕಾರ ಮೀನಾಮೇಷಎಣಿಸುತ್ತಿದೆ. ಆದರೆಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಪೋರತಾನೇ ಸ್ವತಃಯಕ್ಷಗಾನ ಮುಖವರ್ಣಿಕೆ ಬರೆದುಕೊಂಡು ಮನೆಯಲ್ಲೇಯಕ್ಷಗಾನ ಮಾಡುತ್ತಿದ್ದಾನೆ. ಈತನ ನೃತ್ಯಕ್ಕೆ ಇವನ ಪಾಲಕರೇ ಪ್ರೇಕ್ಷಕರು! ಅಷ್ಟೇಅಲ್ಲದೇಕ್ರಾಫ್ಟ್, ಪೇಂಟಿಂಗ್‌ಗಳನ್ನು ಮಾಡುತ್ತಾ ಲಾಕ್‌ಡೌನ್ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾನೆ. ಈತನ ಹೆಸರು ಸ್ವಸ್ತಿಕ ಶರ್ಮಾ. ಗಡಿನಾಡುಕಾಸರಗೋಡುಜಿಲ್ಲೆಯ ಮುಳ್ಳೇರಿಯಾದ ಪಳ್ಳತ್ತಡ್ಕದ ಕೇಶವ ಶರ್ಮಾ ಮತ್ತು ದಿವ್ಯಾದಂಪತಿಯ ಪುತ್ರನಾದಈತ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ೯ನೇ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೨

ಅರಿವು ಗುರುಪರಂಪರಾನುಗತವಾಗಿ   ಹರಿದು ಬಂದಿದ್ದೆನಿತು ಎಂದು ಅವಲೋಕಿಸುತ್ತಾ ಹೋದರೆ ಈ ಪ್ರಶ್ನೆಗಳೆಲ್ಲಾ ಮನಸ್ಸಿನಲ್ಲಿ ಮೂಡುತ್ತದೆ..ಅರಿವೇಕೆ ಅವಿಚ್ಛಿನ್ನ ಗುರುಪರಂಪರೆಯಲ್ಲಿಯೇ ಹರಿದು ಬರಬೇಕು..? ಅದರ ಔಚಿತ್ಯವಾದರೂ ಏನು..? ಸ್ವಯಂ ಸಾಧನೆಯಿಂದ ಕಂಡುಕೊಳ್ಳಬಹುದಲ್ಲವೇ ಎಂದೆಲ್ಲ ಅನಿಸಿದರೆ…ಅದಕ್ಕೆ ಪ್ರತ್ಯುತ್ತರವಿಷ್ಟೆ..ಗುರು ಮಾಡಿಸುವ ಅರಿವಿನ ದರ್ಶನ ಸುಲಿದಿಟ್ಟ ಬಾಳೆಹಣ್ಣಿನಂತೆ. ರಾಮಕೃಷ್ಣ ಪರಮಹಂಸರೇ ಹೇಳುವಂತೆ ಜ್ಞಾನಿ ತರಗೆಲೆಯಂತೆ ಅವನು ತಾನೊಬ್ಬ ತೇಲಿಕೊಂಡು ದಾಟಬಲ್ಲ. ಆದರೆ ಇನ್ನೊಬ್ಬರನ್ನು ಹೊತ್ತೊಯ್ಯಲಾರ. ಅದೇ ಗುರುವೊಬ್ಬ ನೌಕೆಯಂತೆ. ಶರಣಾಗತರಾದ ಶಿಷ್ಯರನ್ನು ತನ್ನ ಮೇಲೆ ಹೊತ್ತೊಯ್ಯಬಲ್ಲ. ಪಂಡಿತನನ್ನು, ಪಾಮರನನ್ನು ಒಟ್ಟಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ […]

Continue Reading

ದೇಶೀ ಹಸುಗಳ ಮಹತ್ವವನ್ನು ಸಮಾಜ ಗುರುತಿಸಿದೆ: ಲಲಿತಾ ಹೆಬ್ಬಾರ್ ಕುಮಟಾ

“ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಶ್ರೀ ಸಂಸ್ಥಾನದವರಿಂದ ಬಾಗಿನ ಪಡೆದವಳು ನಾನು. ಮಾಸದ ಮಾತೆಯಾಗಿ ಸೇರಿದಾಗ ಗುರಿತಲುಪ ಬಲ್ಲೆನೇ ಎಂಬ ಆತಂಕ ಸಹಜವಾಗಿ ಮೂಡಿ ಬಂದಿತ್ತು. ಆದರೆ ಶ್ರೀಗುರು ವಚನಗಳೇ ಗೋಸೇವೆಯಲ್ಲಿ ನನಗೆ ದಾರಿದೀಪ. ಗುರುಚರಣಗಳನ್ನು ಸ್ಮರಿಸಿ ಮುನ್ನಡೆದೆ. ಕೇವಲ ಎರಡೇ ತಿಂಗಳಿನಲ್ಲಿ ಒಂದು ವರ್ಷಕ್ಕೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಮೂಲಕ ನನ್ನ ಗುರಿ ತಲುಪಿದೆ. ಎಲ್ಲವೂ ಗೋಮಾತೆ,ಶ್ರೀರಾಮ ದೇವರ ಕೃಪೆ” ಎನ್ನುತ್ತಾರೆ ಕುಮಟಾ ಮಂಡಲದ ಮಾತೃತ್ವಮ್ ನ ಮಂಡಲಾಧ್ಯಕ್ಷೆಯಾಗಿರುವ ಲಲಿತಾ […]

Continue Reading