” ಗೋಮಾತೆಯನ್ನು ಮಾತೆಯಂತೆ ಪ್ರೀತಿಸಬೇಕು ” : ಸರಸ್ವತಿ ಎಸ್. ಭಟ್, ತೆಕ್ಕೆಕರೆ

  ” ನಮ್ಮ ಪೂಜ್ಯ ಶ್ರೀ ಗಳು ಗೋರಕ್ಷಾ ಅಭಿಯಾನ ಆರಂಭಿಸಿದ ಮೇಲೆ ಗೋಮಾತೆಯನ್ನು ಆರ್ಥಿಕ ದೃಷ್ಟಿಯಿಂದ ನೋಡುವವರಲ್ಲಿ ಒಂದಿಷ್ಟು ಬದಲಾವಣೆ ಕಾಣಿಸುತ್ತಿದೆ. ದನ ಎಂದರೆ ಧನ ಎಂಬ ಭಾವನೆಯನ್ನು ಬದಿಗೆ ಸರಿಸಿ ಗೋಮಾತೆ ಎಂದರೆ ಶ್ರೀಮಾತೆ ಎಂಬ ಪೂಜ್ಯ ಭಾವ ಹೊಂದಿದ್ದಾರೆ , ಕೆಲವೇ ವರ್ಷಗಳಲ್ಲಿ ಮರೆಯಾಗಿ ಹೋಗಲಿದ್ದ ಅನೇಕ ಭಾರತೀಯ ಗೋತಳಿಗಳ ಸಂರಕ್ಷಣೆಯ ದೃಷ್ಟಿಯಿಂದ ಶ್ರೀಗುರುಗಳು ಕೈಗೊಂಡ ವ್ಯವಸ್ಥಿತವಾದ ಯೋಜನೆಯು ಇಂದು ಅನೇಕ ಮಂದಿಗೆ ಭಾರತೀಯ ತಳಿಯ ಹಸುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ […]

Continue Reading

ಬೆಳೆಯುವ ಸಿರಿ ಮೊಳಕೆಯಲ್ಲಿ

  ಕಲೆಯು ಭಾವನೆಗಳ ಪ್ರತಿಬಿಂಬ. ಎಳೆವಯಸ್ಸಿನಲ್ಲಿಯೇ ಕಲೆ ಸಂಸ್ಕೃತಿಯೆಡೆಗೆ ಇರುವ ಒಲುಮೆ ಮನುಜನನ್ನು ಎತ್ತರಕ್ಕೆ ಏರಿಸುವಲ್ಲಿ ಏಣಿಯಂತೆ ಸಹಕಾರಿಯಾಗುತ್ತದೆ. ತನ್ನ ಎಳವೆಯಲ್ಲಿ ಮನಸ್ಸಿಗೆ ಮುದ ನೀಡುವ ಕಲೆಯೆಡೆಗೆ ಅಭಿರುಚಿ ಬೆಳೆಸಿಕೊಳ್ಳುತ್ತಿರುವ ಪುಟ್ಟ ಪ್ರತಿಭೆ ಅಭಿರಾಮ್.ಎಸ್.ಭಟ್. ಈತ ಬೆಂಗಳೂರು ನಿವಾಸಿಗಳಾದ ಶ್ರೀಯುತ ಸುರೇಶ್ ಕುಕ್ಕಾಜೆ ಹಾಗೂ ಶ್ರೀಮತಿ ಗೀತಾಂಜಲಿ ದಂಪತಿಯ ಸುಪುತ್ರ. ಪ್ರಸ್ತುತ ಪೂರ್ಣಪ್ರಜ್ಞಶಾಲೆಯಲ್ಲಿ ಎರಡನೇ ತರಗತಿಯಂದ ವೈಶಿಷ್ಟ್ಯ ಶ್ರೇಣಿಯೊಂದಿಗೆ ಉತ್ತೀರ್ಣನಾಗಿರುತ್ತಾನೆ. ಬಾಲ್ಯದಿಂದಲೇ ತನ್ನ ತಾಯಿಯಿಂದ ಕಥೆಗಳನ್ನು ಕೇಳುತ್ತಾ ಚಿಗುರುತ್ತಿರುವ ಅಭಿರಾಮ ತನ್ನೆದುರಿಗೆ ಇರುವವರು ಮಂತ್ರಮುಗ್ಧರಾಗುವ ಹಾಗೆ ಕಥೆ […]

Continue Reading

” ನಂಬಿ ಕೆಟ್ಟವರಿಲ್ಲವೋ ಶ್ರೀಚರಣಗಳ….” : ಇಂದಿರಾ ಶ್ಯಾನುಬಾಗ್ , ಶಿರಸಿ

  ” ಬದುಕಿನ ಹಾದಿಯಲ್ಲಿ ಕತ್ತಲು ಕವಿದಂತೆ ಅತಿ ಕಠಿಣ ಕಷ್ಟ ಬಂದಾಗಲೂ ಶ್ರೀಚರಣಗಳ ಮೇಲಿನ ಭರವಸೆ ಕಳೆದುಕೊಳ್ಳ ಬೇಡಿ, ವಿಧಿ ಲಿಖಿತವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಶ್ರೀ ಗುರುಚರಣಗಳನ್ನು ಆಶ್ರಯಿಸಿದವರಿಗೆ ಮನಸ್ಸಿನ ಮಾಯೆಯ ಪೊರೆಯನ್ನು ಸರಿಸಿ ,ಭಗವಂತನ ದಿವ್ಯಾನುಗ್ರಹ ಪಡೆಯುವ ಹಾದಿ ತೋರುವ ಸದ್ಗುರುಗಳು ಸಾಂತ್ವನದ ಭರವಸೆಯನ್ನು ಅನುಗ್ರಹಿಸುತ್ತಾರೆ. ಇದು ನಮ್ಮ ಬದುಕಿನ ಅನುಭವದ ನುಡಿಗಳು ” ಎಂದು ಶರಣಾಗತ ಭಾವದಿಂದ ‌ನುಡಿಯುವವರು ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ಲಕ್ಷ್ಮಣ ಶ್ಯಾನುಬಾಗ್ ಅವರ ಪತ್ನಿ […]

Continue Reading

ಚಿತ್ರ ಜೀವಂತಿಕೆಯ ಕಲಾವಿದ ಯುವ ಉದ್ಯಮಿ ಪ್ರದೀಪ

  ಈತನ ಕೈಗಳಲ್ಲಿ ಮೂಡಿದ ಚಿತ್ರಗಳು ನೋಡುಗರ ಚಿತ್ತದಲ್ಲಿ ಬೆರಗು ಮೂಡಿಸುತ್ತದೆ. ಯಾವ ಚಿತ್ರಕಲಾ ಶಾಲೆಯಲ್ಲಿಯೂ ಅಭ್ಯಾಸ ಮಾಡಿಲ್ಲವಾದರೂ ನುರಿತ ಕಲಾವಿದನಂತೆ ಚಿತ್ರಗಳಲ್ಲಿ ಜೀವಂತಿಕೆ ಮೂಡಿಸುವ ಯುವ ಕಲಾವಿದ ಇನ್ನೊಂದೆಡೆಯಲ್ಲಿ ಯಶಸ್ವೀ ಉದ್ಯಮಿಯೂ ಹೌದು, ವಿದ್ಯಾರ್ಥಿಯೂ ಹೌದು. ಅವರೇ ಕಾಸರಗೋಡು ಜಿಲ್ಲೆಯ ಗೋಪಾಲಕೃಷ್ಣ ಭಟ್ ಮತ್ತು ಸವಿತಲಕ್ಷ್ಮೀ ಅವರ ಸುಪುತ್ರ ಪ್ರದೀಪ ಎಂ.ಜಿ. *ಸೌರಶಕ್ತಿಯನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಉದ್ಯಮಿ* ಎಸ್. ಎಸ್. ಎಲ್.ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ತಮಗೆ ಆಸಕ್ತಿ ಇರುವ ಶಿಕ್ಷಣ ಕ್ಷೇತ್ರವಾದ ಎಲೆಕ್ಟ್ರಾನಿಕ್ಸ್ […]

Continue Reading

ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಶೈಲಾ ಶ್ರೀಕಾಂತ್ ಹೆಗಡೆ

” ಮೂವತ್ತಮೂರು ಕೋಟಿ ದೇವತೆಗಳ ನಿವಾಸ ಸ್ಥಾನವಾದ ಗೋಮಾತೆಯ ಒಡಲು ಪುಣ್ಯದ ಕಡಲು. ನಮ್ಮ ತಾಯಿಯ ರಕ್ಷಣೆಯನ್ನು ಯಾವ ರೀತಿಯಲ್ಲಿ ಮಾಡುತ್ತೇವೆಯೋ ಅದೇ ರೀತಿಯಲ್ಲಿ ಗೋಮಾತೆಯ ಸಂರಕ್ಷಣೆಯ ಜವಾಬ್ದಾರಿಯನ್ನು ನಾವು ವಹಿಸಬೇಕು, ಆಗಲೇ ಸಮಾಜದಲ್ಲಿ ಗೋಸಂರಕ್ಷಣಾ ಯೋಜನೆಗಳು ಸಫಲವಾಗಬಹುದು. ಇದಕ್ಕಾಗಿ ನಮ್ಮ ಸಂಸ್ಥಾನದವರ ಮಾರ್ಗದರ್ಶನದಂತೆ ಮುಂದೆ ಸಾಗಿದರೆ ಮುಂದೊಂದು ದಿನ ಗೋಮಾತೆ ವಿಶ್ವ ವಂದ್ಯೆಯಾಗಬಹುದು ” ಗೋವು ಹಾಗೂ ತಮ್ಮ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿಸುತ್ತಾ ತಮ್ಮ ಮನದ ಅನಿಸಿಕೆಗಳನ್ನು ಈ ರೀತಿಯಾಗಿ ಬಿಚ್ಚಿಟ್ಟವರು ಬೆಂಗಳೂರು […]

Continue Reading

ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈಯುತ್ತಿರುವ ಶ್ರೀರಂಜಿನಿ.

  ದಿನೇದಿನೇ ಸಂಗೀತದ ಶಿಖರ ಸಾಧನೆಯ ಮೆಟ್ಟಿಲೇರುತ್ತಿರುವ ಶ್ರೀರಂಜಿನಿ , ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚಿದಾನಂದ ಮತ್ತು ಗಾಯತ್ರಿ ಹೆಚ್.ಸಿ ಅವರ ಸುಪುತ್ರಿ . ಬಾಲ್ಯದಿಂದಲೇ ಸಂಗೀತದ ಕಡೆ ತನ್ನ ಚಿತ್ತವನಿತ್ತು ಅಜ್ಜಿ, ತಂದೆ ಮತ್ತು ತಾಯಿಯಿಂದ ಸಂಗೀತ ಸಂಸ್ಕಾರವನ್ನು ಪಡೆದು ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಶಾಲಾ ಮಟ್ಟದ ಹಾಡು, ನೃತ್ಯ, ಅಭಿನಯ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ. ನಂತರ ವಿದುಷಿ ವಸುಧಾ ಶರ್ಮ ಸಾಗರ ಇವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ […]

Continue Reading

ದೇಶೀ ಗೋ ಉತ್ಪನ್ನಗಳು ಔಷಧೀಯ ಗುಣಗಳ ಆಗರ : ಡಾ. ಅಮೃತಾ ಪ್ರಸಾದ್

  ಗೋವು ಎಂದರೆ ಮಮತೆಯ ಇನ್ನೊಂದು ರೂಪ,ಗೋಮಾತೆಯ ಹಾಲು ಅದು ಅಮೃತ ಸಮಾನ, ಗೋಮೂತ್ರವೂ ಹಲವು ವ್ಯಾಧಿ ನಿವಾರಕ ಎಂಬುದು ನಮಗೆಲ್ಲ ತಿಳಿದಿದೆ, ಗೋರಕ್ಷಣೆಗಾಗಿ ದೀಕ್ಷಾಬದ್ಧರಾದರೆ ಮಾತ್ರ ದೇಶೀ ಗೋವುಗಳ ರಕ್ಷಣೆ ಸಾಧ್ಯ. ಇದಕ್ಕಾಗಿ ನಮ್ಮ‌ ಶ್ರೀಗಳು ತೋರಿದ ಹಾದಿಯಲ್ಲಿ ಮುಂದುವರಿಯುವ ಅಭಿಲಾಷೆ ನನ್ನದು ,ಹಳ್ಳಿಗಳಂತೆ ನಗರಗಳಲ್ಲಿ ಪ್ರತೀ ಮನೆಯಲ್ಲೂ ಹಸು ಸಾಕಣೆ ಅಸಾಧ್ಯ. ಆದರೂ ಗೋಮಾತೆಯ ಸೇವೆ ಮಾಡಲು ಶ್ರೀ ಸಂಸ್ಥಾನದವರ ಮಾರ್ಗದರ್ಶನದಂತೆ ಮುನ್ನಡೆಯುತ್ತಿದ್ದೇನೆ ” ಶ್ರೀಗುರುಗಳ ತತ್ವಗಳ ಮೇಲೆ ಅಪಾರ ನಂಬಿಕೆಯಿಟ್ಟಿರುವ, ಜೀವನದ ಸುಖದುಃಖಗಳಲ್ಲಿ […]

Continue Reading

ಅಪ್ಪಟ್ಟ ಗೋಪ್ರೇಮಿ ಶ್ರೀರಕ್ಷಾ ಎಮ್

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗಣೇಶ್ ಪ್ರಸಾದ್ ಎಮ್ ಮತ್ತು ವಿಜಯಲಕ್ಷ್ಮೀ ದಂಪತಿಯ ಸುಪುತ್ರಿ ಶ್ರೀರಕ್ಷಾ ಎಮ್ ಅಪ್ಪಟ್ಟ ಗೋಪ್ರೇಮಿ. 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಪ್ರತಿಭಾ ಕಾರಾಂಜಿಯ ರಂಗೋಲಿ ಸ್ಪರ್ಧೆಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಶ್ರೀರಕ್ಷಾ 6 ನೇ ತರಗತಿಯಲ್ಲಿ BYJUS ನವರು ಏರ್ಪಡಿಸಿದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಹಾಗೇ ಅದೇ ವರ್ಷ LIDO LEARNING ನವರು ಆಯೋಜಿಸಿದಂತಹ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆ ಹೊಂದು SMILE FOUNDATION ಅವರಿಂದ certificate […]

Continue Reading

” ಗೋಸೇವೆಯಲ್ಲಿ ಸಮರ್ಪಣಾ ಭಾವದ ಸಾರ್ಥಕತೆ ” : ವಸುಂಧರಾ ಶರ್ಮಾ , ಬೆಂಗಳೂರು

  ” ಗೋವುಗಳಿಂದ ಮಾನವನ ಜೀವನಕ್ಕೆ ದೊರಕುವ ಪ್ರಯೋಜನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಬದುಕಿನಲ್ಲಿ ಮಾತೆಯ ನಂತರದ ಸ್ಥಾನ ಗೋಮಾತೆಗೆ ಸಲ್ಲಬೇಕು, ವ್ಯಾವಹಾರಿಕ ದೃಷ್ಟಿಯಿಂದ ಗೋಮಾತೆಯ ಸೇವೆ ಮಾಡಬಾರದು, ಅದರಲ್ಲಿ ಸಮರ್ಪಣಾ ಭಾವ ಮೂಡಬೇಕು, ಆಗಲೇ ಬದುಕಿನಲ್ಲಿ ಸಾರ್ಥಕ ಭಾವನೆ ಮೂಡಲು ಸಾಧ್ಯ ” ಎನ್ನುವವರು ಬೆಂಗಳೂರಿನ ಕೃಷ್ಣರಾಜ ವಲಯದ ವಸುಂಧರಾ ಶರ್ಮ. ಸಿದ್ಧಾಪುರದ ಸಸಿಗುಳಿಯ ಗಣೇಶ ಹೆಗಡೆ, ಸಾವಿತ್ರಿ ಹೆಗಡೆಯವರ ಪುತ್ರಿಯಾದ ಇವರು ಮಾಲೂರು ಗೋಶಾಲೆಯ ನಿರ್ವಹಣಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅರವಿಂದ ಶರ್ಮಾ […]

Continue Reading

ಮಲೆನಾಡಿನ ರಾಷ್ಟೀಯ ಚೆಸ್ ಆಟಗಾರ್ತಿ ಮನಸ್ವಿನಿ ಆರ್

ಚೆಸ್ ನಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಸಾಗರದ ಮನಸ್ವಿನಿ ಮಲೆನಾಡಿನ ಶಿವಮೊಗ್ಗ ಜೆಲ್ಲೆಯ ಸಾಗರ ತಾಲೂಕಿನ ರಾಘವೇಂದ್ರ ಎಮ್. ಹೆಗಡೆ ಮತ್ತು ಪ್ರಮೋದ ಆರ್ ದಂಪತಿಯ ಸುಪುತ್ರಿ. ತನ್ನ ಏಳನೇ ತರಗತಿಯಲ್ಲಿ ಚೆಸ್ ಆಟಕ್ಕೆ ಪಾದಾರ್ಪಣೆ ಮಾಡಿದ ಇವರು ಹಿಂದುರುಗಿ ನೋಡದೆ ಯಶಸ್ಸಿನ ಹಾದಿಯತ್ತ ಸಾಗುತ್ತಿದ್ದಾರೆ ಎನ್ನುವುದು ಸಂತಸದ ವಿಷಯ. ಮೊದಲು ಚೆಸ್ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ಮನಸ್ವಿನಿ ನಂತರ ಸತತವಾಗಿ 3 […]

Continue Reading

ಸಂಗೀತ ಮತ್ತು ಯಕ್ಷಗಾನ – ಸಾಧನೆಯ ಹಾದಿಯಲ್ಲಿ ಯುವ ಕಲಾವಿದೆ ನೇಹಾ

  ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಧಾರೇಶ್ವರದ ಸುರೇಶ ಜೆ ಭಟ್ಟ ಮತ್ತು ಮಮತಾ ಸುರೇಶ ಭಟ್ಟರವರ ಸುಪುತ್ರಿ ನೇಹಾ ಸುರೇಶ ಭಟ್ಟ ಗಾಯನ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ. ವಿವಿಧ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ನೇಹಾ ಭಟ್ಟ ಒಬ್ಬ ಅಪ್ಪಟ ಪ್ರತಿಭಾವಂತೆ. ಎಳೆಯ ವಯಸ್ಸಿನಿಂದಲೇ ಅಂದರೆ 2ನೇ ತರಗತಿಯಿಂದ 7ನೇ ತರಗತಿಯವರಗೆ ನಿರಂತರವಾಗಿ ಪ್ರತಿವರ್ಷವೂ ಪ್ರತಿಭಾ ಕಾರಂಜಿಯಲ್ಲಿ ಅಭಿನಯಗೀತೆ, ಕನ್ನಡ ಕಂಠಪಾಠ, ಲಘುಸಂಗೀತ, ಜಾನಪದ ನೃತ್ಯ, ದೇಶಭಕ್ತಿ ಗೀತೆ ಹೀಗೆ ವಿವಿಧ […]

Continue Reading

ಶ್ರೀಮಠದ ಸಂಪರ್ಕಕ್ಕೆ ಸೇತುವೆಯಾಗಿದ್ದು ಸೋದರ: ಜಯಲಕ್ಷ್ಮಿ ಕುಳಾಯಿ

  ” ಶ್ರೀಮಠದ ಬಗ್ಗೆ, ಶ್ರೀಗುರುಗಳ ಬಗ್ಗೆ ಎಳವೆಯಿಂದಲೇ ಪೂಜ್ಯ ಭಾವನೆಯಿತ್ತು. ಆದರೆ ಶ್ರೀಮಠಕ್ಕೆ ಹೋಗುವ ಅವಕಾಶ ದೊರಕಿದ್ದು ಅಣ್ಣ ಅಂಬಾ ಪ್ರಸಾದ ಪಾತಾಳ ಅವರ ಮೂಲಕ. ಅಲ್ಲಿ ಹೋದ ಮೇಲೆ ಮನಸ್ಸು ಸಂಪೂರ್ಣವಾಗಿ ಶ್ರೀಗುರು ಚರಣಗಳಿಗೆ ಶರಣಾಯಿತು. ಅಂದಿನಿಂದಲೇ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ” ಈ ಮಾತುಗಳು ಉಪ್ಪಿನಂಗಡಿ ಮಂಡಲದ, ಉರುವಾಲು ವಲಯದ ಮೈರ ಶ್ಯಾಮ ಭಟ್ ಅವರ ಪತ್ನಿ ಜಯಲಕ್ಷ್ಮಿ ಕುಳಾಯಿ ಅವರದ್ದು. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಪಾತಾಳ ವೆಂಕಟ್ರಮಣ ಭಟ್ ಹಾಗೂ ಪರಮೇಶ್ವರಿ […]

Continue Reading

ನೊಂದ ಬದುಕಿಗೆ ಭರವಸೆಯ ಚೇತನ ದೊರಕಿದ್ದು ಶ್ರೀ ಗುರು ಸೇವೆಯಿಂದ : ಭಾರತೀ ಕೋಟೆ

” ಬದುಕಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಿ, ನೊಂದ ಬದುಕಿಗೆ ಭರವಸೆಯ ಸಾಂತ್ವನ ನೀಡಿದವರು ಶ್ರಿಗುರುಗಳು.ಜೀವನದ ಕಷ್ಟ ಪರಂಪರೆಯ ಅಂಧಕಾರ ತೊಲಗಿ ಗುರುಕೃಪೆಯೆಂಬ ಜ್ಞಾನ ದೀವಿಗೆಯ ಬೆಳಕಿನಿಂದ ನಮ್ಮ ಬದುಕು ಹಸನಾಗಿದೆ. ಬದುಕು ಸದಾ ಶ್ರೀಗುರು ಸೇವೆ ಹಾಗೂ ಗೋಮಾತೆಯ ಸೇವೆಗಾಗಿ ಮುಡಿಪಾಗಿರಲಿ ಎಂಬುದೇ ನಮ್ಮ ನಿತ್ಯ ಪ್ರಾರ್ಥನೆ ” ಎಂದು ಶ್ರೀಗುರು ಕೃಪಾ ಕಟಾಕ್ಷದ ಬಗ್ಗೆ ಹೃದಯ ತುಂಬಿ ನುಡಿಯುವವರು ಉಪ್ಪಿನಂಗಡಿ ಮಂಡಲದ, ಪಂಜ ವಲಯದ ಚರಣ ಸನ್ನಿಧಿ ಮನೆಯ ಭಾರತೀ ಕೋಟೆ ಅವರು. ಎರಡು […]

Continue Reading

ಬಹುಮುಖ ಪ್ರತಿಭೆ ದೇವಿಕಾ

  ಯಕ್ಷಗಾನ, ಭರತನಾಟ್ಯ, ಸಂಗೀತ,ಓದು ಒಂದಾ ಎರಡಾ ಹೆಚ್ಚು ಕಡಿಮೆ ಎಲ್ಲಾ ಪ್ರತಿಭೆಗಳನ್ನು ತನ್ನದಾಗಿಸಿಕೊಂಡ ಬಹುಮುಖ ಪ್ರತಿಭೆ ದೇವಿಕಾಳ ಪರಿಚಯ ಇದೋ ನಿಮ್ಮ ಮುಂದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಸಮೀಪದ ಕುರಿಯಾಜೆ ಉದಯಶಂಕರ್ ಭಟ್ ಮತ್ತು ವಸಂತ ಲಕ್ಷ್ಮಿ ಯವರ ಸುಪುತ್ರಿ ದೇವಿಕಾ ಕುರಿಯಾಜೆ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ೨೦೧೮-೧೯ನೇ ಸಾಲಿನ ಇಂಗ್ಲೀಷ್ ಕಿರುನಾಟಕದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದಾರೆ. ಇವರು ಹತ್ತನೇ ತರಗತಿ […]

Continue Reading

” ಶ್ರೀಗುರು ಸನ್ನಿಧಿಯ ಸಂಪರ್ಕದಿಂದ ಗೋಮಾತೆಯ ಸೇವೆ ಸಾಧ್ಯವಾಯಿತು: ಹೇಮಾ ಭಟ್, ಬೆಂಗಳೂರು

  ” ಮಾತೃ ಸ್ವರೂಪಿಯಾದ ಗೋಮಾತೆಯ ಒಡನಾಟ ಬಾಲ್ಯದಿಂದಲೇ ದೊರಕಿತ್ತು. ತವರುಮನೆಯಲ್ಲಿ ಈಗಲೂ ಹಸು ಸಾಕಣೆ ಇದೆ.ನಾವು ನಗರ ನಿವಾಸಿಗಳಾಗಿರುವುದರಿಂದ ಹಸು ಸಾಕಣೆ ಸುಲಭವಲ್ಲ. ಆದರೂ ಶ್ರೀಗುರುಗಳ ಪರಮಾನುಗ್ರಹದಿಂದ ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆ ಮಾಡುತ್ತಿರುವ ನೆಮ್ಮದಿ ಮನಸ್ಸಿಗೆ ದೊರಕುತ್ತಿದೆ ” ಎಂಬ ಸಾರ್ಥಕ ಭಾವದ ನುಡಿಗಳು ಬೆಂಗಳೂರಿನ ಹೇಮಾ ಭಟ್ ಅವರದ್ದು.   ಮೂಲತಃ ಕಾಸರಗೋಡಿನ ಪೆಲತ್ತಡ್ಕದವರಾದ ಇವರು ಪ್ರಸ್ತುತ ಬೆಂಗಳೂರು ಉತ್ತರ ಮಂಡಲದ ಸಂಜಯ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.   ಕಾಸರಗೋಡಿನ […]

Continue Reading

ರೋಲರ್ ಸ್ಕೇಟಿಂಗ್ ಹಾಕಿಯಲ್ಲಿ ಹತ್ತನೇ ವಯಸ್ಸಿನಲ್ಲೇ ಚಿನ್ನದ ಪದಕ ಗೆದ್ದ-ನಮನ್

  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೆಸರಾಂತ ಯಕ್ಷಗಾನ ಮನೆತನದಲ್ಲಿ ಜನಿಸಿದ ನಮನ್ ಯಕ್ಷಗಾನ ಕಲಾವಿದ ಹಾಗೂ ಕಾರ್ಯಕ್ರಮ ನಿರೂಪಕರಾದ ಶಾಂತರಾಮ ಕೊಂಡದಕುಳಿ ಮತ್ತು ಸಂಧ್ಯಾರವರ ಸುಪುತ್ರ. ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ನಮನ್ ಯಲ್ಲಾಪುರದ ಪ್ರಸಿದ್ಧ ಸಂಕಲ್ಪ ಉತ್ಸವದಲ್ಲಿ ತನ್ನ ೫ನೇ ವಯಸ್ಸಿನಲ್ಲಿ ಅಜ್ಜಿಯ ಪಾತ್ರ ಮಾಡಿ ಅಲ್ಲಿ ನೆರೆದಿರುವಂತಹ ಅತಿಥಿ ಮತ್ತು ಪ್ರೇಕ್ಷಕರಿಂದ ಪ್ರಶಂಸೆಯನ್ನು ಪಡೆದಿದ್ದಾರೆ. ತಾಲೂಕು ಮಟ್ಟದ ರಾಮಾಯಣ ಮತ್ತು ಮಹಾಭಾರತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತನಾಗಿ ಜಿಲ್ಲಾ ಮಟ್ಟದ ಕಥೆ ಸ್ಪರ್ಧೆಯಲ್ಲಿ ಭಾಗವಹಿಸಿ […]

Continue Reading

ಭಾರತೀಯರ ಬದುಕಿನ ಉಸಿರು ಗೋಮಾತೆ: ಜಯಾ ಶ್ಯಾನುಬಾಗ್

  ” ಭಾರತೀಯರ ಬದುಕಿಗೆ ಗೋಮಾತೆಯ ಕೊಡುಗೆ ಅಪಾರ. ಹಸುವಿನ ಹಾಲು ಹಾಕದೆ ಒಂದು ಲೋಟ ಚಹಾವನ್ನು ಮಾಡಲಾರೆವು.‌ ಇನ್ನು ಕೃಷಿ ಕಾರ್ಯಗಳಲ್ಲಿ ಗೋವಿನ ಉತ್ಪನ್ನಗಳನ್ನು ಯಾವ ರೀತಿಯಲ್ಲಿ ಬಳಸುತ್ತೇವೆ ಎಂಬುದು ಎಲ್ಲರಿಗೂ ಗೊತ್ತು. ಅಂತಹ ಒಂದು ಗೋಮಾತೆಯ ಸಂರಕ್ಷಣೆಯ ಹೊಣೆಯನ್ನು ಹೊತ್ತು ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ ಎನ್ನಲು ಖುಷಿ ಎನಿಸುತ್ತದೆ. ಇದು ಮಾತೆಯರಿಗೆ ಗೋಸೇವೆ, ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಶ್ರೀಗುರುಗಳು ನೀಡಿದ ಸೌಭಾಗ್ಯ ಎಂದೇ ಭಾವಿಸಿಕೊಂಡಿದ್ದೇನೆ ” ಎಂದು ಗೋಮಾತೆಯ ಅಮೂಲ್ಯ ಕೊಡುಗೆಗಳ […]

Continue Reading

ಸರ್ವರಂಗದಲ್ಲಿಯೂ ಸಾಮರ್ಥ್ಯ ಹೊಂದಿರುವ ಹೇಮಸ್ವಾತಿ

  ಸಂಗೀತ, ಭರತನಾಟ್ಯ, ಶಿಕ್ಷಣ,ಭಾಗವತಿಕೆ, ಯಕ್ಷಗಾನ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿರುವ ವಿಶೇಷ ಪ್ರತಿಭೆ ಹೇಮಸ್ವಾತಿ ಕುರಿಯಾಜೆ ಈ ವಾರದ ಅಂಕುರ ಸಾಧಕಿ. ಉದಯಶಂಕರ್ ಭಟ್ ಮತ್ತು ವಸಂತ ಲಕ್ಷ್ಮೀಯವರ ಸುಪುತ್ರಿ ಹೇಮಸ್ವಾತಿ ಹಲವು ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈಯ್ಯುತ್ತಿದ್ದಾರೆ..ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ೨೦೧೫ರ ವಿಜ್ಞಾನ ಮಾದರಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಇವರು ೨೦೧೭-೧೮ರಲ್ಲಿ ಒಂಬತ್ತನೇ ತರಗತಿಯಿರುವಾಗ ರಾಜ್ಯ ಮಟ್ಟದ ಇಂಗ್ಲೀಷ್ ಕಿರುನಾಟಕದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹತ್ತನೇ ತರಗತಿ ಯಲ್ಲಿ ಜಿಲ್ಲಾ ಮಟ್ಟದ ಏಕವ್ಯಕ್ತಿ ಯಕ್ಷಗಾನದಲ್ಲಿ ಪ್ರಥಮ […]

Continue Reading

” ಶ್ರೀಮಠವೆಂದರೆ ಮನಸ್ಸಿಗೆ ಆಪ್ತವೆನಿಸುವ ತಾಣ ” : ವನಿತಾ ಶ್ರೀಧರ ಹೆಗಡೆ ಮುಂಬೈ

  ” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿದೆ, ತವರುಮನೆಯವರ ಜೊತೆಗೆ ಹಲವಾರು ಬಾರಿ ಗೋಕರ್ಣಕ್ಕೂ ಹೋಗಿರುವೆ, ಹಾಗಾಗಿ ಶ್ರೀಮಠ, ಶ್ರೀಗುರುಗಳು ಎಂದರೆ ಮನಸ್ಸಿಗೆ ಆಪ್ತವಾದ ಭಾವನೆ ಬಂದುಬಿಟ್ಟಿದೆ ” ಎಂಬ ಮಾತುಗಳು ಕುಮಟಾದ ಚಿತ್ರಗಿ ಮೂಲದ ಪ್ರಸ್ತುತ ಮುಂಬೈ ನಿವಾಸಿಗಳಾಗಿರುವ ವನಿತಾ ಶ್ರೀಧರ ಹೆಗಡೆ ಅವರದ್ದು. ಕುಮಟಾ ಸಮೀಪದ ಬರಗದ್ದೆ ಸುಬ್ರಾಯ ಹೆಗಡೆ , ಜಾಹ್ನವಿ ಸುಬ್ರಾಯ ಹೆಗಡೆಯವರ ಪುತ್ರಿಯಾದ ವನಿತಾ ಶ್ರೀಧರ ಹೆಗಡೆಯವರಿಗೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪತಿ ಶ್ರೀಧರ ಹೆಗಡೆಯವರೇ ಸ್ಪೂರ್ತಿಯಂತೆ. ” ಶ್ರೀ […]

Continue Reading

ಕುಂಚದಲ್ಲಿ ಅರಳುತ್ತಿದೆ ಪುಟ್ಟ ಹುಡುಗಿಯ ಗೋಪ್ರೇಮ!

  ಚಿತ್ರಕಲೆಯಲ್ಲಿ ತನ್ನದೇ ಆದ ಛಾಪು ಮೂಡಿಸುವತ್ತ ಹೆಜ್ಜೆ ಇಡುತ್ತಿರುವ ಪ್ರತಿಭೆ ಶ್ರೀಲಕ್ಷ್ಮೀ. ಈಕೆ ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಚಂದ್ರಗಿರಿಯ ಗೋಪಾಲಕೃಷ್ಣ ಭಟ್ ಮತ್ತು ಸೌಮ್ಯಪ್ರಭಾ ರವರ ಸುಪುತ್ರಿ ಕಲಾ ಪ್ರಕಾರಗಳಲ್ಲಿ ಚಿತ್ರಕಲೆಯು ಇತರ ಪ್ರದರ್ಶನ ಕಲೆಗಳಿಗಿಂತ ತುಸು ಭಿನ್ನವಾದುದು. ಕಲೆಯೆಂಬುದು ಸುಲಭವಾಗಿ ಎಲ್ಲರಿಗೂ ಒದಗುವಂತದಲ್ಲ. ಅಂತಹ ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವಂತಹ ಇದೀಗ ಹತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲ ಪ್ರತಿಭೆ ಶ್ರೀಲಕ್ಷ್ಮೀ. _ಲಾಕ್ಡೌನ್ ಸಮಯದ ಸದುಪಯೋಗ_ ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಶ್ರೀಲಕ್ಷ್ಮೀ ಪ್ರತಿ […]

Continue Reading