” ಎಳವೆಯಿಂದಲೇ ಶ್ರೀಮಠದ ಸಂಪರ್ಕ ಮಕ್ಕಳಿಗೆ ದೊರಕಬೇಕು ” : ಸುಮನಾ ನಂದೋಡಿ

” ತವರುಮನೆಯವರು ಹಿರಿಯ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇದ್ದ ಕಾರಣ ನನಗೂ ಶ್ರೀಮಠ, ಶ್ರೀಗುರುಗಳು ಎಂದರೆ ಬಾಲ್ಯದಿಂದಲೇ ಬಹಳ ಶ್ರದ್ದೆ ಭಕ್ತಿ. ಇದು ನಮ್ಮ ಮಕ್ಕಳವರೆಗೂ ಮುಂದುವರಿದಿದೆ ಎಂಬುದೇ ಅತ್ಯಂತ ನೆಮ್ಮದಿ ತರುವ ವಿಚಾರ ” ಎಂದು ಹರ್ಷದಿಂದ ನುಡಿಯುತ್ತಿರುವವರು ಮೂಲತಃ ಸಾಗರದ ಸಮೀಪದ ನಂದೋಡಿಯವರಾದ ಪ್ರಸ್ತುತ ಮಂಗಳೂರು ನಗರದಲ್ಲಿ ವಾಸಿಸುತ್ತಿರುವ ಸುಮನಾ ನಂದೋಡಿಯವರು. ಸಾಗರದ ಹುಳೇಗಲ್ ನ ಚೆನ್ನಕೇಶವ ಭಟ್ ಹಾಗೂ ಸರೋಜಿನಿ ದಂಪತಿಗಳ ಪುತ್ರಿಯಾದ ಇವರು ಮಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಕೇಶವ ನಂದೋಡಿ ಅವರ […]

Continue Reading

ಬಹುಮುಖ ಪ್ರತಿಭೆ ಪದ್ಮಿನಿ ಸಿ.ಆರ್.

ಸಂಗೀತ, ಭರತನಾಟ್ಯ, ಚಿತ್ರಕಲೆ, ಶಿಕ್ಷಣ… ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿರುವ ವಿಶಿಷ್ಟ ಪ್ರತಿಭೆ ಪದ್ಮಿನಿ ಸಿ.ಆರ್.ಬಾಳಿಲ ಸಮೀಪದ ನಿಡ್ಮಾರಿನ ಸಿ.ವಿ.ರಾಜಾರಾಮ ಮತ್ತು ರತ್ನಕುಮಾರಿ ದಂಪತಿಯ ಪುತ್ರಿ ಪದ್ಮಿನಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡುತ್ತಾ ಗಮನಸೆಳೆದಿದ್ದಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ 98% ಅಂಕ ಗಳಿಸಿರುವ ಈಕೆ, ವಿ.ಶಂಕರಿಮೂರ್ತಿ ಬಾಳಿಲ ಅವರ ಶಿಷ್ಯೆ. ಶಾಸ್ತ್ರೀಯ ಸಂಗೀತದ ಜೊತೆಗೆ ಗಾನಸಿರಿ ಡಾ.ಕಿರಣಕುಮಾರ್ ಮತ್ತು ಬಾಬಣ್ಣ ಪುತ್ತೂರು ಇವರಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾಳೆ.ಭರತನಾಟ್ಯದಲ್ಲಿಯೂ ಆಸಕ್ತಿ ಹೊಂದಿರುವ ಪದ್ಮಿನಿ, […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೫

ಅವಿಚ್ಛಿನ್ನ ಗುರುಪರಂಪರೆಯನ್ನು ಉಳಿಸಿ ಕಲಿಯುಗದಂತಹ ಕ್ರೂರ ಕಾಲದಲ್ಲಿಯೂ ಶಿಷ್ಟರ ರಕ್ಷಣೆಗಾಗಿ ಮತ್ತು ದುಷ್ಟರನ್ನೂ ಶಿಷ್ಟಾಚಾರದಲ್ಲಿ ತೊಡಗಿಸಲು ಸದಾ ದಯೆತೋರುತ್ತಾ ಭುವಿಯಲ್ಲಿ ಗುರುವೆಂಬ ಸ್ಥಾನದಲ್ಲಿ ಮೂಡಿಬರುತ್ತಿರುವ ಶ್ರೀಮನ್ನಾರಾಯಣ, ೨೭ನೇ ಗುರುಮೂರ್ತಿಯಾಗಿ ಶ್ರೀ  ಶ್ರೀಮದ್ರಘೂತ್ತಮ ಭಾರತೀ(೩) ಎಂಬ ಶುಭನಾಮದಿಂದ ತೋರ್ಪಟ್ಟ. ಹಾಗೆ ಅಂದಿನಿಂದಲೂ ತೋರ್ಪಡುತ್ತಾ ಬಂದಿರುವ ಶ್ರೀಮನ್ನಾರಾಯಣ ಪ್ರತಿರೂಪಿ ಗುರು ಹೇಗಿರುತ್ತಾನೆಂದು ಶ್ರೀಮದಾಚಾರ್ಯ ಶಂಕರಭಗವತ್ಪಾದರ ಮಠಾಮ್ನಾಯದಲ್ಲಿ ಉಲ್ಲೇಖಿಸಿದೆ. ಶುಚಿರ್ಜಿತೇಂದ್ರಿಯೋ ವೇದವೇದಾಂಗ ವಿಶಾರದಃ | ಯೋಗಜ್ಞಃ ಸರ್ವತಂತ್ರಾಣಾಮಸ್ಮದಾಸ್ಥಾನಮಾಪ್ನುಯಾತ್ || ಇಂತೆಯೇ ಶ್ರೀ ಶ್ರೀಮದ್ರಘೂತ್ತಮ ಭಾರತೀ ಮಹಾಸ್ವಾಮಿಗಳು (೩) ಸರ್ವದಾ ಶುಚಿಭೂತರೂ, ಇಂದ್ರಿಯ […]

Continue Reading

” ‌‌ಶ್ರೀಮಠದ ಸೇವೆಯಿಂದ ರಾಮಾನುಗ್ರಹ ” : ಉಷಾ ಕುಮಾರಿ ಚೇರಾಲು

” ಗಿರಿನಗರದ ಶ್ರೀರಾಮಾಶ್ರಮಕ್ಕೆ ಹೋಗಿದ್ದಾಗ ಶ್ರೀ ಗುರುಗಳ ಆಶೀರ್ವಾದದಿಂದ ಪ್ರೇರಣೆಗೊಂಡು ಶ್ರೀಮಠದ ಸೇವೆಯಲ್ಲಿ ಭಾಗಿಯಾಗಬೇಕು ಎಂಬ ಹಂಬಲ ಮೂಡಿತು. ಸುಮಾ ರಮೇಶ್ ಹಾಗೂ ಲಕ್ಷ್ಮೀ ಇಳಂತಿಲ ಅವರ ಪ್ರೀತಿಯ ಒತ್ತಡಕ್ಕೆ ಮಣಿದು ಮಾಸದ ಮಾತೆಯಾಗಿ ಸೇವೆ ಮಾಡಲು ಕೈಜೋಡಿಸಿದೆ. ಆದರೆ ಮನದ ಮೂಲೆಯಲ್ಲಿ ತುಂಬಾ ಅಳುಕಿತ್ತು. ನಮ್ಮ ವಲಯದ ನಿವೃತ್ತ ಶಿಕ್ಷಕಿ, ಸಮಾಜಸೇವಕಿ ಕಮಲಕ್ಕ ಅವರ ಸಹಕಾರದಿಂದ ಮಾಸದ ಮಾತೆಯಾಗಿ ಸೇವೆಮಾಡಲು ಮಾರ್ಗದರ್ಶನ ದೊರಕಿತು ” ಎನ್ನುತ್ತಾರೆ ಮಂಗಳೂರು ಮಂಡಲದ ಬಾಯಾರು ವಲಯದ ಉಷಾಕುಮಾರಿ ಚೇರಾಲು. ಚಾಲತ್ತಡ್ಕದ […]

Continue Reading

ಅಪರೂಪದ ಮಹಿಳಾ ಕ್ರೀಡಾ ಸಾಧಕಿ ದಿವ್ಯಭಾರತಿ

ಕಾಸರಗೋಡು ಕ್ರೀಡೆ, ಕಲೆ, ಸಂಸ್ಕೃತಿಗಳನ್ನು ಒಳಗೊಂಡ ವಿಶಿಷ್ಟ ನಾಡು. ಚಿಕ್ಕವಯಸ್ಸಿನಲ್ಲೇ ಕ್ರೀಡೆಯ ಕುರಿತು ಆಸಕ್ತಿ ಬೆಳೆಸಿಕೊಂಡು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವವರ ಪೈಕಿ ದಿವ್ಯಭಾರತಿ ಕೆ. ಕೂಡಾ ಒಬ್ಬರು. ಕಾಸರಗೋಡು ಜಿಲ್ಲೆಯ ಕುರುಡುಪದವು ಸಮೀಪದ ‌ಕುರಿಯ ಗ್ರಾಮದ ವಿಜಯ ವಿಠಲ ಕೆ. ಮತ್ತು ಸಲಿಲ ಕುಮಾರಿ ವಿ.ಕೆ. ದಂಪತಿಯ ಪುತ್ರಿ ದಿವ್ಯಭಾರತಿ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಕುರುಡುಪದವು AUPS  ಶಾಲೆಯಲ್ಲಿ ಶೈಕ್ಷಣಿಕ ವ್ಯಾಸಂಗವನ್ನು ಪ್ರಾರಂಭಿಸಿದ ಇವರು, 6 ನೇ ತರಗತಿಯಿಂದನೇ ಕೇರಳ ರಾಜ್ಯದ ವಲಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೪

ಅವಿಚ್ಛಿನ್ನ ಅರಿವಿನ ಹರಿವಿಗೆ ಪಾತ್ರವಾಗಿ ಬಂದವರು ಇಪ್ಪತ್ತೈದನೇ ಪೀಠಾಧೀಶರಾದ ಶ್ರೀ ಶ್ರೀಮದ್ರಘೂತ್ತಮ ಭಾರತೀ ಮಹಾಸ್ವಾಮಿಗಳು(೨). ಸಣ್ಣಪ್ರಾಂತ್ಯ ಹೊಂದಿದ್ದರೂ ಸಮರ್ಥ ರಾಜ್ಯಭಾರ ಮಾಡಿದ ಇಕ್ಕೇರಿ ಅರಸರು ಸಹಜವಾಗಿಯೇ ಅರಿವಿನ ಧ್ಯೇಯ ಸಾಧನವಾದ ಧರ್ಮಮಾರ್ಗದ ಅನುಸರಣೆಗಾಗಿ ಅವಿಚ್ಛಿನ್ನ ಅರಿವಿನ ಗುರುಪರಂಪರೆಯನ್ನು ಹೊಂದಿದ ಶ್ರೀರಾಮಚಂದ್ರಾಪುರ ಮಠದ ಪೀಠಾಧೀಶರ ಶಿಷ್ಯತ್ವವನ್ನು ಪಡೆದಿದ್ದರು. ಆದ್ದರಿಂದ ಶ್ರೀಗುರುಗಳಲ್ಲಿ ವಿಶೇಷ ಗೌರವವನ್ನು ಹೊಂದಿದ್ದ ಇಕ್ಕೇರಿಯ ಅರಸನಾದ ಬಸಪ್ಪನಾಯಕನು ಕ್ರಿ.ಶ ೧೭೪೫ರಲ್ಲಿ ನಿರೂಪವೊಂದನ್ನು ಹೊರಡಿಸಿ ಶ್ರೀರಾಮಚಂದ್ರಾಪುರ ಮಠಕ್ಕೆ ರಾಯದತ್ತವಾಗಿ ಬಂದ ದಿವಾಜ್ಯೋತಿ ಮಕರಣತೋರಣಾದಿ ಬಿರುದು ಬಾವಲಿಗಳನ್ನಿತ್ತು ಬೇರೆ ಎಲ್ಲಾ […]

Continue Reading

” ಗೋಮಾತೆಯ ಸೇವಾ ಕೈಂಕರ್ಯ ಮನಸ್ಸಿಗೆ ಮುದ ನೀಡುವ ಕಾರ್ಯ : ಸವಿತಾ ದತ್ತಾತ್ರೇಯ, ಬೆಂಗಳೂರು

” ಗೋವುಗಳ ಜೊತೆ ಒಡನಾಡುತ್ತಿದ್ದ ನನಗೆ ಬೆಂಗಳೂರು ನಗರಕ್ಕೆ ಬಂದ ಮೇಲೆ ಅದು ಮರೀಚಿಕೆಯಾಯಿತು. ಆದರೆ ಈಗ ನಮ್ಮ ಶ್ರೀಗುರುಗಳ ಗೋಸೇವಾ ಯೋಜನೆಯಲ್ಲಿ ಕೈ ಜೋಡಿಸಿದ ಮೇಲೆ ಅಸಾಧ್ಯ ಎನಿಸಿದ ಕಾರ್ಯವೂ ಸುಲಲಿತವಾಗಿ ಕೈಗೂಡಿತು ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ,ವಿಜಯನಗರ ವಲಯದ ಸವಿತಾ ದತ್ತಾತ್ರೇಯ ಅವರು. ಕುಮಟಾದ ಕತ್ತಗಾಲು ‌ನಾರಾಯಣ ಭಟ್ ಹಾಗೂ ಗೋದಾವರಿ ಭಟ್ ಇವರ ಪುತ್ರಿಯಾದ ಸವಿತಾ ಅವರ ಪತಿ ದತ್ತಾತ್ರೇಯ ಮಹಾದೇವ ಭಟ್. ಸುಮಾರು ನಲುವತ್ತು ವರ್ಷಗಳಿಂದ ಬೆಂಗಳೂರು ನಗರದಲ್ಲಿ […]

Continue Reading

ಬಾಲ ಯಕ್ಷಗಾನ ಕಲಾವಿದ ವಿನೀತ್ ಕಶ್ಯಪ್

ಚಿಕ್ಕವಯಸ್ಸಿನಲ್ಲೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಗಮನಾರ್ಹ ಸಾಧನೆಗೈಯ್ಯುತ್ತಿರುವ ಪ್ರತಿಭೆ ವಿನೀತ್ ಕಶ್ಯಪ್. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಗುಂಜಗೋಡಿನ ಗಣಪತಿ ಹೆಗಡೆ ಮತ್ತು ಪ್ರವೀಣಾ ಹೆಗಡೆ ದಂಪತಿಯ ಪುತ್ರ ವಿನೀತ್ ಕಶ್ಯಪ್ ಯಕ್ಷಲೋಕದಲ್ಲಿ ಹೆಜ್ಜೆ ಗುರುತು ಮೂಡಿಸುವತ್ತ ದಾಪುಗಾಲು ಹಾಕಿದ್ದಾನೆ.ಒಂಬತ್ತು ವರ್ಷದವನಿದ್ದಾಗಲೇ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದ ಈತ, ಪ್ರಾರಂಭದಲ್ಲಿ ಯಕ್ಷಗುರು ತೃಯಂಬಕ ಹೆಗಡೆ ಇಡುವಾಣಿ ಅವರಲ್ಲಿ ಅಭ್ಯಾಸ ಮಾಡಿ, ಬಳಿಕ ತಂದೆಯ ಬಳಿಯಲ್ಲೇ ಅಧ್ಯಯನ ಮುಂದುವರಿಸಿದ್ದಾನೆ. ಕೃಷ್ಣ, ರುಕ್ಮಾಂಗ, ವಿಭೀಷಣ, ಲೋಹಿತಾಶ್ವ, ಅಭಿಮನ್ಯು, ಸೀತೆ, ರುಕ್ಮಿಣಿ… ಹೀಗೆ ವಿವಿಧ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೩

ಅರಿವಿನ ಆನಂದಸಾಗರದ ಸಿಂಧುವಿನಲ್ಲಿ ಶಿಷ್ಯಕೋಟಿ ಬಿಂದುಗಳು ಲೀನಗೊಳ್ಳಲು ಹಪಹಪಿಸುತ್ತಿರುವಾಗ ಅಲ್ಲಿಗೆ ಸೇರಿಸಲು ಸರಿಸುಗಮ ಮಾರ್ಗದರ್ಶಕ ವರವಾಗಿ ಬಂದ ಅವಿಚ್ಛಿನ್ನ ಗುರುಪರಂಪರೆಯ ಇಪ್ಪತ್ತಮೂರನೆಯ ಜಗದ್ಗುರು ಶಂಕರಾಚಾರ್ಯರು ಶ್ರೀ ಶ್ರೀಪರಮೇಶ್ವರ ಭಾರತೀ ಮಹಾಸ್ವಾಮಿಗಳು. ಅರಿವೇ ತಾವಾಗಿ ಬಂದ ಶ್ರೀಗುರುಗಳು ‘ಆಚಾರ್ಯ’ ಶಬ್ದಾರ್ಥಕ್ಕನುಗುಣವಾಗಿ ಶಿಷ್ಯಭಕ್ತಜನತೆಗೆ ಅರಿವಿನಾಗರ ದರ್ಶನದ ಮೂಲಗುರಿಗೆ ಸಮ್ಯಕ್ ತಲುಪಿಸಲು ಅಗತ್ಯವಾದ ಧರ್ಮಶಾಸನ ವಿಧಿಗಳನ್ನು ನಿಯಮಿಸಲು ತಮ್ಮ ಪೂರ್ವಾಚಾರ್ಯರ ಕಾಲಘಟ್ಟದಲ್ಲಿ ಸ್ಥಾಪಿತವಾಗಿದ್ದ ಬಿದ್ರಕಾನು, ಕೆಕ್ಕಾರು, ತೀರ್ಥಹಳ್ಳಿ ಮೊದಲಾದ ಶಾಖಾಮಠಗಳಲ್ಲಿ ಸಾಕಷ್ಟು ದೀರ್ಘಕಾಲ ವಸತಿ ಮಾಡಿದರು. ತಮ್ಮ ಅಂತ್ಯಕಾಲದಲ್ಲಿ ಹಿಂದಿನ ಗುರುಗಳಂತೆಯೇ […]

Continue Reading

ಗೋಸ್ವರ್ಗದಲ್ಲಿ ಸವಿದ ಕುಣಿತ ಭಜನೆಯ ಸ್ವರ್ಗೀಯ ಅನುಭೂತಿ

” ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ ಕುಳಿತು ಪಾಡಲು ನಿಲುವ ನಿಂತು ಪಾಡಲು ನಲಿವ……” ಎಂಬ ದಾಸವಾಣಿಯನ್ನು ನಾವೆಲ್ಲ ಕೇಳಿದ್ದೇವೆ. ಹಾಗಾದರೆ ನಲಿದು ಸಂತಸದಿ ಹಾಡಿದರೆ……!!!!! ಅನುಮಾನವೇಕೆ…..? ಆ ದೇವನು ಭಜಕರ ಭಕ್ತಿಗೊಲಿದು ಸ್ವರ್ಗವನ್ನೇ ಧರೆಗಿಳಿಸುವ..!!!!! ಸ್ವರ್ಗ ಧರೆಗಿಳಿದರೆ ಹೇಗಿರಬಹುದು ಎಂಬ ಕಲ್ಪನೆಯೇ..? ಅಂತಹ ಒಂದು ಅಮೋಘದೃಶ್ಯವನ್ನು ಇತ್ತೀಚೆಗೆ ಬಾನ್ಕುಳಿಯ ಗೋಸ್ವರ್ಗದಲ್ಲಿ ಕಂಡೆ. ಆ ಸ್ವರ್ಗದ ಸೊಬಗನ್ನು ಅಕ್ಷರಗಳಲ್ಲಿ ಹಿಡಿದಿಡಲು ಆಗುತ್ತಿಲ್ಲ ಎಂಬುದು ಮಾತ್ರ ಅಕ್ಷರಶಃ ಸತ್ಯ…..!!!! ನಿಜ ಸ್ವರ್ಗದ ಸೊಬಗನ್ನು ವರ್ಣಿಸಲು ಸಾವಿರ ನಾಲಿಗೆಯ […]

Continue Reading

” ಸತತ ಶ್ರೀಚರಣ ಸೇವೆ ದೊರಕಿಸೆಮಗೆ ರಾಮಾ ” : ವಿದ್ಯಾಗೌರಿ ಕುಳಮರ್ವ

  ” ಎಳವೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿದ ಕಾರಣ ಮಠವೆಂದರೆ ಮನಸ್ಸಿಗೆ ನೆಮ್ಮದಿ ನೀಡುವ ತಾಣವಾಗಿಬಿಟ್ಟಿದೆ. ಪ್ರತಿದಿನವೂ ಗುರುಸ್ಮರಣೆಯೊಂದಿಗೇ ದಿನವನ್ನು ಆರಂಭಿಸುವವರು ನಾವು . ಇದೇ ಅಭ್ಯಾಸ ನಮ್ಮ ಮಕ್ಕಳಿಗೂ ದೊರಕಿದೆ ” ಎಂದು ಸತತ ಶ್ರೀಮಠದ ಸೇವೆಯಲ್ಲಿ ನಿರತವಾಗುವ ಹಂಬಲ ವ್ಯಕ್ತಪಡಿಸಿದವರು ವಿದ್ಯಾಗೌರಿ ಕುಳಮರ್ವ. ಕುಳಮರ್ವ ಮನೆತನದ ಕೃಷ್ಣ ಭಟ್ ಹಾಗೂ ದೇವಕಿಯವರ ಪುತ್ರಿಯಾದ ವಿದ್ಯಾಗೌರಿ ತಾಳ್ತಜೆ ಮಹಾಲಿಂಗ ಭಟ್ ಅವರ ಪತ್ನಿ. ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ವಿದ್ಯಾಗೌರಿ ಅವರು ಮದುವೆಯ ನಂತರವೂ ಶ್ರೀಮಠದ ಸೇವೆಯಲ್ಲಿ […]

Continue Reading

ಸರಾಗವಾಗಿ ಚಂಡೆ, ಮದ್ದಲೆ ಬಾರಿಸುವ 9 ರ ಪೋರ!

“ನಮ್ಮದು ಯಕ್ಷಗಾನ ಪರಂಪರೆ ಹೊಂದಿರುವ ಕುಟುಂಬ. ಭಾಗವತರು, ವೇಷಧಾರಿಗಳು, ಮದ್ದಳೆ ವಾದಕರು ಹೀಗೆ ಯಕ್ಷಗಾನದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡಿದ್ದ ಕುಟುಂಬ ನಮ್ಮದು. ನನ್ನ ತಂದೆ ಕೂಡಾ ಪ್ರಸಿದ್ಧ ಛಾಯಾಗ್ರಾಹಕ ಮತ್ತು ಮದ್ದಳೆ ವಾದಕ. ಹೀಗಾಗಿ ನಮ್ಮ ಮನೆಗೆ ಆಗಾಗ ಭಾಗವತರು, ಮದ್ದಳೆ ವಾದಕರು ಭೇಟಿ ನೀಡುವುದು ಅದೇ ಸಂದರ್ಭದಲ್ಲಿ ಭಾಗವತಿಕೆ, ಮದ್ದಳೆ ವಾದನ ನಡೆಯುತ್ತಿರುತ್ತದೆ. ಹೀಗೆ ಸದಾ ಯಕ್ಷಗಾನದ ವಾತಾವರಣದಲ್ಲಿ ನೆಲೆಸಿರುವುದರಿಂದ ಯಕ್ಷಗಾನದ ಚಂಡೆ, ಮದ್ದಳೆ ವಾದನ ಕಲಿಯಲು ಸ್ಪೂರ್ತಿ ಸಿಕ್ಕಿತು”. ಹೀಗೆ ಮಾತನ್ನು ಆರಂಭಿಸಿದವರು ಬಾಲ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೮

ಅರಿವಿನ ಬೆಳಕನ್ನು ನೀಡಿ ಅಂತರಂಗವನ್ನು ಪ್ರಕಾಶಗೊಳಿಸುವುದೇ ಉದ್ದೇಶವಾದ ಅವಿಚ್ಛಿನ್ನ ಗುರುಪರಂಪರೆಯು ಹದಿಮೂರನೆಯ ಪೀಠಾಧೀಶರಾಗಿ ಶ್ರೀ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಯೋಗಪಟ್ಟವನ್ನಿತ್ತಿತ್ತು. ಹಿಂದಿನ ಎಲ್ಲಾ ಗುರುಗಳಂತೆಯೇ ಬ್ರಹ್ಮವಿದ್ಯಾನಿಷ್ಠರೂ, ತಪೋನಿಧಿಗಳೂ ಆಗಿದ್ದ ಪೂಜ್ಯ ಶ್ರೀಗಳ ಮಾರ್ಗದರ್ಶನವನ್ನು ಕೆಳದಿ, ಇಕ್ಕೇರಿ, ಹಂಪೆ ಮೊದಲಾದ ಸಂಸ್ಥಾನಗಳ ಅರಸರು ಪಡೆಯುತ್ತಿದ್ದರು. ಪರಮಪೂಜ್ಯ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಕಾಲದಲ್ಲಿ  ವಿಜಯನಗರದ ವೀರನರಸಿಂಹರಾಯನು  ಪರಮಾರಾಧ್ಯಮೂರ್ತಿ ಶ್ರೀರಾಮಚಂದ್ರ ದೇವರ ಅಮೃತಪಡಿ ಮತ್ತು ಶ್ರೀರಾಮಚಂದ್ರಾಪುರ  ಅಗ್ರಹಾರಕ್ಕೆ ಭೂದಾನವಾಗಿ ಸಹಿರಣ್ಯೋದಕ ಪೂರ್ವಕವಾಗಿ ದಾನ ನೀಡುತ್ತಾನೆ (ಕ್ರಿ.ಶ ೧೫೦೭). ಈ […]

Continue Reading

” ಬದುಕಿನ ನೋವುಗಳಿಗೆ ಮುಕ್ತಿ ದೊರಕಿದ್ದು ಶ್ರೀಮಠದ ಸೇವೆಯಲ್ಲಿ” : ಪ್ರೇಮಲತಾ ಉಪ್ಪಿನಂಗಡಿ

  ” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಇರುವ ಕಾರಣ ಶ್ರೀಗುರುಗಳ ಕಾರುಣ್ಯದ ಬಗ್ಗೆ ತಿಳಿದಿತ್ತು. ಬದುಕಿನ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಸಂಪೂರ್ಣ ಶರಣಾಗಿದ್ದು ಶ್ರೀಗುರು ಚರಣಕ್ಕೆ. ಶ್ರೀಗುರುಗಳ ಆಶೀರ್ವಚನಗಳೇ ಭರವಸೆಯ ಸಾಂತ್ವನದ ನುಡಿಗಳಾಗಿ ಕತ್ತಲ ಬಾಳಿಗೆ ಬೆಳಕಿನ ಹಾದಿಯನ್ನು ತೋರಿದಾಗ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡೆ..ಇದರಲ್ಲಿ ದೊರಕುವ ನೆಮ್ಮದಿ, ಭರವಸೆ ಬೇರೆಲ್ಲೂ ಸಿಗಲಾರದು ಎಂಬುದು ನನ್ನ ಅನುಭವದ ನುಡಿ ” ಎನ್ನುತ್ತಾರೆ ಉಪ್ಪಿನಂಗಡಿ ಮಂಡಲದ , ಉಪ್ಪಿನಂಗಡಿ ವಲಯದ ನೆಕ್ಕಿಲಾಡಿ ಘಟಕದ ಪ್ರೇಮಲತಾ ಕಾಂಚನ ಅವರು. ಮಂಚಿಕಜೆಯ […]

Continue Reading

ಶ್ರೀಮಠದಂಗಳದಲ್ಲಿ ಬೆಳೆದ ವೃಕ್ಷ : ಜೀವಿಕಾ ವಿಭಾಗ (ದಿಶಾದರ್ಶಿ)

ಯಾವಾಗಲೂ ಸಮಾಜಮುಖಿ ಕಾರ್ಯಗಳನ್ನೇ ಮಾಡುತ್ತಾ ಸಮಾಜದ ಒಳಿತನ್ನೇ ಬಯಸುವ ನಮ್ಮ ನೆಚ್ಚಿನ ಶ್ರೀ ಸಂಸ್ಥಾನದವರು ಉದ್ಯೋಗವನ್ನರಸಿ ಬರುವ ತಮ್ಮ ಶಿಷ್ಯರಿಗೆ ಅನುಗ್ರಹಿಸಲೆಂದೇ 5 ವರ್ಷಗಳ ಹಿಂದೆ ಬಿತ್ತಿದ “ದಿಶಾದರ್ಶಿ” ಯೆಂಬ ಬೀಜ, ಶ್ರೀಮಠವೆಂಬ ಅಂಗಳದ ಫಲವತ್ತಾದ ಮಣ್ಣಿನಲ್ಲಿ ಬೆಳೆದು ಹೆಮ್ಮರವಾಗಿ ಶ್ರೀಗಳ ಅನುಗ್ರಹ ಹಾಗೂ ಆಶೀರ್ವಾದಗಳೊಂದಿಗೆ ಇಂದು ರುಚಿಯಾದ ಹಣ್ಣುಗಳನ್ನು ನೀಡಲಾರಂಬಿಸಿದೆ. ಈ ಬರಹದ ಹೊತ್ತಿಗೆ ಫಲಾನುಭವಿಗಳ ಸಂಖ್ಯೆ 577….. ಹಿನ್ನಲೆ : ನಮ್ಮ ಮಠದ ಹೆಚ್ಚಿನ ಶಿಷ್ಯರ (ಹವ್ಯಕರು ಮತ್ತು ಹವ್ಯಕೇತರರು) ಮೂಲ ಉತ್ತರ ಕನ್ನಡ, […]

Continue Reading

ಯಶಸ್ಸಿನ ಹಾದಿಯತ್ತ ಯುವ ಟೆಕ್ ಉದ್ಯಮಿ ಶ್ರೀನಿಧಿ

  ವಿಜ್ಞಾನ ತಂತ್ರಜ್ಞಾನವೆಂದರೆ ಇವರಿಗೆ ಪ್ರಾಥಮಿಕ ಶಾಲಾ ದಿನಗಳಲ್ಲೇ ಅಚ್ಚುಮೆಚ್ಚು. ಅಂದಿನಿಂದಲೇ ತಂತ್ರಜ್ಞಾನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ತವಕದಿಂದ ಅಂತರ್ಜಾಲದ ಮೂಲಕ ಮಾಹಿತಿಯನ್ನು ಅನ್ವೇಷಿಸಲು ಆರಂಭಿಸಿದರು. ನಿರಂತರ ಪ್ರಯತ್ನ, ತಾಳ್ಮೆ, ಪರಿಶ್ರಮದಿಂದಾಗಿ 8ನೇ ತರಗತಿಯಲ್ಲಿರುವಾಗಲೇ ಯುವ ಟೆಕ್ ಉದ್ಯಮಿ ಎಂದು ಗುರುತಿಸಿಕೊಂಡರು! ಹೌದು. ದಕ್ಷಿಣಕನ್ನಡ ಜಿಲ್ಲೆಯ ಕಲ್ಲಡ್ಕಡ ರವಿಶಂಕರ್ ಭಟ್ ಮತ್ತು ಸರಸ್ವತಿ ದಂಪತಿಗಳ ಪುತ್ರ ಶ್ರೀನಿಧಿ ಆರ್.ಎಸ್. ಇಂದು ಯುವ ಟೆಕ್ ಉದ್ಯಮಿಯಾಗಿ ಗುರುತಿಸಿಕೊಂಡು ಗಮನಸೆಳೆಯುತ್ತಿದ್ದಾರೆ. 8ನೇ ತರಗತಿಯಲ್ಲಿರುವಾಗ ಸ್ನೇಹಿತರೊಂದಿಗೆ ವಿವಿಧ ಮಾಹಿತಿಯನ್ನು ಕಲೆ ಹಾಕುತ್ತಿದ್ದ ಶ್ರೀನಿಧಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೭

ಅರಿವಿನ ಪರಂಪರೆಯು ಪ್ರಥಮ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮುಂದುವರಿಕೆಯಾಗಿ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳ ರೂಪದಿಂದ ಸಾಗಿತು. ರಘೂತ್ತಮ ಮಠದ ಹನ್ನೆರಡನೆಯ ಪೀಠಾಧೀಶರಾದ ಶ್ರೀಮದ್ರಾಮಚಂದ್ರ ಭಾರತೀ ಮಹಾಸ್ವಾಮಿಗಳು ಹಿಂದಿನ ಎಲ್ಲಾ ಗುರುಗಳಂತೆಯೇ ಪರಮ ತಪಸ್ವಿಗಳೂ ಮತ್ತು ಶ್ರೇಷ್ಠ ಧಾರ್ಮಿಕ ನೇತಾರರಾಗಿದ್ದರು. ಇವರ ಅದ್ವೈತಾಮೃತ ಸವಿಯು ಕರ್ಣಾಕರ್ಣಿಕೆಯಾಗಿ ಹೊನ್ನೆಕಂಬಳಿ ಅರಸರ ಕಿವಿಗೂ ತಲುಪಿತು. ಆಗಿನ ಕಾಲದ ಅರಸರು ಸ್ವಯಂ ಶಾಸ್ತ್ರಜ್ಞರಾಗಿದ್ದರಲ್ಲದೇ ಧರ್ಮರಾಜ್ಯಕ್ಕಾಗಿಯೇ ರಾಜತ್ವದ ಅನಿವಾರ್ಯತೆ ಎಂಬುದನ್ನು ಅರಿತಿದ್ದವರಾಗಿದ್ದರು. ಧರ್ಮಸಮಾಜದ ಮೂಲ ಮತ್ತು ಅಂತಿಮ ಗುರಿಯೇ ಅರಿವಿನ ಪ್ರಾಪ್ತತೆ ಎಂಬುದು ಜನ್ಮತಃ ಅವರಿಗೆ […]

Continue Reading

ಪ್ರತಿನಿತ್ಯವೂ ಗೋಸೇವೆ ಮಾಡುವ ಪುಣ್ಯಾವಕಾಶ ದೊರಕಿದೆ” : ಮಂಗಲಾ ನೀಲಕಂಠ ಉಪಾಧ್ಯಾಯ

ಹೊನ್ನಾವರ ಮಂಡಲದ ಭಟ್ಕಳ ವಲಯದ ದೇವಿಕಾನ ,ಕಾಯ್ಕಿಣಿಯ ಮಂಗಲಾ ನೀಲಕಂಠ ಉಪಾಧ್ಯಾಯ ಅವರು ನಿತ್ಯ ಗೋಸೇವೆಯಲ್ಲಿ ಸಂತೃಪ್ತಿ ಕಂಡವರು. ಸಾಗರದ ಸಮೀಪದ ವರದಹಳ್ಳಿಯ ಎಡಜಿಗಳೆ ಮಂಗಲಾ ಅವರ ತವರುಮನೆ. ಗೃಹಿಣಿಯಾಗಿರುವ ಇವರು ತಮ್ಮ ಗೃಹಕೃತ್ಯಗಳ ನಡುವೆ ಶ್ರೀಮಠದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಭಟ್ಕಳ ವಲಯದ ಮಾತೃ ಪ್ರಧಾನೆಯಾಗಿ ಆರು ವರ್ಷಗಳ ಕಾಲ ಸೇವೆ ಮಾಡಿದ ಇವರು ಪ್ರಸ್ತುತ ವಲಯ ಬಿಂದು ಸಿಂಧು ಸಂಚಾಲಕಿಯಾಗಿ ಶ್ರೀಗುರು ಸೇವೆ ಮಾಡುತ್ತಿದ್ದಾರೆ. ” ಚಿಕ್ಕಂದಿನಿಂದಲೇ ತವರುಮನೆಯಲ್ಲಿ ಗೋವುಗಳ ಒಡನಾಟದೊಂದಿಗೆ ಬೆಳೆದವಳು ನಾನು, […]

Continue Reading

ಸಂಗೀತ ಸಾಧಕ ಶ್ರೀಚರಣ ನೀರಮೂಲೆ

9ನೇ ವಯಸ್ಸಿಗೇ ಸಂಗೀತ ಕಲೆಯತ್ತ ಆಕರ್ಷಣೆಗೊಂಡ ಈ ಪ್ರತಿಭೆ ಇಂದು ಸಂಗೀತ ಲೋಕದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸುತ್ತಿದ್ದಾನೆ. ಕಲ್ಲಡ್ಕದ ನೀರಮೂಲೆಯ ಪ್ರವೀಣ್ ಕುಮಾರ್ ಮತ್ತು ಜಯಶ್ರೀ ನೀರಮೂಲೆ ದಂಪತಿಯ ಪುತ್ರ ಶ್ರೀಚರಣ ನೀರಮೂಲೆ ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈಯ್ಯುತ್ತಿದ್ದಾನೆ. 4ನೇ ತರಗತಿಯಲ್ಲಿದ್ದಾಗ ಕುಲದೀಪ ಎಂ. ಪೈ ಅವರ ‘ವಂದೇ ಗುರು ಪರಂಪರಾಂ’ ಸರಣಿಯಲ್ಲಿ ಹಾಡುವ ಮೂಲಕ ಸಂಗೀತ ಪಯಣ ಆರಂಭಿಸಿದ ಶ್ರೀಚರಣ್, ಈವರೆಗೆ ವಿವಿಧ ಕಡೆಗಳಲ್ಲಿ 20ಕ್ಕೂ ಅಧಿಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನೀಡಿದ್ದಾನೆ. […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೬

ಅರಿವಿನ ನಿರರ್ಗಳ ಹರಿವಿಗಾಗಿ ಅವಶ್ಯವಾಗಿ ಅವಿಚ್ಛಿನ್ನತೆಯಿಂದ ಮುನ್ನಡೆಯಲೇಬೇಕಾದ ಗುರುಪರಂಪರೆ, ದ್ವಿತೀಯ ಚಿದ್ಬೋಧ ಭಾರತೀಯತಿಗಳಿಂದ  ಯೋಗ್ಯ ಅರಿವಿನಮೂರ್ತಿಗೆ ಪಟ್ಟಗೈದು ಶ್ರೀರಾಘವೇಶ್ವರಭಾರತೀ ಎಂಬ ಶುಭಾಭಿಧಾನವಗೈದಿತು. ಇವರೇ ಪರಂಪರೆಯ ಪ್ರಥಮ ಶ್ರೀರಾಘವೇಶ್ವರಯತಿಗಳು. ಶ್ರೀಗಳು ತಪೋಧನರೂ ವಾಗ್ಮಿಗಳೂ ಅಲ್ಲದೇ ಖಗೋಳಶಾಸ್ತ್ರಜ್ಞರೂ ಆಗಿದ್ದರೆಂಬುದು ಇತಿಹಾಸದ ಉಲ್ಲೇಖ. ಪೂಜ್ಯರ ಕಾಲ ಶಾಲಿವಾಹನ ಶಕವರ್ಷ೧೩೮೬(ಕ್ರಿ.ಶ.೧೪೮೬).ಆ ಕಾಲದ ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ವಾರಣಾಸಿಯಲ್ಲಿ ಸಾಕಷ್ಟು ಕಾಲವುಳಿದು ಅಧ್ಯಯನ ಮಾಡಿದ ಪೂಜ್ಯರು ಬರುವಾಗ ಕಾಶಿಯಿಂದ ಒಂದುಸಹಸ್ರ ಶಾಲಿಗ್ರಾಮಗಳನ್ನು ತಂದು ರಘೂತ್ತಮ ಮಠದಲ್ಲಿ ಸ್ಥಾಪಿಸಿದರು. ಇದನ್ನು ಗುರುಕೃಪಾತರಂಗಿಣಿ ಉಲ್ಲೇಖಿಸುತ್ತದೆ.. “ಬಾಲ್ಯೇ ಯೋಸಾವಲಭತ ಗುರೋಃ […]

Continue Reading