” ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆಶೀರ್ವಚನಗಳೇ ಪ್ರೇರಣೆ ” : ಮಾಲಿನಿ ಕೆ. ಭಟ್ಟ

ಹೊನ್ನಾವರ ಮಂಡಲದ ಭಟ್ಕಳ ವಲಯದ ಗುರಿ ತಲುಪಿದ ಮಾಸದ ಮಾತೆಯಾಗಿರುವ  ಮಾಲಿನಿ ಕೆ. ಭಟ್ ಬಲಸೆಯ ಕೃಷ್ಣಾನಂದ ಶಿವರಾಮ ಭಟ್ಟರ ಪತ್ನಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಭಟ್ಕಳದ ಕಾರಗದ್ದೆಯ ವಾಸುದೇವ ವೆಂಕಟರಮಣ ಭಟ್ಟ ಹಾಗೂ ಸರಸ್ವತಿ ವಾಸುದೇವ ಭಟ್ಟ ಇವರ ಪುತ್ರಿ. ಶ್ರೀ ರಾಮಚಂದ್ರಾಪುರ ಮಠ ಹೊಸನಗರದಲ್ಲಿ ನಡೆದ ಶ್ರೀ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಅನುಭವ ಇವರಿಗಿದೆ. ” ಬಾಲ್ಯದಿಂದಲೇ ಗೋವುಗಳ ಮೇಲೆ ತುಂಬಾ ಪ್ರೀತಿಯಿತ್ತು. ಶ್ರೀಗುರುಗಳ ವಿವಿಧ […]

Continue Reading

ಶಿಕ್ಷಣ ಮತ್ತು ಸಾಂಸ್ಕೃತಿಕ ಸಾಧಕ ಶ್ರೀಗಣೇಶ ಹೆಗಡೆ

  ಶಿಕ್ಷಣ, ಯಕ್ಷಗಾನ, ಸಾಹಿತ್ಯ, ಭಾಷಣ, ಚರ್ಚಾಕೂಟ ಹೀಗೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಎನಿಸಿಕೊಂಡವರು ಶ್ರೀಗಣೇಶ ಹೆಗಡೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡಿನ ಕೃಷಿ ಕುಟುಂಬದ ಹಿನ್ನೆಲೆಯ ಸುಬ್ರಾಯ ಹೆಗಡೆ ಮತ್ತು ಮಹಾಲಕ್ಷ್ಮೀ ದಂಪತಿಗಳ ಪುತ್ರ ಶ್ರೀಗಣೇಶ ಹೆಗಡೆ ಅಪರೂಪದ ಸಾಧಕರಲ್ಲೊಬ್ಬರು. ಕುಮಟಾದ ಡಾ.ಎ.ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಬಿಎ‌ಸ್ಸಿ ಪದವಿ ಪಡೆದ ಇವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಹಾಗೂ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೫

ಅರಿವಿಗಾಗಿಯೇ ಬೆಳೆದ ಗುರುಪರಂಪರೆ ಮಠೀಯ ವ್ಯವಸ್ಥೆಯನ್ನು ಚೆನ್ನಾಗಿ ಪಾಲಿಸಿಕೊಂಡು ಹಾಗೂ ಅಶಾಶ್ವತವಾದ ಈ ಪಾಂಚಭೌತಿಕ ಪ್ರಕೃತಿ ಪಾತ್ರೆಯ ಬದಲಿಕೆಯ ಅನಿವಾರ್ಯದಿಂದಾಗಿ ಇನ್ನೊಂದು ಪಾಂಚಭೌತಿಕ ಶರೀರದಲ್ಲಿ ಪಾತ್ರತ್ವವನ್ನು ನಿರ್ವಹಿಸುತ್ತಾ ಬಂದಿರುವುದನ್ನು ಇಲ್ಲಿಯವರೆಗೂ ಕಾಣುತ್ತಾ ಬಂದೆವು. ಅಂತೆಯೇ ಶ್ರೀ ಶ್ರೀ ನಿತ್ಯಾನಂದ ಭಾರತೀ ಮಹಾಸ್ವಾಮಿಗಳು ಶ್ರೀ ಶ್ರೀ ನಿತ್ಯಬೋಧಘನೇಂದ್ರ ಭಾರತಿಗಳಿಗೆ ಯೋಗಪಟ್ಟವನ್ನಿತ್ತರು. ಈ ಆರನೆಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ನಿತ್ಯಬೋಧಘನೇಂದ್ರ ಭಾರತೀ ಶ್ರೀಗಳಿಂದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ಮೂಲಕ ಪರಂಪರೆ ಮುಂದುವರೆದು ಎಂಟನೆಯವರಾಗಿ ಶ್ರೀ ಶ್ರೀ […]

Continue Reading

” ಮನೆಯ ಗೋವುಗಳಷ್ಟೇ ಕಾಳಜಿ ಶ್ರೀಮಠದ ಗೋವುಗಳ ಮೇಲೂ ಇದೆ ” : ವಿಜಯಲಕ್ಷ್ಮಿ ನರ್ಕಳ

ಶ್ರೀಮಠದ ಸೇವೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ತೊಡಗಿಸಿಕೊಂಡವರು ಇವರು. ಮಾಸದ ಮಾತೆಯಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ್ದು ಲಕ್ಷ್ಮೀ ಪ್ರಕಾಶ್ ಇಳಂತಿಲ.ಮೊದಲು ಹೋದ ಮನೆಯಲ್ಲಿ ದೊರಕಿದ್ದು ಅತ್ಯಂತ ಕಹಿ ಅನುಭವ. ಕಣ್ಣೀರು ಸುರಿಸುತ್ತಲೇ ಹೊರಗೆ ನಡೆಯಬೇಕಾಗಿ ಬಂದ ಪರಿಸ್ಥಿತಿ. ‌ಆದರೂ ಶ್ರೀಗುರು ಚರಣಗಳಲ್ಲಿ ಇರಿಸಿದ ನಂಬಿಕೆ ಹುಸಿಯಾಗಲಿಲ್ಲ. ಗೋಪ್ರೇಮಿಯೊಬ್ಬರು ಒಂದು ಹಸುವಿನ ಒಂದು ವರ್ಷದ ನಿರ್ವಹಣಾ ವೆಚ್ಚವನ್ನು ಸಂಪೂರ್ಣವಾಗಿ ನೀಡಿದರು. ಇದರಿಂದಾಗಿ ಗುರಿ ತಲುಪಲು ಕಷ್ಟವಾಗಲಿಲ್ಲ.. ಇದು ಮಂಗಳೂರು ಮಂಡಲದ ಕಲ್ಲಡ್ಕ ವಲಯದ ಮಾತೃಪ್ರಧಾನೆಯಾಗಿರುವ ವಿಜಯಲಕ್ಷ್ಮಿ ನರ್ಕಳ ಅವರ […]

Continue Reading

ಅಪರೂಪದ ಬಹುಮುಖ ಪ್ರತಿಭಾವಂತ ಅಭಿನವರಾಮ್

10 ರ ಹರೆಯದ ಈ ಪೋರನಿಗೆ ಜಾದೂ ಅಂದರೆ ಅತ್ಯಂತ ಖುಷಿ. ಜಾದುವಿನ ಹಲವು ತಂತ್ರ, ಕೈಚಳಕ ಈತನಿಗೆ ಕರಗತವಾಗಿದೆ. ಜೊತೆಗೆ ಚಿತ್ರಕಲೆ, ಕ್ರಾಫ್ಟ್, ಕಲಿಕಾ ಮಾದರಿಯ ತಯಾರಿಕೆ, ವಿಜ್ಞಾನ ಮಾದರಿಯ ತಯಾರಿಕೆಯಲ್ಲೂ ಈತ ಎತ್ತಿದ ಕೈ! ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪಾತೂರಿನ ಸದ್ಯ ಕೊಪ್ಪಳದ ನಿವಾಸಿ ಕೆ.ರಾಘವೇಂದ್ರ ಭಟ್ ಮತ್ತು ಪ್ರಮೀಳಾ ಭಟ್ ದಂಪತಿಯ ಪುತ್ರ ಕೆ.ಆರ್.ಅಭಿನವ್‌ರಾಮ್ ಭಟ್ ಈ ಬಹುಮುಖ ಪ್ರತಿಭಾವಂತ. ಕೊಪ್ಪಳದ ಎಸ್.ಎಫ್.ಎಸ್‌. ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ, […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೪

ಅರಿವಿನ ಮೂರ್ತಿಗಳೆಲ್ಲರೂ ಈ ಅರಿವು ಇಂತೆಯೇ ನಿರರ್ಗಳವಾಗಿ ಮತ್ತೊಂದು ಮೂರ್ತಿವೆತ್ತು ತಲೆತಲಾಂತರಗಳವರೆಗೂ ಉಳಿದು ಗುರುಪರಂಪರೆಯನ್ನು ಮುಂದುವರೆಸಲು ಶ್ರಮಿಸಿದುದನ್ನು ಈ ಹಿಂದಿನಿಂದಲೂ ನೋಡುತ್ತಾ ಬಂದೆವು.  ಈಗ ಮಠವೆಂಬ ವ್ಯವಸ್ಥೆಯಲ್ಲಿ ಪೂಜ್ಯ ಚಿದ್ಬೋಧ ಭಾರತಿಗಳು ಸಹ ತಮ್ಮ ಅಂತ್ಯಕಾಲದಲ್ಲಿ ಶ್ರೀ ಶ್ರೀ ನಿತ್ಯಾನಂದರೆಂಬ ಯತಿಶ್ರೇಷ್ಠರಿಗೆ ಧರ್ಮಾಚಾರ್ಯ ಸ್ಥಾನವನ್ನಿತ್ತು ಪಾರಂಪರಿಕವಾದ ಎಲ್ಲ ಮಠೀಯವಾದ ಪದ್ಧತಿಗಳು, ನಡಾವಳಿಗಳ ಬಗ್ಗೆ ಸೂಕ್ತವಾದ ತಿಳುವಳಿಕೆ ನೀಡಿ, ಪರಂಪರೆಯ ಮುಂದುವರಿಕೆಗೆ ಸಾಧನರಾಗಿ ತಾವು ಬ್ರಹ್ಮೀಭೂತರಾದರು. ಅರಿವಿನ ತೋರ್ಪಡಿಕೆಯ ಸುಲಲಿತ ಮಾರ್ಗಕ್ಕಾಗಿ ಆದಿಶಂಕರರು ತಮ್ಮ ಪ್ರಧಾನ ಶಿಷ್ಯರಿಗೆ ಜ್ಞಾನ […]

Continue Reading

” ಶ್ರೀ ಗುರುಗಳ ಅಭಯಹಸ್ತವೇ ಬದುಕಿನ ಶ್ರೀರಕ್ಷೆ  ” : ಶಾರದಾ ಕೃಷ್ಣ , ಗಿರಿನಗರ

” ಶ್ರೀ ಮಠದ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವುದು ಜೀವನದ ಅತ್ಯಂತ  ಹರ್ಷದ ಕ್ಷಣಗಳು. ಆ ನೆಮ್ಮದಿಯ, ಸಂತಸದ ಕ್ಷಣಗಳನ್ನು ವರ್ಣಿಸಲು ಸಾಧ್ಯವಿಲ್ಲ. ಮನಸ್ಸಿನಲ್ಲೇ ಬೇಡಿದ್ದನ್ನೂ ನಮಗೆ ಅನುಗ್ರಹಿಸುವ ಶ್ರೀಗುರುಗಳ ಅಭಯಹಸ್ತವೇ ಬದುಕಿನ ಶ್ರೀರಕ್ಷೆ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ವಲಯದ ಶಾರದಾ ಕೃಷ್ಣ ಅವರು. ದೈತೋಟದ ಶಂಕರನಾರಾಯಣ ಭಟ್, ವೆಂಕಟೇಶ್ವರಿ ಅಮ್ಮ ಅವರ ಪುತ್ರಿಯಾದ ಶಾರದಾ ಅವರಿಗೆ ಬಾಲ್ಯದಿಂದಲೇ ಹಸುಕರುಗಳೆಂದರೆ ಅತ್ಯಂತ ಪ್ರಿಯ. ತವರುಮನೆಯಲ್ಲಿ ಏಳೆಂಟು ಹಸುಗಳ ಒಡನಾಟದಲ್ಲಿ ಬೆಳೆದ ಶಾರದಾ […]

Continue Reading

ಮನಮೋಹನನ ಕುಂಚದಲ್ಲಿ ಅರಳಿದ ಚಂದದ ಕಲಾಕೃತಿಗಳು

  ಪುತ್ತೂರಿನ ಯುವ ಕಲಾವಿದ ಪಿ.ಎಂ.ಮನಮೋಹನ ತನ್ನ ಕುಂಚದಲ್ಲಿ ಪ್ರತಿದಿನವೂ ವಿಭಿನ್ನ ಚಿತ್ರಗಳನ್ನು ಬಿಡಿಸುವ ಮೂಲಕ ಜನಮನ್ನಣೆ ಪಡೆಯುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕಲೆಯ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದ ಮನಮೋಹನ, ಚಿಕ್ಕಂದಿನಿಂದಲೇ ಬೇರೆ ಬೇರೆ ಪುಸ್ತಕಗಳನ್ನು ನೋಡಿ ಚಿತ್ರ ಬಿಡಿಸುವ, ಬಣ್ಣ ಹಚ್ಚುವ ಅಭ್ಯಾಸ ಮಾಡುತ್ತಾ ಅಂದಿನಿಂದಲೇ ಕಲೆಯ ಬಲೆಯಲ್ಲಿ ಬಂಧಿಯಾದರು. ಮೂಲತಃ ಪುತ್ತೂರು ತಾಲೂಕಿನ ಕಾವು ಪಾಲಾಶತಡ್ಕದ ಪಿ.ವಿ.ಮುರಳಿನರಸಿಂಹ ಮತ್ತು ವಿದ್ಯಾಭಾರತೀ ದಂಪತಿಯ ಪುತ್ರ ಮನಮೋಹನ, ಈಶ್ವರಮಂಗಲದ ಗಜಾನನ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೩

ಶ್ರೀಮದಾಚಾರ್ಯ ಶಂಕರ ಭಗವತ್ಪಾದರಿಂದಲೇ ರಘೂತ್ತಮ ಮಠದ ಪ್ರಥಮ ಪೀಠಾಧಿಪತಿಯಾಗಿ ಆಯ್ಕೆಗೊಂಡ ಶ್ರೀಮದಾಚಾರ್ಯ ವಿದ್ಯಾನಂದರಿಂದ ಅರಿವಿನ ದೆಸೆಗಾಗಿ ಅನೇಕ  ಲೋಕಕಲ್ಯಾಣ ಕಾರ್ಯಗಳು ಜರುಗಿದವಲ್ಲದೇ, ಅರಿವಿನ ಅವಿಚ್ಛಿನ್ನ ಹರಿವಿಗಾಗಿ ಚಿದ್ಬೋಧಭಾರತಿಗಳನ್ನು ಪರಂಪರೆಯ ಉತ್ತರಾಧಿಕಾರಿಯಾಗಿ ನೇಮಿಸುವ ಮೂಲಕ ಆ ಪರಮ ತತ್ವವನ್ನು ತೋರುವ  ಗುರುವಾಗಿರಿಸಿ ನಮಗೆ ಅನುಸರಣೀಯ ಕೇಂದ್ರವಾಗಿಸಿದರು. ನಂತರ ವಿದ್ಯಾನಂದರು ಪರಬ್ರಹ್ಮ ತತ್ವದಲ್ಲಿಯೇ ಮನವನ್ನು ನೆಲೆಗೊಳಿಸಿ ಬ್ರಹ್ಮಲೀನರಾದರು. ಈ ನಮ್ಮ ಮಠದ ಪ್ರಥಮ ಪೀಠಾಧಿಪತಿಯಾಗಿದ್ದ ಪೂಜ್ಯ ಶ್ರೀ ವಿದ್ಯಾನಂದಾಚಾರ್ಯರ ಸಮಾಧಿಯು ಗೋಕರ್ಣದ ಸಾಗರತೀರದಲ್ಲಿ ಶ್ರೀಮದ್ವಾಲ್ಮೀಕಿರಾಮಾಯಣದಲ್ಲಿ ಉಲ್ಲಿಖಿತವಾದ ವರುಣತೀರ್ಥದ ಬಳಿ ಸಂಸ್ಥಾಪಿತವಾಗಿದೆ. […]

Continue Reading

ಗೋಮಾತೆಯ ಸೇವೆಗೆ ಸಕಾರಾತ್ಮಕ ಸ್ಪಂದನೆ ದೊರಕಿದೆ : ಉಮಾ ಪಿ. ಶೇಡಿಗುಮ್ಮೆ

೨೦೧೯ ರ ಚಾತುರ್ಮಾಸ್ಯದ ಸಂದರ್ಭದಲ್ಲಿ ವಲಯ ಭಿಕ್ಷಾಸೇವೆಯ ದಿವಸ ಶ್ರೀಗುರುಗಳ ಆಶೀರ್ವಚನದ ಪ್ರೇರಣೆ ಹಾಗೂ ವಲಯ ಮಾತೃ ವಿಭಾಗ ಪ್ರಧಾನೆಯಾಗಿರುವ ಶಿವಕುಮಾರಿ ಕುಂಚಿನಡ್ಕ ಇವರ ಬೆಂಬಲದಿಂದಾಗಿ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದವರು ಶ್ರೀಮತಿ ಉಮಾ ಪಿ . ಶೇಡಿಗುಮ್ಮೆ . ಮುಳ್ಳೇರಿಯ ಮಂಡಲ, ಕುಂಬಳೆ ವಲಯ ಕಣಿಪುರ ಘಟಕದವರಾದ ಇವರು ಚೆರುವತ್ತೂರಿನ ಮಾಧವ ರಾವ್ ,ಸರಸ್ವತಿ ದಂಪತಿಗಳ ಪುತ್ರಿ ಹಾಗೂ ಶೇಡಿಗುಮ್ಮೆ ಗಣೇಶ್ ಕುಮಾರ್ ಅವರ ಪತ್ನಿ. ಎಂ.ಎಸ್ಸಿ, ಬಿ.ಎಡ್ ಪಧವೀಧರರಾಗಿರುವ ಇವರು ಕುಂಬಳೆಯ […]

Continue Reading

ಚದುರಂಗದ ಭರವಸೆಯ ಪ್ರತಿಭೆ ಇಶಾ ಶರ್ಮಾ

11 ನೇ ವಯಸ್ಸಿನಲ್ಲಿಯೇ ಚೆಸ್ ಆಟಕ್ಕೆ ಪಾದಾರ್ಪಣೆ ಈ ಪ್ರತಿಭೆ ಕೆಲಕಾಲ ವಿದ್ಯಾಭ್ಯಾಸವನ್ನೂ ನಿಲ್ಲಿಸಬೇಕಾಯಿತು. ಚದುರಂಗದಲ್ಲಿ ಏನಾದರೂ ಸಾಧಿಸಬೇಕೆಂಬ ಆಕೆಯ ಕನಸಿಗೆ ಪೋಷಕರ ಬೆಂಬಲವೂ ದೊರೆಯಿತು. ಇದೀಗ ತನ್ನ ಅವಿರತ ಪರಿಶ್ರಮದಿಂದ ಕರ್ನಾಟಕದ ಪ್ರಥಮ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ! ಇವರು ಇಶಾ ಶರ್ಮಾ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಡಾ. ಶ್ರೀಹರಿ ಹಾಗೂ ಡಾ.ವಿದ್ಯಾ ದಂಪತಿ ಪುತ್ರಿ. ಉಜಿರೆಯ ಎಸ್‌ಡಿಎಂ ಪದವಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಇಶಾ, ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೨

ಶ್ರೀ ಶಂಕರ ಭಗವತ್ಪಾದರಿಂದ  ಧೀ ಪ್ರಚೋದನೆಗೊಂಡು ಮಂಡನಮಿಶ್ರರಿಂದ ಸುರೇಶ್ವರಾಚಾರ್ಯರ ಎತ್ತರಕ್ಕೇರಿದ ಸುರೇಶ್ವರಾಚಾರ್ಯರು  ಶಂಕರರ ಅನುಯಾಯಿಯಾಗಿ ಅದ್ವೈತಮತದ ಪ್ರಸಾರಕರಾಗಿ ಗುರುಪರಂಪರೆಯ ಅವಿಚ್ಛಿನ್ನ ಹರಿವಿಗೆ ಅರಿವಿನ ಮೂರ್ತಿಯಾಗಿ  ಋಷ್ಯಶೃಂಗ ಪರ್ವತದ ಸನಿಹದ ತುಂಗಾ ತೀರದಲ್ಲಿ ಆಶ್ರಮವೊಂದನ್ನು ನಿರ್ಮಿಸಿ ನೆಲೆಗೊಂಡರು. ಶಂಕರಾಚಾರ್ಯರ ಆಣತಿಯ ಮೇರೆಗೆ ಒಬ್ಬ ಶಿಷ್ಯ ಶ್ರೇಷ್ಠನಿಗೆ ಸಂನ್ಯಾಸದೀಕ್ಷೆಯನ್ನು ನೀಡಿದರು. ಈ ಶಿಷ್ಯೋತ್ತಮರೇ ಮುಂದೆ ಶಂಕರಾಚಾರ್ಯರ ಆದೇಶದ ಮೇರೆಗೆ ದಕ್ಷಿಣದಲ್ಲಿ ನೆಲೆಗೊಂಡು  ಅವಿಚ್ಛಿನ್ನ ಅರಿವಿನ ಹರಿವಿಗೆ ಕೊಂಡಿಯಾಗಿ, ಗುರುಪರಂಪರೆಯ ಮುಂದುವರಿಕೆಯಾಗಿ ಕಂಗೊಳಿಸಿದರು. ಅವರೇ ಶ್ರೀ ವಿದ್ಯಾನಂದಾಚಾರ್ಯರು. ದಕ್ಷಿಣ ದಿಗ್ವಿಜಯಕ್ಕೆ ಆಗಮಿಸಿದ […]

Continue Reading

ಶ್ರೀಮಠದ ಸೇವೆಯಲ್ಲಿ ಬದುಕು ಪಾವನವಾಗುತ್ತಿದೆ : ಸುಲೋಚನ‌ ಗಿರಿನಗರ

  ” ಶ್ರೀಮಠದ, ಗೋಮಾತೆಯ, ಶ್ರೀಗುರುಗಳ ಸೇವೆ ಮಾಡಲು ನಮಗೆ ದೊರಕಿರುವ ಈ ಅವಕಾಶ ನಿಜಕ್ಕೂ ಪೂರ್ವ ಜನ್ಮದ ಸುಕೃತದಿಂದ ಲಭಿಸಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಶ್ರೀಗುರುಗಳ ಆಶೀರ್ವಾದ ಪಡೆದು ಆರಂಭಿಸುವ ಯಾವುದೇ ಕಾರ್ಯವಾದರೂ ಅತಿ ಶೀಘ್ರದಲ್ಲಿ ಫಲ ದೊರಕುತ್ತದೆ ಎಂಬ ಅನುಭವ ನನ್ನದು ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ವಲಯದ ಸುಲೋಚನ ಗಿರಿನಗರ. ಸಿದ್ಧಾಪುರ ತಾಲೂಕಿನ ಇಟಗಿ ಹೊನ್ನೆಮಡಿಕೆಯ ಭಾಸ್ಕರ ಗಣೇಶ ಹೆಗಡೆ ಹಾಗೂ ಸರೋಜಾ ಭಾಸ್ಕರ ಹೆಗಡೆಯವರ ಪುತ್ರಿಯಾದ ಸುಲೋಚನ […]

Continue Reading

ಭರವಸೆಯ ಯುವ ಚಿತ್ರ ಕಲಾವಿದ ಹರ್ಷ ಭಟ್ಟ….

ಕಲೆ ಎನ್ನುವುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವಂತೆ ಬುದ್ದಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಹೀಗೆ ಕಲೆಯಲ್ಲಿ ಬಂಧಿಯಾಗಿ ಕಲಾ ಲೋಕದಲ್ಲಿ ಹೆಜ್ಜೆ ಮೂಡಿಸುತ್ತಿರುವ ಪ್ರತಿಭೆ ಹರ್ಷ ಭಟ್ಟ ಕುಂಠಿಕಾನ. ಶಿಕಾರಿಪುರದಲ್ಲಿ ವಾಸವಾಗಿರುವ ಹರ್ಷ ಭಟ್ಟ, ಗಣಪತಿ ಭಟ್ ಮತ್ತು ಶಾಲಿನಿ ಭಟ್ ದಂಪತಿಗಳ ಪುತ್ರ. ಚಿಕ್ಕಂದಿನಿಂದಲೂ ಚಿತ್ರಕಲೆಯ ಕುರಿತು ವ್ಯಾಮೋಹ ಹೊಂದಿದ್ದ ಈ ಪ್ರತಿಭೆ ಇಂದು ತನ್ನ ಸತತ ಪ್ರಯತ್ನದ ಮೂಲಕ ಗಮನ ಸೆಳೆದಿದ್ದಾನೆ. ಪ್ರಾರಂಭದಲ್ಲಿ ಸ್ವ ಅಧ್ಯಯನದ ಮೂಲಕ ಚಿತ್ರಕಲೆಯನ್ನು ಸಿದ್ಧಿಸಿಕೊಂಡಾ ಈತ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೧

ಅರಿವಿನ ಅವಿಚ್ಛಿನ್ನ ಹರಿವಿಗೆ ಪೂರಕವಾದ ಗುರುಪರಂಪರೆಯ ಮುಂದುವರಿಕೆಗೆ ಸಾಧನಾ ತಂತಿಯಾಗಿ ಶಿಷ್ಯಶ್ರೇಷ್ಠರನ್ನು ಆಚಾರ್ಯ ಶಂಕರರು ಆಯ್ದು ಸಮಾಜಕ್ಕೆ ಅವರನ್ನು ಗುರುವಾಗಿ ಒದಗಿಸಿಕೊಟ್ಟಿದ್ದನ್ನು ಈ ಹಿಂದಿನ ಸಂಚಿಕೆಗಳಲ್ಲಿ ಅವಲೋಕಿಸಿದೆವು. ಇಂದು, ಅರಿವಿನ ಪರಂಜ್ಯೋತಿ ಪ್ರಾಪ್ತಿಗೆ ನೇರವಾಗಿ ಸಮಾಜದ ಎಲ್ಲ ವರ್ಗಗಳಿಗೂ, ಪ್ರತಿಯೊಬ್ಬನಿಗೂ ಅನುಕೂಲವಾಗುವಂತೆ  ಸಾಧನಾ ಮಾರ್ಗವಾಗಿ ಶಂಕರರು ರಚಿಸಿಕೊಟ್ಟ ರಚನೆಗಳನ್ನು ನೋಡೋಣ. ಬಹುಕಷ್ಟಸಾಧ್ಯ ಗ್ರಾಹ್ಯವಾದ ಅದ್ವೈತಸಿದ್ಧಾಂತವನ್ನು ಅರ್ಥೈಸಿ ಸಾಕ್ಷಾತ್ಕಾರಗೊಳಿಸಲು ಯೋಗ್ಯವಾದ ರಚನೆಗಳನ್ನು ರಚಿಸಿದರು. ಬ್ರಹ್ಮಸೂತ್ರ ಭಾಷ್ಯ, ಭಗವದ್ಗೀತೆಗೆ ಭಾಷ್ಯ ಮಹಾಮೇರು ರಚನೆಗಳಾದರೆ ಇನ್ನೂ ಕೆಲವಾದ ಅದ್ವೈತ ಪಂಚರತ್ನಂ ( […]

Continue Reading

ಅಶ್ವತ್ಥ ಎಲೆಯಲ್ಲಿ ಮೂಡಿ ಬಂದ ಶ್ರೀಸಂಸ್ಥಾನ

  ಕಲಾವಿದ ದೃಷ್ಟಿಕೋನದಲ್ಲಿ ಭಿನ್ನ ವಿಭಿನ್ನವಾಗಿ ಚಿತ್ರಗಳು ರಚನೆಯಾಗುತ್ತವೆ. ಸಣ್ಣ ಸಣ್ಣ ವಸ್ತುವಿಗೂ ಆಕರ್ಷಕ ರಚನೆ ಕೊಡುವ ಶಕ್ತಿ ಇರುವುದು ಕಲಾವಿದನಿಗೆ ಮಾತ್ರ. ಹೀಗಿರುವಾಗ ಇಂದು ಚಿಗುರಿ ನಾಳೆ ಬಿದ್ದು ಹೋಗುವ ಎಲೆಯಲ್ಲಿ ಶ್ರೀಗುರುಗಳ ಚಿತ್ರ ರಚಿಸಿ ಮೆಚ್ಚುಗೆ ಪಡೆದುಕೊಂಡಿರುವುದು ಪುತ್ತೂರು ತಾಲೂಕಿನ ಕಬಕ ವಲಯದ ಕಿರಣ್ ಸಬ್ಬಣಕೋಡಿ. ಸಮಯ ಮತ್ತು ತಾಳ್ಮೆ ಒಟ್ಟುಸೇರಿದಾಗ ಕಲಾವಿದ ಕೈಯ್ಯಲ್ಲಿ ಅದ್ಭುತವಾದ ಕೈಚಳಕ ನಡೆಯುತ್ತದೆ. ಇದಕ್ಕೆ ಸಾಕ್ಷಿ ಅಶ್ವತ್ಥ ಎಲೆಯಲ್ಲಿ ಸೂಕ್ಷ್ಮವಾಗಿ ರಚನೆ ಆಗಿರುವ ಶ್ರೀಗಳ ಚಿತ್ರ. ಇದೊಂದು ಸೂಕ್ಷ್ಮದ […]

Continue Reading

” ಸದಾ ಶ್ರೀಮಠದ ಸೇವೆಗೆ ತುಡಿಯುತ್ತಿದೆ ಮನಸ್ಸು ” : ವಿಜಯಾ ಸರ್ಪಂಗಳ

” ಶ್ರೀಗುರುಗಳ ಗೋಪ್ರೇಮ, ಗೋಮಾತೆಯ ರಕ್ಷಣೆಗಾಗಿ ಶ್ರೀ ಸಂಸ್ಥಾನದವರು ಕೈಗೊಂಡ ವಿವಿಧ ಯೋಜನೆಗಳು‌ ಹಾಗೂ ಶ್ರೀಮಠದ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳಬೇಕೆಂಬ ಹಂಬಲ ‘ ಇವುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇರಿಕೊಂಡೆ. ಈಗಾಗಲೇ ಒಂದು ವರ್ಷದ ಗುರಿ ತಲುಪಿರುವೆ. ಇನ್ನೊಂದು ವರ್ಷದ ಗುರಿ ತಲುಪುವ ಭರವಸೆಯಿದೆ ” ಎನ್ನುತ್ತಾರೆ ಮೂಲತಃ ಕಾಸರಗೋಡಿನ ಸರ್ಪಂಗಳದವರಾದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಶ್ರೀ ಅನ್ನಪೂರ್ಣೇಶ್ವರಿ ವಲಯ ನಿವಾಸಿಗಳಾಗಿರುವ ಎಸ್. ರಾಮಚಂದ್ರ ಭಟ್ಟರ ಪತ್ನಿ ವಿಜಯಾ ಸರ್ಪಂಗಳ ಅವರು. ಹಾಡು,ಸಂಗೀತ, ಹೊಲಿಗೆ, ಕಸೂತಿಗಳಲ್ಲಿ […]

Continue Reading

ವಿಕ್ರಮ್‌ಗೆ ಒಲಿದ ಸಂಗೀತ…..

ಪ್ರಪಂಚದಲ್ಲಿ ನಾನಾ ಕಲೆಗಳಿದ್ದರೂ ಸಂಗೀತದ ಆಕರ್ಷಣೆಯೇ ವಿಭಿನ್ನ. ಇಂತಹ ಸಂಗೀತದ ವಿವಿಧ ಪ್ರಕಾರಗಳನ್ನು ಒಲಿಸಿಕೊಂಡಿರುವ ವಿಶಿಷ್ಟ ಪ್ರತಿಭೆ ಕೊಳ್ಯೂರಿನ ವಿಕ್ರಮ್ ಭಾರಧ್ವಾಜ್.ಮಂಗಳೂರು ಮಂಡಲದ ಕೊಳ್ಯೂರು ವಲಯದ ವೆಂಕಟೇಶ ಪ್ರಸಾದ್ ಮತ್ತು ಸ್ವಪ್ನಾ ಎಂ. ದಂಪತಿಯ ಪುತ್ರ ವಿಕ್ರಮ್ ಭಾರದ್ವಾಜ್ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸಿನ ಮೆಟ್ಟಿಲೇರಿದ್ದಾನೆ.ಹಲವಾರು ಟಿವಿ ಶೋಗಳು, ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿಕ್ರಮ್, ವಿ.ಶಿಲ್ಪಾ ಭಟ್ ಅವರಲ್ಲಿ ಶಾಸ್ತ್ರೀಯ ಸಂಗೀತವನ್ನು ಮತ್ತು ವಿ.ಎಂ.ಟಿ.ಗಿರಿ ಅವರ ಬಳಿ ಭಾವಗೀತೆ, ಚಿತ್ರಗೀತೆ ಅಭ್ಯಾಸ ನಡೆಸಿದ್ದಾನೆ. ¶ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳೇ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೦

ಗುರುಪರಂಪರೆಯ ಉಳಿವಿಗೇ ಬುನಾದಿಯಾದ ಆಚಾರ್ಯ ಶಂಕರರು ಅರಿವಿನ ಬೆಳಕನ್ನು ಜಗಪೂರ್ತಿ ನೀಡಲಿಕ್ಕೋಸ್ಕರ ಶ್ರೇಷ್ಠ ಶಿಷ್ಯರನ್ನೂ ಸಹ ತಮ್ಮಂತೆಯೇ ‘ಗುರು’ ಎಂಬ ಪಟ್ಟಕ್ಕೆ ಏರುವಂತಹ ಯೋಗ್ಯತೆಯನ್ನು  ಕೊಡಿಸಿದರು ಎಂದು ವಿಶ್ಲೇಷಿಸುತ್ತಾ ಮೂರು ಜನ ಶಿಷ್ಯರ ಕುರಿತು ನೋಡಿದೆವು. ಗುರುಸೇವೆಯು ಸಾಧಾರಣನನ್ನೂ ಗುರುತ್ವಕ್ಕೇರಿಸಬಲ್ಲದು ಎಂಬುದಕ್ಕೆ  ಅನುಪಮ ಉದಾಹರಣೆಯಾಗಿ ಈ ಸಂಚಿಕೆಯಲ್ಲಿ ಸಾಮಾನ್ಯ ಬುದ್ಧಿಯುಳ್ಳ ಅಪ್ರತಿಮ ಸೇವಾಭಾವಿ ಸಚ್ಛಿಷ್ಯನಿಗೆ ಶಂಕರರಿಂದ ಆದ ಅರಿವಿನ ಹರಿವನ್ನು ನೋಡೋಣ. ಆಚಾರ್ಯರು ಶೃಂಗೇರಿಯಲ್ಲಿದ್ದಷ್ಟು ಕಾಲವೂ ತಮ್ಮ ಭಾಷ್ಯಗ್ರಂಥಗಳನ್ನು ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಆಗ ಒಬ್ಬ ಶಿಷ್ಯನು […]

Continue Reading

ಶ್ರೀಗುರುಗಳ ಕಾರುಣ್ಯದಿಂದ ಬದುಕಿನಲ್ಲಿ ಪವಾಡವೇ ನಡೆದಿದೆ: ಮಹಾದೇವಿ ಎಸ್‌ . ಭಟ್

  “ಶ್ರೀಗುರುಗಳ ಅನುಗ್ರಹವೊಂದಿದ್ದರೆ ಅಸಾಧ್ಯವಾದ ಯಾವ ಕಾರ್ಯವೂ ಇಲ್ಲ.‌ಗುರುವೊಲಿದರೆ ಕೊರಡು ಕೊನರುವುದು. ಇದಕ್ಕೆ ನನ್ನ ಬದುಕಿನಲ್ಲಿ ನಡೆದ ಸತ್ಯ ಘಟನೆಗಳೇ ಸಾಕ್ಷಿ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಕುಮಟಾ ಮಂಡಲದ, ಗುಡೇ ಅಂಗಡಿ ವಲಯದ ದೇವನಿ ಮನೆತನದ ಸೀತಾರಾಮ ಅನಂತ ಭಟ್ಟರ ಪತ್ನಿ ಮಹಾದೇವಿ ಎಸ್. ಭಟ್ . ಸಾಲಕೋಡು ಗ್ರಾಮದ ಕೆರೆಕೋಣ ವೆಂಕಟೇಶ ಹೆಗಡೆ ಮತ್ತು ಸುಬ್ಬಿ ಅವರ ಪುತ್ರಿಯಾದ ಮಹಾದೇವಿ ಅವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿತ್ತು. ಹಿಂದಿನ ಗುರುಗಳ ಕಾಲದಿಂದಲೂ ಇವರ ತವರುಮನೆಯವರು ಶ್ರೀಮಠದ […]

Continue Reading